tag:blogger.com,1999:blog-62136761714482218722024-02-20T14:24:54.076-08:00ದೇವಕಿದೇವಕಿhttp://www.blogger.com/profile/06098925153781447704noreply@blogger.comBlogger47125tag:blogger.com,1999:blog-6213676171448221872.post-84582451283066993312010-08-26T20:30:00.000-07:002010-08-26T04:35:20.023-07:00ಪ್ರೀತಿ ನರಳಿದರೆ ಹೋವು ಅರಳೊಲ್ಲ ವಾಸು..ವಾಸು ನೀನು ಬದುಕಿನ ಮುಖ್ಯ ತಿರುವಿನಲ್ಲಿ ಸಂಭ್ರಮದ ಭಾವಗೀತೆ ಪಲ್ಲವಿಸುವಾಗ ಅಪಸ್ವರದ ಉನ್ಮಾದ ಹೊರಡಿಸುವವನು, ವಾಸು ನೀನು ಬದುಕಿನ ಮುಖ್ಯ ತಿರುವಿನಲ್ಲಿ ನನ್ನ ಕೈ ಹಿಡಿಯದೇ ಹೋದವನು, ವಾಸು ನೀನು ಪ್ರೀತಿಯ ಹೆಸರಲ್ಲಿ ಕೈಗೆ ಮೋಸದ ಸರಕು ತುಂಬಿಸಲು ಬಂದವನು ಕಣೋ. ವಾಸು ಕಣ್ಣು ಪ್ರೀತಿಯ ದಾರಿ, ಹೃದಯ ಪ್ರೀತಿಯ ಸ್ವರ್ಗ, ಕನಸು ಪ್ರೀತಿಯ ಹೊರಪ್ರಪಂಚ, ಅಲ್ಲಿ ಮಿಡಿಯುವ ಭಾವನೆಗಳೇ ಬದುಕಿನ ಸಂಗೀತ ಅಂತಾರೆ, ಆದರೆ ಈ ಕಣ್ಣೀರಿದೆಯಲ್ಲ ವಾಸು, ಅದು ನಿಜವಾದ ಪ್ರೀತಿಯ ಉಡುಗೊರೆಯಂತೆ ಕಣೊ, ಅಂತಹ ಕಣ್ಣ ಹನಿಗಳನ್ನ ದುಃಖದ ಸಂಕೇತವನ್ನ ಮಾಡಿದವ ನೀನು. ಈಗ ನನ್ನಿಂದ ಜಾರುವ ನಾಲ್ಕು ಹನಿಗಳು ಯಾಕೋ ಅರ್ಥ ಕಳೆದುಕೊಳ್ಳುತ್ತಿವೆ ವಾಸು, ಈ ಬದುಕಿಗೆ ಒಂದು ಅರ್ಥ ತಂದವನೂ ನೀನೆ, ಅದಕ್ಕೊಂದು ಅರ್ಥವಿಲ್ಲದಂತೆ ಮಾಡಿದವನೂ ನೀನೆ ವಾಸು. ಪ್ರತಿ ಕ್ಷಣಗಳೂ ನಗುವಿನ ಕುರಿತೇ ಮಾತನಾಡುತ್ತಿದ್ದ ನೀನು ಇಂದ್ಯಾಕೊ ಕಣ್ಣೀರ ಕಡಲಿಗೆ ನೂಕಿಬಿಟ್ಟೆ?<br /><br />ನೀನಡವೆ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಹಾಡಿನ ಸಾಲುಗಳು ಈ ದೇವಕಿಯ ಗುಂಡಿಗೆಯ ಜೀವವಾಹಿನಿಯಾಗಿ ಹರಿದಿದ್ದವು, ಆದರೆ ಈಗ? ಪಾಪ ಯಾರದೋ ಪರಿತಾಪ ಯಾರದೋ ಎಂಬಂತೆ ಕಂಡ ನನ್ನ ಕನಸುಗಳನ್ನೆಲ್ಲ ಕರುಣೆಯಿಲ್ಲದೇ ಹೊಸಕಿ ಹಾಕಲು ಮನಸ್ಸಾದರೂ ಹೇಗೆ ಬಂತು ? ಬೆಟ್ಟದಂತಾ ಅಪರಾಧವನ್ನೂ ನಮ್ಮ ಪ್ರೀತಿಯ ನದಿಯ ಮಧ್ಯೆ ಅಣೆಕಟ್ಟೆಯಂತೆ ಕಟ್ಟಿಬಿಟ್ಟೆ, ಇಂಥ ಕಲ್ಲು ಮನಸ್ಸು ನಿನಗೆ ಬೇಕಿತ್ತ ವಾಸು? ನಮ್ಮ ಪ್ರೀತಿಗೆ ಮಮತೆಯ ಜೋಗುಳದ ಹಾಡು ಬೇಕಿತ್ತೇ ವಿನಹ ಪಲ್ಲವಿ ಚರಣಗಳಿಲ್ಲದ ಹಾಡಲ್ಲ, ಇಲ್ಲಿಗೆ ಎಲ್ಲದಕ್ಕೂ ಫುಲ್ ಸ್ಟಾಪ್ ಹಾಕ್ತ ಇದ್ದೀನಿ ವಾಸು . ನಾನಂದುಕೊಂಡ ಹಾಗೆ ಏನೂ ನಡೆಯಲಿಲ್ಲ. ಹಾಗಂತ ತುಂಬ ದೊಡ್ಡದನ್ನೇನು ಬಯಸಿರಲಿಲ್ಲ. ಇಲ್ಲಿಯವರೆಗೆ ಪ್ರೀತಿಪೂರ್ವಕವಾಗಿಯೇ ಕೆಲವು ನೋವುಗಳನ್ನ ಅಪ್ಪಿಕೊಂಡು ಬದುಕಿದೆ ಅದೆಲ್ಲವೂ ನಿನಗಾಗಿ ಅಂತ ನಿನಗೇ ಗೊತ್ತಿದೆ.<br /><br />ಜಗತ್ತಲ್ಲಿ ಯಾವ ನೋವನ್ನಾದರೂ ಅನುಭವಿಸಬಹುದೇನೋ.. ಆದರೇ ಪ್ರೀತಿಸಿದವರ ನಂಬಿಕೆ ದ್ರೋಹ ? ಬೇಡ ಬಿಡು ಹೆಚ್ಚಿನದೇನನ್ನೂ ಬರೆಯಲಾಗುತ್ತಿಲ್ಲ. ದಿನಕ್ಕೊಂದು ಪತ್ರವನ್ನ ದೇವಕಿಯ ಮಡಿಲಿಗೆ ಹಾಕುತ್ತಿದ್ದ ನನ್ನ ವಾಸು, ಕೇವಲ ಒಂದೇ ಒಂದು ಸಾಲು ಬರೆಯಲಾಗದೇ ಖಾಲಿಯಾಗಿದ್ದಾನೆ ಅನ್ನುವುದು ಈ ದೇವಕಿಗೆ ಗೊತ್ತಾಗಿದೆ. .ಇಲ್ಲಿ ದೇವರ ಕ್ರೂರ ದೃಷ್ಟಿ ಇರಬಹುದು, ಪ್ರೀತಿಯ ನಿರ್ಧಯಿ ಹಂತಕನಾದ ನಿನ್ನ ಪ್ರೀತಿಯ ಮುಖವಾಡವಿರಲೂಬಹುದು, ಅಥವ ಈ ಜಗತ್ತಿನಲ್ಲಿ ಒಂದು ಸಣ್ಣ ಖುಷಿಯನ್ನೂ ಅನುಭವಿಸಲಾರದ ಈ ಖೊಟ್ಟಿ ನಸೀಬು ಇದ್ದರೂ ಇರಬಹುದು, ದೇವರೇ ಇಂತ ಯಾತನಮಯ ಸಮಯ ಜಗತ್ತಿನ ಯಾವ ಜೀವಕ್ಕೂ ಬೇಡ. ನಿಂಗೆ ಒಂದ್ ಮಾತು ಹೇಳ್ಬೇಕು ನಾನು... ಏನ್ ಗೊತ್ತ ವಾಸು, ನಿರ್ಮಲವಾದ ಪ್ರೀತಿ ನರಳಿದರೆ ಈ ಬದುಕಿನಲ್ಲಿ ಯಾವ ಹೂವುಗಳು ಅರಳೋದಿಲ್ಲ ವಾಸು.<br /><br />ಇಂತಿ ನಿನ್ನ (?) ದೇವಕಿದೇವಕಿhttp://www.blogger.com/profile/06098925153781447704noreply@blogger.com8tag:blogger.com,1999:blog-6213676171448221872.post-20901562906758185732009-10-27T22:16:00.000-07:002009-10-28T01:12:32.524-07:00ನನ್ನ ಜಗತ್ತು ಅಂದರೆ "ನಾನು ಮತ್ತು ನೀನು", ಅಷ್ಟೇ!ದೇವಕೀ, ನಮಗಿದ್ದ ಕನಸು ಒಂದೇ..<br />ಆ ಕನಸಿನ ಹೆಸರು "ನಾವಿಬ್ಬರು!"<br />ಕಟ್ಟೋ ಕನಸಾಗಲಿ ಹುಟ್ಟೋ ಹಾಡಾಗಲಿ ಇಬ್ಬರೇ ಮೂಡಿಸಬೇಕು. ಬದುಕಿನ ದಾರಿ ಅದೆಷ್ಟು ದೂರವಿದ್ದರೂ ನಾವಿಬ್ಬರೇ ಕಿರುಬೆರಳ ಜೊತೆಗೂಡಿಸಿ ಸವೆಸಬೇಕು. ಅಂಗಳದಲಿ ನಿನ್ನ ಅವಿಷ್ಟೂ ಹೆಜ್ಜೆಗುರುತುಗಳಿಗೆ ನನ್ನ ಪಾದಗುರುತೇ ಸಾಥ್ ನೀಡಬೇಕು. ಒಂದಿಷ್ಟು ದುಃಖವಾಗಿ ಒಂದೆರಡು ಹನಿ ಜಾರಿದರೂ ನನ್ನ ಕಂಗಳ ಮೇಲೆ ನಿನ್ನ, ನಿನ್ನ ಕಂಗಳ ಮೇಲೆ ನನ್ನ ಬೆರಳುಗಳು ಮಾತ್ರ ಮೂಡಬೇಕು. ನಮ್ಮಿಬ್ಬರ ಕಷ್ಟಗಳಿಗೆ ನಾವಿಬ್ಬರೇ ತಾಗಿಕೊಳ್ಳಬೇಕು. ಬದುಕಿನ ಬವಣೆಗಳಿಗೆ ನಾವಿಬ್ಬರೆ ನಮ್ಮನ್ನ ಭಾಗಿಸಿಕೊಳ್ಳಬೇಕು ; ಗುಣಿಸಿಕೊಳ್ಳಬೇಕು.<br /><br />ಇದಿಷ್ಟೇ ಈ ವಾಸು ದೇವರ ಮುಂದಿಟ್ಟಿದ್ದ ಬೇಡಿಕೆ!<br /><br />ದೇವರಿಗೆ ನನ್ನ ಮೇಲೆ ಕೋಪ ಬಂದಿರಬೇಕು. ನಾನು ಕಂಡ ಯಾವ ಕನಸುಗಳನ್ನು ನನ್ನ ಎದೆಯ ಮೇಲೆ ಮೂಡಲು ಬಿಡುತ್ತಿಲ್ಲ. ಕೈಯ್ಯ ಯಾವ ಗೆರೆಯೂ ಬದುಕನ್ನು ದೇವಕಿಯತ್ತ ಕರೆದೊಯ್ಯುತ್ತಿಲ್ಲ. ಹಣೆಯಬರಹದ ಒಂದು ಅಕ್ಷರವೂ ನಿನ್ನತ್ತ ವಾಲುತ್ತಿಲ್ಲ. ನಿಜವಾಗಿಯೂ ನನಗೆ ಬೇಕಿರುವ ಒಪ್ಪಿಗೆ ಖಂಡಿತಾ ಆ ದೇವರದ್ದಲ್ಲ. ನನ್ನ ದೇವಕಿಯದು. ಕೇವಲ ನಿನ್ನದು. ನಿನ್ನ ಒಂದು ಚಿಕ್ಕ ಕಣ್ಣಿನ ಇಷಾರೆ ನನ್ನ ಜೀವನಪೂರ್ತಿ ನಡೆಸಬಲ್ಲುದು, ಇಡೀ ಬಾಳನ್ನು ಹಸನಾಗಿಸಬಲ್ಲದು. ಪುಟ್ಟ ಕಿರುನಗೆ ನನ್ನ ಇಡೀ ದಿನವನ್ನು ಹೂವಿನಂತೆ ಅರಳಿಸಬಲ್ಲುದು. ಹೀಗಿರುವಾಗ ನಾನ್ಯಾಕೆ ದೇವರ ಮುಂದೆ ನನ್ನ ಜೋಳಿಗೆ ಇಟ್ಟು ಬೇಡಿತ್ತಿದ್ದೇನೆ?<br /><br /><br />ದೇವಕೀ, ನನ್ನ ಇಡೀ ಬದುಕನ್ನು ಬರೀ ನಿನ್ನ ಜತೆ ಕಳೆಯಬೇಕಿದೆ. ನನ್ನ ಖುಷಿಯ ಕಣಕಣವನ್ನೂ ನಿನ್ನ ಬದುಕಿಗೆ ಸುರಿಯಬೇಕಿದೆ, ದುಃಖ ಮಾತ್ರ ಇರುವೆಯ ಪಾದದಷ್ಟೂ ನಿನಗೆ ಸೋಕಿಸದಂತೆ ಬಾಳಬೇಕಿದೆ. ಅದಕ್ಕಾಗಿ ನನ್ನ ಬದುಕನ್ನು ಕೇವಲ ನಿನ್ನ ಜತೆಯಷ್ಟೇ ಹಂಚಿಕೊಳ್ಳಬೇಕಿದೆ. ದೇವರು ಒಪ್ಪದಿದ್ದರೇ ಭಾರವಾದ ಎದೆಯಿಂದ ಒಂದಿಷ್ಟು ಶಪಿಸಬೇಕಿದೆ. ಒಪ್ಪಿದರೆ ನಿನ್ನ ಜೊತೆಗೂಡಿ ಒಂದಿಷ್ಟು ಸುತ್ತುಗಳ ಸುತ್ತಬೇಕಿದೆ. ಮತ್ತಷ್ಟು ಕನಸುಗಳನ್ನು ಬಿತ್ತಬೇಕಿದೆ.<br /><br />ಇದಕ್ಕೆ ನಿನ್ನ ಸಹಾಯ ಅಗತ್ಯ. ನಿನ್ನ ಸಾಥ್ ಅಮೂಲ್ಯ.<br />ಪ್ಲೀಸ್, ನನಗೆ ಸಹಾಯ ಮಾಡ್ತೀಯಾ ಅಲ್ಚಾದೇವಕಿhttp://www.blogger.com/profile/06098925153781447704noreply@blogger.com17tag:blogger.com,1999:blog-6213676171448221872.post-28288101897272870752009-10-04T22:56:00.000-07:002009-10-04T22:59:07.846-07:00ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು...!ನನ್ನ ಪ್ರಪಂಚ ತುಂಬ ಚಿಕ್ಕದು.<br /><br />ಇಲ್ಲಿ ದೇವಕಿ ಎಂಬ ಮೂರಕ್ಷರದ ಅಸ್ತಿತ್ವ ಬಿಟ್ಟರೆ ಬೇರೆ ಅಂಥಾ ವಿಶೇಷಗಳಿಲ್ಲ. ಅಲ್ಲಲ್ಲ, ಬೇರೆ ವಿಶೇಷಗಳೇ ಇಲ್ಲ. ಯಾರ ಕಾಲ್ ಬಂದರೂ ನಿನ್ನದಿರಬಹುದೆಂಬ ನಿರೀಕ್ಷೆಯಿಂದಲೇ ಫೋನ್ ಎತ್ತಲ್ಪಡುತ್ತದೆ. ನನ್ನೊಳಗಿನ ಸಿಕ್ತ್ ಸೆನ್ಸ್ ದಿನಾ ನೀನು ಬರಬಹುದೆಂಬ ಸೂಚನೆ ನೀಡುತ್ತಿರುತ್ತದೆ. ನನ್ನೆಡೆಗೆ ಬರುವ ಎಲ್ಲಾ ದಾರಿಯ ತಿರುವಲ್ಲಿ ಸದಾ ನಿನ್ನ ಬಿಂಬ. ದಿನವಿಡೀ ಕಾದ ಮನವು ಸಂಜೆ ನೀ ಬಾರದೇ ಇರಬಹುದಾದ ಭಯದಿಂದ ಬಂಜೆಯಾಗುತ್ತದೆ. ರಾತ್ರಿಯೆಂದರೆ ಬಾನು ಚುಕ್ಕಿ ಜೋಡಿಸುವ ಹುಡುಗಿಗೆ ಕಾದ ಅಂಗಳ. ಅಲ್ಲೂ ಕಾಯುವಿಕೆಯೇ ಕಣ್ಕುಕ್ಕುತ್ತದೆ.<br /><br />ನಿಜ, ಈ ಜಗತ್ತಿನಲ್ಲಿ ಎಲ್ಲಾ ಕಾಯುತ್ತಿದ್ದಾರೆ, ಏನೋ ಒಂದಕ್ಕೆ. ವೈಟಿಂಗ್ ಫಾರ್ ಗೋಡೋ ನಾಟಕದಲ್ಲಿ ಗೋಡೋ ಗೆ ಕಾಯ್ವಂತೆ. ಸುಖಕ್ಕೆ, ಪ್ರಮೋಶನ್ ಗೆ, ರೇಶನ್ ಗೆ, ಬೆಲೆ ಇಳಿಕೆಗೆ, ಇನ್ನೊಂದು ಇಲೆಕ್ಷನ್ ಗೆ, ಪ್ರೀತಿಗೆ, ನೋವಿನ ನಿವಾರಣೆಗೆ, ಒಳ್ಳೆಯ ಕನಸಿಗೆ, ಕನಸು ನನಸಾಗುವ ಘಳಿಗೆಗೆ, ಗೆಲುವಿಗೆ..<br /><br />ಕೊನೆಗೆ ಕೆಲವರು ಸಾವಿಗೂ!<br /><br />ನೀರೊಳಗೆ ಮುಳುಗಿರುವವನು ಉಸಿರು ಬಯಸುವಷ್ಟು ನಿನ್ನ ಇಷ್ಟಪಡ್ತಿದೀನಿ ಅನ್ನಿಸ್ತಿದೆ. ನಿನ್ನ ಇಷ್ಟಪಡುವುದು ನನ್ನ ಕನಸು ಅಲ್ಲ, ಬದುಕು! ಕಾಲ ನನ್ನನು ಕರೆದೊಯ್ಯುವ ಕೊನೆಘಳಿಗೆಯ ಕೊನೆಯ ತಿರುವಿನಲ್ಲೂ ನಿನ್ನ ಒಂದು ನಗುವಿಗೆ, ನಿನ್ನ ಬರುವಿಕೆಗೆ ಕಾಯ್ತೀನಿ.<br /><br />ಒಂದು ಮಿಸ್ಡ್ ಕಾಲ್ ಸಾಕು. ಒಂದು ಪುಟ್ಟ ಗೆಳೆತನ ಸಾಕು. ನನ್ನೆಡೆಗಿನ ಒಂದಿಷ್ಟು ಕಾಳಜಿ, ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು,<br /><br />ದೇವರು ನನಗಿತ್ತ ಬದುಕನ್ನು ಸಾರ್ಥಕಗೊಳಿಸಿದ್ದೇನೆಂದು ಅವನಿಗೆ ತಿಳಿಸೋಕೆ ಏನಾದರೂ ಒಂದು ಮಾಡು ಸಾಕು ದೇವಕಿ. ಮುಂದಿನ ಅದಷ್ಟೂ ಜನ್ಮಕ್ಕೆ ನಿನ್ನ ಋಣದಲ್ಲಿರ್ತೀನಿ.<br /><br />ಇದೊಂದು ಸಹಾಯ ಮಾಡ್ತೀಯಾ ಅಲ್ವ?ದೇವಕಿhttp://www.blogger.com/profile/06098925153781447704noreply@blogger.com5tag:blogger.com,1999:blog-6213676171448221872.post-88543724085574204912009-09-25T02:28:00.000-07:002009-09-25T03:49:37.267-07:00ಸ್ವಲ್ಪ ಗಟ್ಟಿಯಾಗಿ ಸ್ವಾಮೀ ಅಂದ್ರುನಾನು ದೇವಕಿ ಮೇಲೆ ತುಂಬಾ ಸಿಟ್ಟಾಗಿದ್ದೀನಿ ...ಆದರೆ ಅವಳನ್ನು ನೋಯಸೋದಿಲ್ಲ , ಬದಲಾಗಿ ನನ್ನನ್ನು ನಾನು ಫನಿಶ್ ಮಾಡ್ಕೋತೀನಿ.... ಹೇಗೆ ಅಂದ್ರೆ ಹಳೆಯ ನಮ್ಮೊಲವಿನ ಆತ್ಮೀಯ ಕ್ಷ್ಯಣಗಳನ್ನು ನೆನೆಸಿಕೊಳ್ಳುತ್ತ. ಕಳಕೊಂಡ ವ್ಯಕ್ತಿಗೆ ಕಾಡುವ ನೆನಪುಗಳ ಶಿಕ್ಷ್ಯೆಗಿಂತ ಹೆಚ್ಚಿನ ಶಿಕ್ಷ್ಯೆ ಯಾವುದೂ ಇಲ್ಲ ಅನ್ನುವುದು ನನ್ನ ನಂಬಿಕೆ.<br />ರಘುನಂದನ್ ಮೇಲೆ ಸೇಡು ತೀರಿಸ್ಕೋಬೇಕು ಅಂತ ನನ್ನ ಗೇಳೆಯ ಲೋಕೇಶ್ ನಾಯ್ಡು ಸಲಹೆ ಕೊಟ್ಟ ,ಸಲಹೆಯಲ್ಲಿ ತಪ್ಪಿಲ್ಲ...ಅವನು ಹೇಳಿದ ಲಾಯರನ್ನು ಬೇಟಿಯಾಗಿ ಸಲಹೆ ಕೇಳಿದಾಗ ಕ್ರಿಮಿನಲ್ಸಳ ಒಂದಷ್ಟು ಕಥೆ ಹೇಳಿದ್ರು.... ಎಲ್ಲರೂ ಸಮಾಜಕ್ಕೆ ಗುಮ್ಮಗಳಾಗಿ ಕಾಡೊ ರೂಪದವರೇ... ನಾನು ಅವರ ಹಾಗೆ ಆಗೋ ಯೋಚನೆ ಅಸಹ್ಯ ಅನ್ನಿಸ್ತು.<br /> ಲಾಯರ್ ಹೇಳಿದ ಮಾತುಗಳು ತುಂಬಾನೆ ಸತ್ಯ ಅನ್ನಿಸೋಕೆ ಶುರುವಾಗಿದೆ.<br />೨೦ರೊಳಗೆ ವಯಸ್ಸಿನ ಹೆಚ್ಚಿನ ಸಂಖ್ಯೆಯ ಪ್ರೆಮಿಗಳಲ್ಲಿರೋದು ಅಟ್ರಾಕ್ಷನ್.ಅದಕ್ಕೊಂದಷ್ಟು ಅಂದ ಚಂದ ಸ್ಟೈಲ್ ಗಳ ಮಸಾಲ ರೊಮ್ಯಾನ್ಸ್ ನ ಚುರುಮುರಿ ಫೀಲ್...ಇವಿಷ್ಟಕ್ಕೆ ಖುಶಿ೯ ಪಟ್ಟು ಜೇವನ ತುಂಬಾ ಚೆನ್ನಾಗಿದೆ... ಎಂಜಾಯ್ ಅನ್ನುವ ಪದದ ಫ್ರೇಮಿನ ಒಳಗೆ ಕಲರ್ಫುಲ್ ಆಗಿರ್ತಾರೆ.<br />ಆದರೆ ನಂತರದ ವಯಸ್ಸಿನ ಪ್ರೀತಿಯಲ್ಲಿ ಅಥವಾ ಹುಡುಗಿಯ ಬಯಕೆಯಲ್ಲಿ ತನ್ನನ್ನು ಪ್ರೀತಿಸೋ ಹುಡುಗನ ಅಂದ ಚೆಂದದ ಬಗ್ಗೆ ಸ್ಟೈಲ್ ಬಗ್ಗೆ ಅವಳ ಆಸಕ್ತಿ ಕಡಿಮೆ ಪರ್ಸೆಂಟೇಜಿನಲ್ಲಿರುತ್ತದೆ. ಮತ್ತು ಅವಳು ಭವಿಷ್ಯದ ಭದ್ರತೆಗೆ ಹೆಚ್ಚು ಒತ್ತುಕೊಡುತ್ತಾಳೆ.ಹುಡುಗ ತೀರಾ ಚೆನ್ನಾಗಿಲ್ದೇ ಇದ್ರ್ತೂ ಪರ್ವಾಗಿಲ್ಲ ಸ್ವಲ್ಪ ಡೀಸೆಂಟಾಗಿದ್ದು ಆರ್ಥಿಕವಾಗಿ ಸ್ಟ್ರೋಂಗ್ ಇರ್ಬೇಕೂಂತ ಬಯಸ್ತಾಳೆ....ನಿಮ್ಮ ಹುಡುಗಿ ಯಾವರೀತಿಯ ಯೋಚನೆಯವರು ತಿಳ್ಕೊಂಡಿದ್ದೀರಾ ಯೋಚಿಸಿ ನಿರ್ಧಾರ ತಗೊಳ್ಳಿ....ಪ್ರೀತಿಸಿದ ಹುಡುಗಿ ಕೈ ಕೊಟ್ಲು ಅಂದ ಮಾತ್ರಕ್ಕೆ ನಿಮ್ಮಹುಟ್ಟಿನ ಸಾರ್ಥಕತೆಯ ಲೆಕ್ಕ ಚುಕ್ತಾ ಆಯಿತು ಅಂದ್ಕೋಬೇಡಿ...ದುರಂತ ಆಗೋದು ನಿಮ್ಮ ಜೀವನದಲ್ಲಿ ಅವಳು ಅವಳಿಷ್ಟ ಪಟ್ಟ ಬದುಕಲ್ಲಿ ಖುಷಿಯಾಗಿರ್ತಾಳೆ...ಜನ ಮೂರ್ಖ ಅನ್ನೋದು ನಿಮ್ಮನ್ನ...ಸ್ವಲ್ಪ ಗಟ್ಟಿಯಾಗಿ ಸ್ವಾಮೀ ...ಅಂದ್ರು.<br />ಗಟ್ಟಿಯಾಗೋಕೆ ಪ್ರಯತ್ನ ಪಡ್ತಿದ್ದೀನಿ ಆದ್ರೆ ದೇವಕಿ ತನ್ನ ಬದುಕಲ್ಲಿ ಶ್ರೀಮಂತಿಕೆಯನ್ನ ಒಪ್ಪಿ ಅಪ್ಪಿಕೊಂಡುಬಿಟ್ಳಾ<br />ಸುನೀತಾ ಹೇಳೋ ಹಾಗೆ ವಾಸು ದೇವಕಿ ಪಾಲಿಗೆ ನಿಜವಾಗ್ಲು ಗೂಸ್ಲು ಅನ್ನಿಸಿಬಿಟ್ನಾ... ಫ್ಯಾನ್ಸಿ ಫ್ಯಾಂಟಸಿ ಅವಳಲ್ಲಿ ಮನೆಮಾಡಿಬಿಡ್ತಾ...ನನ್ಗೆ ಹೋಲಿಸಿದ್ರೆ ಅವೆರಡರಲ್ಲು ರಘುನೆ ವಾಸಿ. ಆದ್ರೆ ಪ್ರೀತಿ ವಿಚಾರ ಬಂದಾಗ ನನ್ನ ಶ್ರೀಮಂತಿಕೆ ಬೇರಾರಲ್ಲು ಅವಳು ನೋಡಲು ಸಾಧ್ಯವಿಲ್ಲ.ಇಷ್ಟರ ಮಟ್ಟಿಗೆ ಒಬ್ರನ್ನ ವಾಸುಗೆ ಪ್ರೀತ್ಸೋದಕ್ಕೆ ಸಾಧ್ಯಇದೆ ಅಂತ ತೋರಿಸಿಕೊಡೋದಕ್ಕೆ ಕಾರಣ ನೀನೇ ದೇವಕಿ....ನೀನೆಲ್ಲಿದ್ರು ವಾಸುವಿನ ಪ್ರೀತಿ ಮತ್ತು ಥ್ಯಾಂಕ್ಸ್ ನಿನ್ನ ನೆರಳಲ್ಲೆ ಸರಿದಾಡುತ್ತದೆ.ದೇವಕಿhttp://www.blogger.com/profile/06098925153781447704noreply@blogger.com2tag:blogger.com,1999:blog-6213676171448221872.post-87887680096588105722009-09-22T03:36:00.000-07:002009-09-23T00:52:09.625-07:00ಅವಳಿಲ್ಲದಿದ್ದರೂ ಕರೆದು ಕೂರಿಸುವೆನಿನ್ನೆಯೂ ನನಗೆ ಕಾಫೀಡೇಗೆ ಹೋಗೋ ಮನಸ್ಸಾಯ್ತು. ಅಲ್ಲಿ ಬೇರೆಬೇರೆ ಪ್ಲೇವರ್ ಕಾಫಿ ಸಿಗುತ್ತೆ ಅನ್ನೋದಕ್ಕಿಂತ ಬೇರೆಬೇರೆ ಪ್ರೀತಿಯ ಪ್ಲೇವರ್ ಗಮನ ಸೆಳೆಯುತ್ತದೆ.ಅಲ್ಲಿ ಯಾರತಂಟೆಯೂ ಇಲ್ಲ.ಇನ್ನೊಬ್ಬರು ನೋಡುತ್ತಾರೆಂಬ ಅಳುಕೂ ಇಲ್ಲದ ಬ್ಯಾಚುಲರ್ಸ್ ಗೆ...ಕಾಲೇಜು ಹುಡುಗ ಹುಡುಗಿಯರಿಗೆ ಹೇಳಿಮಾಡಿಸಿದ ಜಾಗ...ಯಾರಿಗಾದ್ರು ಅರ್ಜೆಂಟಾಗಿ ಮೀಟಿಂಗ್ ನಡೆಸೋಕೆ ಜಾಗ ಸಿಕ್ಕಿಲ್ಲಾಂದ್ರೆ ಒಂದೊಂದು ಕಾಫಿ ಆರ್ಡರ್ ಮಾಡಿ ಒಂದೆರಡು ಗಂಟೆ ಕುಳಿತ್ರೂ ಯಾರೂ ಬೇಡ ಅನ್ನೊದಿಲ್ಲ.<br />a lot can happen over a coffee-ಈ ರೀತಿಯ ವಾಕ್ಯ ಕಾಫೀ ಶಾಪ್ ನಲ್ಲಿರೋದು ತುಂಬಾ ಅರ್ಥಗರ್ಭಿತ ಆನಿಸುತ್ತೆ.<br /><br />ಇಲ್ಲಿ ಹಲವಾರು ಪ್ರೀತಿ ಹುಟ್ಟುತ್ತೆ ಪ್ರೇಮದ ರೆಕ್ಕೆ ಕಟ್ಟುತ್ತೆ,ಹಾಗೆ ಹಾರಾಡ್ತಾ ಹಾರಾಡ್ತಾ ಕಳಚಿ ಬಿದ್ದ ರೆಕ್ಕೆ ಅವರನ್ನ ಮತ್ತದೆ ಜಾಗದಲ್ಲಿ ಕೂರುವಂತೆ ಮಾಡುತ್ತೆ.ಟಿಶ್ಯೂ ಪೇಪರ್ ನಲ್ಲಿ ಕಣ್ಣೀರೊರೆಸುತ್ತಾ.<br /><br />ನಿನ್ನೆ ಒಂದು ಈ ರೀತಿಯ ಜೋಡಿಯನ್ನ ನೋಡಿದೆ,ಕಾಲೇಜು ಹುಡುಗ ಹುಡುಗಿಯರ ಗುಂಪೇ ಸೇರಿತ್ತು.ದೂರದಲ್ಲಿ ಕಾಲಿ ಇದ್ದ ಜಾಗದಲ್ಲಿ ಕುತೂಹಲದ ವೀಕ್ಶ್ಯಕನಾಗಿ ನಾನು ಅವರನ್ನೆಲ್ಲ ಗಮನಿಸುತ್ತಿದ್ದೆ.<br /><br />ಒಂದು ಬದಿಯಲ್ಲಿ ಹುಡುಗಿಯರು ಸೇರಿದ್ದರೆ ಅವಳಲ್ಲಿ ಒಬ್ಬಳು ಕಣ್ಣತುದಿಯಲ್ಲಿ ಕಾಡಿಗೆ ಜಾರದಂತೆ ನೀರುತುಂಬಿಸಿಕೊಂಡಿದ್ದಳು.ಇನ್ನೊಂದು ಬದಿಯಲ್ಲಿ ಹುಡುಗರು ಸೇರಿದ್ದರೆ ಒಬ್ಬಾತ ನಾಳೆಯಿಂದ ಪ್ರಪಂಚದಲ್ಲಿ ಊಟಕ್ಕೆ ಏನೂ ಸಿಗೋದೇ ಇಲ್ವಲ್ಲಾ ಅನ್ನೋತರದಲ್ಲಿ ಸ್ವರ್ಗಸ್ತನಾದಂತೆ ಕುಳಿತಿದ್ದ.ಇದ್ದಕ್ಕಿದ್ದಂತೆ ಅವನು ತನ್ನ ಮೊಬೈಲನ್ನು ನೆಲಕ್ಕೆ ಜೋರಾಗಿ ಜಾಡಿಸಿಬಿಟ್ಟ ...ಬೇರೆಯವರು ಅದನ್ನು ಆಯತೊಡಗಿದರು...ಕೆಲವರು ಅವನಿಗೆ ಗದರತೊಡಗಿದರು...ಹುಡುಗಿಯರು ಅವನ ಸ್ಟಂಟ್ ಅಂದರು...ಕೆಲಹೊತ್ತಿನ ಮೌನದ ನಂತರ ಆ ಇಬ್ಬರು ಹುಡುಗ ಹುಡುಗಿಯನ್ನ ಅಲ್ಲೇ ಬಿಟ್ಟ ಮಿಕ್ಕವರು ದೂರದ ಟೇಬಲ್ಲಿನತ್ತ ಸರಿದರು.ಅವನು ಅವಳತ್ತ ಅವಳು ಅವನತ್ತ ಸರಿಯಲಿಲ್ಲ ಒಂದಷ್ಟು ಹೊತ್ತಿನ ನಂತರ ಇಬ್ಬರಿಗೂ ಮಧ್ಯೆ ಇದ್ದ ಟೆಬಲ್ಲಿನತ್ತ ತಮ್ಮನ್ನು ಕುಳ್ಳಿರಿಸಿಕೊಂಡರು...ಹಾಗೇ ಕೂತಿದ್ದ ಅವರ ಕುರ್ಚಿ ಬಿಸಿ ಆಯಿತೇ ಹೊರತು ಮಾತುಗಳು ಹೊರಡಲೇ ಇಲ್ಲ.<br /><br />ನನಗೆ ಕುತೂಹಲ ಅವರಾಡುವ ಮಾತು ಎಂತದ್ದಿರಬಹುದೆಂದು.ನೋಡುತ್ತಲೇ ಇದ್ದೆ ಅಲ್ಲಿ ದುರುಗುಟ್ಟುವಿಕೆ...ಅಯ್ಯೋ ಅನ್ನಿಸಿಕೊಳ್ಳುವಿಕೆ...ಸ್ವಲ್ಪ ನಸುನಗಿಸಿಕೊಳ್ಳುವಿಕೆ...ಮತ್ತದೇ ಗಾಂಭೀರ್ಯ...ಯಾವ ಕರ್ಮಕ್ಕೆ ಹೀಗೆ ಎಷ್ಟು ಹೊತ್ತು ಕೂತಿರಬೇಕು ಎಂಬ ಚಡಪಡುವಿಕೆ...ಇಬ್ಬರಲ್ಲೂ ನಾನು ಮೊದಲು ಸೋಲಬಾರದೆಂಬ ಅಹಮಿಕೆ ಯಥೇಚ್ಚವಾಗಿ ನಡೀತ್ತಿತ್ತು.ಗುಂಪು ದೂರದಲ್ಲಿದ್ದುಕೊಂಡು ನಗುತ್ತಾ ಅವರಿಬ್ಬರನ್ನು ಕಿಚಾಯಿಸುತ್ತಾ ತಮಗೆ ಬೇಕಾದ್ದನ್ನ ಆರ್ಡರ್ ಮಾಡುತ್ತಾ ಅವರಿಬ್ಬರಿದ್ದ ಟೇಬಲ್ಲಿಗು ಪೇಷ್ಟ್ರಿ ಚಾಕೋಲೇಟ್ ಆರ್ಡರ್ ಮಾಡಿದ್ರು.<br />ಒಬ್ಬ ಹುಡುಗ ನನ್ನತ್ತ ಮುಖ ಮಾಡಿ ನಕ್ಕ ನನ್ನೆದುರು ಇದ್ದ ಒಂದು ಖಾಲಿ ಸೀಟಿನಲ್ಲಿ ಕೂರಬಹುದಾ ಎಂದು... ನೋಪ್ರಾಬ್ಲೆಮ್ ಅನ್ನೋಹಾಅಗೆ ನಾನೂ ಮಾಡಿದೆ, ಕೇಳೋಣ ಅನ್ನಿಸ್ತು... ನನ್ನಿಂದ ದೇಶಾವರಿ ನಗು ತನ್ನಿಂದ ತಾನೇ ಬಂತು ....ಮಾತು ಶುರು ಆಯಿತು.<br />.......<br />......<br />..........<br />....<br />..........ಇಷ್ಟೇ ವಿಷಯ.<br />ಅವನು ಕಷ್ಟ ಪಟ್ಟು ಸಂಪಾದಿಸಿದ ಅವಳ ಪ್ರೀತಿ....ಅವನು ಸ್ವಲ್ಪ ಫ್ಲರ್ಟ್ ಅಂತೆ....ಅಂತೂ ಎಲ್ಲ ಗೆಳೆಯರ ಒತ್ತಡಕ್ಕೆ ಸೋತು ಅವನ ಪ್ರೀತಿಯನ್ನು ವರಿಸಿದ್ದಾಳೆ ಅದಕ್ಕೆ ಇವತ್ತು ಟ್ರೀಟ್.... ಕಾಲೇಜಿಂದ ಬರ್ತಾ ಇವನಿಗೆ ಅದ್ಯಾವುದೋ ಕಾಲ್ ಬಂತಂತೆ.... ಹುಡುಗಿ ಧ್ವನಿಯದ್ದು....ಕಾಲೇಜಿಂದ ಇಲ್ಲಿವರೆಗೂ ಮಾತಾಡ್ತಿದ್ನಂತೆ ಇವಳ ಬಗ್ಗೆ ಗೊಡವೆಯೇ ಇರಲಿಲ್ವಂತೆ.....<br />ಇವಿಷ್ಟು ತಿಳಿದ ನಂತರ ನನ್ನಿಂದ ಒಂದು ಮಾತು ಹೊರಬಿತ್ತು ಎದುರಿದ್ದ ಹುಡುಗನಿಗೆ<br />ಇವರಿಬ್ಬರು ಮದುವೆ ಆಗ್ತಾರಾ?<br />ಮದ್ವೆಗೋಸ್ಕರನೇ ಪ್ರೀತಿ ಅಂದ್ರೆ ಎಷ್ಟು ಸರಿ ಸಾರ್<br />ಮೋಸ ,ಕೈಕೊಟ್ಟ ಹಾಗಾಗುತ್ತಲ್ಲ...?<br />ಇದ್ದಷ್ಟು ದಿನ ಜಾಲಿಯಾಗಿರೋದು ಮುಖ್ಯ ಸಾರ್... ಕಟ್ಕೊಳ್ಳೊವಷ್ಟರಲ್ಲಿ ಏನೇನಾಗುತ್ತೆ ಯಾರಿಗೊತ್ತು?<br />ಮಾತು ಕೇಳುತ್ತಿದ್ದ ಹಾಗೆ ಯೋಚನೆ ದೇವಕಿಯತ್ತ ಹೊರಳುತ್ತದೆ....ನಾನೂ ಹೀಗೆ ಯೋಚನೆ ಮಾಡಿದ್ದರೆ ಇಂದು ಇಷ್ಟು ಚಿಂತೆ ಆಗ್ತಿತ್ತಾ...ಮುಂದೆ ನೀನು ಹೇಗಾದ್ರು ಆಗು ನಾನು ಹೇಗಾದ್ರು ಇರ್ತೀನಿ ಅನ್ನೋ ಪಾಲಿಸಿ ಎಷ್ಟು ಸರಿ... ಒಟ್ಟಾರೆ ಪ್ರೀತಿಯೇ ಗೊಂದಲದ ಪದ ಅನ್ನಿಸ್ತು.ಎದುರಿಗಿದ್ದ ಹುಡುಗನಿಗೆ ಪ್ರೀತಿ ಅಂದ್ರೇನು ನಿಮ್ಮರ್ಥದಲ್ಲಿ ಅಂದೆ .ಆತ ಲವ್ ಲೆಸ್ ಲೈಫ್ ಈಸ್ ಗ್ಯಾಸ್ ಲೆಸ್ ಸೋಡಾ ಅಂದ.<br />ಕಮಿಟ್ಮೆಂಟ್ ಅಂದ್ರೆ ಮತ್ತೊಂದು ನನ್ನ ಪ್ರಶ್ನೆ ಅವನಿಗೆ ಬೇಡವಾಗಿತ್ತು ...ಕಮಿಟ್ಮೆಂಟ್ ಅರ್ಥ ಇಲ್ಲದ್ದು ನಮ್ಮನ್ನು ಕಿಲ್ಲ್ ಮಾಡುತ್ತೆ ಅಂದು ಆ ಇಬ್ಬರನ್ನು ತೋರಿಸಿದ ಅವರಿಬ್ಬರು ಈ ಹಿಂದೆ ನಮ್ಮಲ್ಲೇನೂ ನಡೆದೇ ಇಲ್ಲ ಎಂಬಂತೆ ಒಬ್ಬರ ಬಾಯಿಗೆ ಮತ್ತೊಬ್ಬರು ಪೇಷ್ಟ್ರಿ ತಿನ್ನಿಸಿಕೊಳ್ಳುತ್ತಿದ್ದರು ಇರೋವಷ್ಟು ಹೊತ್ತು,ದಿನ ಮಜವಾಗಿರೋದು ಪ್ರಾಕ್ಟಿಕಲ್ ಲೈಫ್ ಅಂದವನೆ ಹುಡುಗ ಎದ್ದು ಹೋದ.<br />ದೇವಕಿನೂ ಈ ಪಾಲಿಸಿ ಅಳವಡಿಸಿಕೊಂಡ್ಲಾ ...?ಹುಡುಗನ ಮಾತಲ್ಲೂ ನಿಜದ ಖನಿಜಾಂಶ ಗೋಚರಿಸುತ್ತಿತ್ತು...ಕಮಿಟ್ಮೆಂಟ್ ಸತ್ವ ಇಲ್ಲದ ವಿಷಕಾರಿ ಪ್ರೀತಿ ಅಂತಲೂ ಅನ್ನಿಸತೊಡಗಿತು.<br />ಹಾಗಿರುವಾಗಲೇ...<br />ನನ್ನೆದುರು ಖಾಲಿ ಇದ್ದ ಸೀಟಲ್ಲಿ ದೇವಕಿ ಬಂದು ಕೂತಂತೆ ಬಾಸವಾಯಿತು ನಾನೂ ನನಗೊತ್ತಿಲ್ಲದೆ ಪೇಷ್ಟ್ರಿ ಆರ್ಡರ್ ಮಾಡಿದೆ...<br />ಇವತ್ತಿಗೂ ನಾನು ನನ್ನ ದೇವಕಿ ಏನು ಇಷ್ಟ ಪಡುತ್ತಾಳೋ ಅದನ್ನು ತಿನ್ನುವಾಗ ಇಲ್ಲವೇ ಅವ್ಳಿಷ್ಟ ಪಡುವ ವಿಚಾರ ಯೋಚಿಸುವಾಗ ನನ್ನ ಜೊತೆಗೀಗ ಅವಳಿಲ್ಲದಿದ್ದರು ನನ್ನೆದುರು ಬಂದು ಕೂರುತ್ತಾಳೆ ...ಬಂದಿಲ್ಲ ಅಂದ್ರೆ ನಾನೆ ಕರೆದು ಕೂರಿಸುತ್ತೇನೆ ಮನಪ್ರೀತಿಯಿಂದ.ದೇವಕಿhttp://www.blogger.com/profile/06098925153781447704noreply@blogger.com2tag:blogger.com,1999:blog-6213676171448221872.post-85743181668210893022009-09-15T08:22:00.000-07:002009-09-17T09:36:31.515-07:00ಪ್ರೀತಿ ಅಂದ್ರೆ ಋಣವಾ?ಇಷ್ಟಕ್ಕೂ ಪ್ರೀತಿ ಅಂದ್ರೆ ಏನು?<br /><br /><br />ಹೀಗೆ ನಾನು ಯೋಚಿಸುತ್ತಾ ಕುಳಿತಿದ್ದಾಗ ಅದು ಅರ್ಧ ಬೆಂದ ಸಂಜೆ. ಎಪ್ಫೆಮ್ಮಿನಲ್ಲಿ ಎದೆ ಚಿವುಟುವ ಹಾಡು. "ಅನುರಾಗ ರಾಗ ಶುಭಯೋಗ ಯೋಗ ನಮಗೆ\ ನರನಾಡಿ ನಾಡಿ ಸ್ವರ ಹಾಡಿ ಹಾಡಿ ಕೊನೆಗೆ\ ಹಸಿವಾಗದು, ಬಾಯಾರದು, ನಿದಿರೇನೇ ಯಾಕೋ ಬರದು... ಇದೇನಾ ಪ್ರೇಮ.. ಇದೇನಾ?!" ಹರಿಹರನ್ ಕಂಠದಲ್ಲಿ ಹಾಡು ಕೇಳುತ್ತಿದ್ದರೆ ಅದೊಂಥರಾ ಅಮಲು. ಹೌದಾ? ಅದೇನಾ ಪ್ರೇಮ? ಹೀಗೆ ಕಣ್ತುಂಬಾ ಪ್ರಶ್ನೆಗಳನ್ನಿಟ್ಟು ಕುಳಿತುಕೊಂಡಿದ್ದರೆ ಸೂರ್ಯನೂ ಉತ್ತರಿಸದೇ ತೆಪ್ಪಗೇ ಮುಳುಗಿಹೋದ. ಆಗಸದ ತೋಟದ ತುಂಬಾ ನಿದ್ದೆಯಿಂದ್ದೆಂತಹ ನಕ್ಷತ್ರಗಳು ಅರೆಕಂಗಳಲ್ಲೇ ನೋಡುತಿವೆ, ಇವ ಏನಾದರೂ ತನಗೆ ಆ ಪ್ರಶ್ನೆ ಕೇಳಿಬಿಟ್ಟರೆ ಅಂತ ಭಯವಿರಬೇಕು!<br /><br /><br />ಯಾವುದೋ ಪುಸ್ತಕ ತೆಗೆದು ಕಣ್ಣಾಡಿಸಿದರೆ " ಪ್ರೀತಿಯೆಂದರೆ ಅಮೃತ" ಅಂತಿತ್ತು. ಹಾಗಾದರೆ ಕೆಲವರು ಯಾಕೆ ವಿಷ ತಗೊಳ್ಳುತ್ತಾರೆ? ಪ್ರೀತಿಯೆಂದರೆ ಬದುಕು ಅಂತಿತ್ತು, ಹಾಗಿದ್ದರೆ ಪ್ರೀತಿಯಲ್ಲಿ ಬಿದ್ದು ಸಾಯೋದೇಕೆ? "ಪ್ರೀತಿಯೆಂದರೆ ಗೆಲುವು?" ಮತ್ತ್ಯಾಕೆ ಕೆಲವರು ಸೋಲನುಭವಿಸುತ್ತಾರೆ? ಪ್ರೀತಿ ಸೋಲೇ ಆದರೆ ಮತ್ತ್ಯಾಕೆ ಕೆಲವರು ಮಾತ್ರ ಗೆಲ್ಲುತ್ತಾರೆ? "ಪ್ರೀತಿಯೆಂದರೆ ದೇವರು", ಹಾಗಾದರೆ ಕೈಕೊಟ್ಟ ಹುಡುಗ ಹುಡುಗಿಯರಿಂದಾಗಿ ಪರಿತಪಿಸುವ ಜೀವಗಳಿಗೆ ಆ ಅಪರಿಮಿತ ವಿರಹದ, ನೋವಿನ ಶಿಕ್ಷೆ ಯಾಕೆ ನೀಡುತ್ತಾನೆ?<br /><br /><br />ಪ್ರೀತಿಯೆಂದರೆ ಕಾಮವೇ ಅಂದುಕೊಂಡರೆ ಆಗಲೇ ವಾಕಿಂಗ್ ಮುಗಿಸಿ ವೃದ್ಧ ದಂಪತಿಗಳು ಒಬ್ಬರ ಕೈ ಇನ್ನೊಬ್ಬರು ಅಗಲಲಾಗದಂತೆ ಹಿಡಿದುಕೊಂಡು ನಗುತ್ತಾ ಹೋಗುತ್ತಿದ್ದುದು ಕಣ್ಣಿಗೆ ಬಿತ್ತು. ಪ್ರೀತಿಯನ್ನು ಅವಶ್ಯಕತೆ ಅಂದುಕೊಂಡರೆ ಅವಶ್ಯಕತೆಯೆಲ್ಲವನ್ನೂ ಮೀರಿದ್ದ ಎಷ್ಟೋ ಸಂಬಂಧಗಳು ಮನಪಟಲದಲ್ಲಿ ಹಾದುಹೋದವು.<br /><br /><br />ನಿಜಕ್ಕೂ ಈ ಪ್ರೀತಿ ಎಂದರೇನು?<br /><br /><br />ಒಂದು ಪ್ರಶ್ನೆ ಮಾತ್ರ ಭೂತವಾಗಿ ನನ್ನೆದುರು ನಿಂತಿದೆ, ಕಾಡುತಿದೆ<br /><br /><br />ಪ್ರೀತಿ ಅಂದರೆ ಋಣವಾ?<br /><br /><br />ನಾನು ನೀನಿತ್ತ ಸಾಲ ವಾಪಸ್ಸು ನೀಡಿದ ಬಳಿಕ ಪ್ರೀತಿ ಇರುವುದಿಲ್ಲವಾ? ಪ್ರೀತಿ ಮುಗಿದುಹೋಗುತ್ತಾ?<br /><br /><br />ಈ ಕ್ಷಣ ಯಾಕೋ ನಕ್ಷತ್ರಗಳು, ಚಂದಿರ ಮೋಡದಲ್ಲಿ ಮುಖಮರೆಸಿಕೊಂಡಿದೆ. ಈ ಪ್ರಶ್ನೆಯ ಈಟಿ ಎದೆಯ ಮೂಲೆಯೊಂದರಲ್ಲಿ ಬಲವಾಗಿ ನಾಟಿದೆ. ಯಾಕೋ ಬೆನ್ನಹಿಂದೆ ಪುಟ್ಟ ಭಯ ಶುರುವಾಗಿದೆ ದೇವಕೀ.ದೇವಕಿhttp://www.blogger.com/profile/06098925153781447704noreply@blogger.com7tag:blogger.com,1999:blog-6213676171448221872.post-44917620423983565872009-09-11T04:34:00.000-07:002009-09-11T04:37:43.945-07:00ಕ್ಷಮಿಸಿ,ಮುಂದುವರೆಸಲು ಕಷ್ಟ ಆಗ್ತಿದೆ...ಕುಗ್ರಾಮ,ಸರಕಾರವೇ ಸಾರಿಬಿಟ್ಟಿದೆ.ಕುಗ್ರಾಮದಲ್ಲಿ ಇರುವ ಕೆಲವು ಮನೆಗಳಲ್ಲೂ ಹಲವರ ಗಮನಕ್ಕೆ ಕಣ್ಣಿಗೆ ಬೀಳದ ಮಳೆಗಾಲದಲ್ಲಿ ಬೊಬ್ಬಿಟ್ಟು ಹರಿಯುವ ತೊರೆ ಬೇಸಿಗೆಯಲ್ಲಿ ತನ್ನಿರುವಿಗಷ್ಟೇ ಬಾಯಾರಿಕೆಯ ನೀರಿಟ್ಟುಕೊಳ್ಳುತ್ತದೆ.ಅದರ ಅಂಕುಡೊಂಕಿನ ಸಂದಲ್ಲಿ ಅಡಿಕೆಮರದ ಸೋಗೆಯ ಗುಡಿಸಲು,ಒಬ್ಬನೇ ವಾಸ ಇರುವ ಗುಡಿಸಲು.ಯಾರ ತಂಟೆಗೂ ಹೋಗದ ಯಾರ ಮುಖವನ್ನೂ ನೋಡಲಿಚ್ಚಿಸದ ಅರೆಗೂನುಬೆನ್ನಿನ ಮಧ್ಯವಯಸ್ಕ ಅದರೊಡೆಯ.ಗೆಣಸು ಬೆಳೆಸಿ ತಿನ್ನುತ್ತನೆ ಕೆಲಸೇರಷ್ಟೇ ಬೆಳೆಸುವ ಬತ್ತವನ್ನು ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡಿ ಉಣ್ಣುತ್ತಾನೆ.ಅದರ ತವುಡನ್ನೂ ಬಿಡದೆ ಕುದಿಸಿ ಕುಡಿಯುತ್ತಾನೆ ಇಷ್ಟಕ್ಕೋ ಬಡತನಕ್ಕೋ ಅಥವಾ ಆಹಾರಕ್ಕೂ ಬೇರೆಕಡೆ ಹೋಗೋದು ಬೇಡ ಎಂದೋ...ಮೀನುತಿನ್ನುವ ಬಾಯಿಚಪಲಕ್ಕೆ ಮಳೆಗಾಲದಲ್ಲಿ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಗಾಳ ಹಾಕುತ್ತಾನೆ,ಬೇಸಿಗೆಯಲ್ಲಿ ಅದೇಬತ್ತಿಹೋಗುವ ತೊರೆಯಲ್ಲಿ ಕಾಲ್ಲುಗಳ್ನ್ನು ಸರಿಸಿಯೋ ಇಲ್ಲ ಚಿಕ್ಕ ಚಿಕ್ಕ ಬಿಲಗಳಿಗೆ ಕೈ ಹಾಕಿಯೋ ಏಡಿ ಹಿಡಿಯುಇತ್ತಾನೆ.ಆಗಲೂ ಜನರ ಕಣ್ಣಿಗೆ ಜಾಸ್ತಿಯಾಗಿ ಬಿದ್ದವನಲ್ಲಹೀಗಿರುವ ಆಅರೆಬೆನ್ನಿನವನ ಬಗ್ಗೆ ಕಳ್ಳು ಕುಡಿದು ಬೀಡಿಸೇದುವವರ ಬಾಯಲ್ಲಿ ಮಾತಲ್ಲಿ ತೇಲಿಹೋಗಿದ್ದನಷ್ಟೆ.ಯಾವುದೇ ಸರಕಾರಿ ಧಾಖಲೆಗಳಿಲ್ಲದ ಜೀವನ ಅವನದಾಗಿತ್ತು.<br /><br />ಅದೊಂದುವರುಷದ ಜಡಿಮಳೆಯ ದಿನ ಬರುವವರೆಗೂ ಆ ಪುಟ್ಟ ಸೋಗೆ ಮನೆಯ ಬೆತ್ತಲಸತ್ಯ ಬೆತ್ತಲಾಗಲೇ ಇಲ್ಲ.ಜೋರಾದ ಗಾಳಿಗೆ ತೆಂಗಿನ ಮರ ಇನ್ನು ಬಗ್ಗಿದರೆ ಸಾವೇ ಅನ್ನುವಷ್ಟು ವಾಲುತ್ತಿದೆ,ಈ ಹಿಂಸೆ ಇನ್ನುಬೇಡ ಅಂದುಕೊಂಡ ಕೆಲ ಅಡಿಕೆಮರಗಳು ತುಂಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವು...ಗೊನೆಹೊತ್ತು ಭಾರವಾಗಿದ್ದ ಬ್ಬಳೀಎ ತಾಯ್ತನವೆಸಾಕೆಂದು ನೆಲದಪ್ಪುಗೆಗೆ ಮಲಗೇ ಬಿಟ್ಟವು...ತೊರೆಯಲ್ಲಿಕೆಂಪುನೀರು ಹಲಸು ತೆಂಗಿನಕಾಯಿಗಳನ್ನು ತೇಲಿಸುತ್ತ ಕುದುರೆಜಿಗಿತದೊಂದಿಗೆಆಚೀಚೆಯ ತೋಟಗದ್ದೆಗಳನ್ನು ಸವರುತ್ತಾ...ಒಂದಷ್ಟು ಹೊತ್ತಿಗೆ ಇಡಿಯಾಗಿ ನುಂಗಿಬಿಟ್ಟಿತ್ತು.ಮನಸ್ಸಿಗೆ ಮಂಪರು ಕವಿದಂತೆ ಆದಿನದ ವಾತಾವರಣಕ್ಕೂ ರಭಸದ ಮಳೆಯ ಮಂಪರು ಕವಿದಿತ್ತು,ಅಸ್ಪಸ್ಟ ಚಿತ್ರಣದಲ್ಲೂ ಮಿಂಚಿನ ಸ್ಪಸ್ಟತೆಯಗೆರೆಗಳು ಜೋರಾಗೇ ತನ್ನತನವನ್ನು ಮೂಡಿಸಿಹೋಗುತ್ತಿತ್ತು.ಹಗಲಲ್ಲೂ ಕತ್ತಲು ಬೆಳಕಿನಾಟದಲ್ಲಿ ಅಂಕುಡೊಂಕಿನ ಸಂದಿನಲ್ಲಿದ್ದ ಸೋಗೆ ಮನೆ...ಶಿಥಿಲವಾಗುತ್ತಾ ಹೋಗುತ್ತಿತ್ತು...ಆಮನೆಯ ಗೋಡೆಗೆ ಹಿಂಸೆಯ ಹೆರಿಗೆನೋವು ಕಾಡುತ್ತಿತ್ತು....ತನ್ನನ್ನು ಬಗಿದುಕೊಳ್ಳಲೆಂದೇ ಈ ಪರಿಯ ಮಳೆಯನ್ನು ಅದುಬೇಡಿಕೊಂಡಿತ್ತೋ ಏನೋ...ಮಳೆಗೆ ಇನ್ನಷ್ಟು ಮತ್ತಷ್ಟುತನ್ನನ್ನು ತೋಯಿಸಿಕ್ಪೊಳ್ಳುತ್ತಾ ಇಂಚಿಂಚಾಗಿ ಬಾಯಿತೆರೆಯತೊಡಗಿತು.<br /><br />ಆಮನೆಯಾಲ್ಲ್ಲಿ ಅಲ್ಲಿಯವರೆಗೂ ಇರದ ಹೊರಜಗತ್ತಿಗೆ ಕಾಣದ ಜೀವವೊಂದು ಸುರಿಯುವ ಆ ಮಳೆಗೆ ತೆವಲುತ್ತ ಸೇರಿಸಿಕೊಂಡಿತು.ಅರೆಪ್ರಾಯದ ಹೆಣ್ನುಮಗಳು...ಕೈ ಕಾಲು ಬಾಯಿಗೆ ಬಟ್ಟೆಬಿಗಿದ ಸ್ಥಿತಿಯಲ್ಲಿ..ಅದೆಷ್ಟೋವರ್ಷಗಳಿಂದ ಜಗತ್ತಿನ ಬೆಳಕನ್ನು ನೋಡದ ಜೀವ...ಬಿರುಸು ಮಳೆಯಲ್ಲೂಪ್ರಪಂಚದ ಕಣ್ಣಿಗೆಬಿದ್ದಳು.ಪುಟ್ಟ ಕಂದನಂತೆ ತೆವೆಳುತ್ತ ತೆವಳುತ್ತಾ ರೋದಿಸುತ್ತ.ಅವಳ ಹಿಂದೆ ಅರೆಗೂನುಬೆನ್ನಿನ ಮನುಷ್ಯ ಕರಿನೆರಳಿನಂತೆ ಅವನೂ ನೆನೆಯುತ್ತ ಸ್ಪಷ್ಟವಾಗತೊಡಗಿದ ತುಕ್ಕುಹಿಡಿದಕತ್ತಿಯನ್ನು ಗಟ್ಟಿಯಾಗಿ ಹಿಡಿದಿದ್ದ.ಮೇಲಿನ ಮನೆಯ ರಾಮಣ್ಣ ರೈ ಗಳ ನಾತಿ ನೀರಲ್ಲಿ ಕೊಚ್ಚಿಹೋಗುತ್ತಿತ್ತು ಕೆಲಸದಾಳುಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊರೆಯ ಆಚೀಚೆ ನುಗ್ಗಿದ ನೀರಲ್ಲಿ ನೆಗೆಯುತ್ತ ಬರುತ್ತಿದ್ದವರಿಗೆ ಆ ಸೋಗೆಮನೆಯ ಇಬ್ಬರು ಕಾಣಿಸುತ್ತಾರೆ.ಅವರನ್ನು ಕಂಡ ಕೆಲಸದಾಳುಗಳು ಜೋರಾದ ದ್ವನಿಯಲ್ಲಿ ಹೋಯ್ ಹೋಯ್ ಎಂದು ಕಿರುಚಾಡುತ್ತಾರೆ. ಅನಿರೀಕ್ಷಿತವಾದ ಈ ಘಟನೆಯಿಂದ ಗಾಭರಿಯಾದ ಅರೆಗೂನುಬೆನ್ನಿನವ ಹಿಂದೆಸರಿಯುತ್ತಾನೆ ಅವಳನ್ನು ಕಡಿಯಬೇಕಿದ್ದ ಕೈಯಿಂದ ಕತ್ತಿ ಕೆಳ ಬೀಳುತ್ತದೆ.ರೈಗಳ ನಾಯಿ ಕುಯ್ ಕುಯ್ ಅಂದುಕೊಂಡೇ ನೋಟದಿಂದಾಚೆ ಸರಿಯುತ್ತದೆ.ಅರೆಗೂನುಬೆನ್ನಿನವ ಕೆಲಸದಾಳುಗಳಿಂದ ತಪ್ಪಿಸಿಕೊಳ್ಲುವ ಪ್ರಯತ್ನದಲ್ಲಿ ರಭಸವಾಗಿ ತೊರೆಯಾಚೆ ಜಿಗಿಯುತ್ತಾನೆ...ಲೆಕ್ಕಾಚಾರ ತಪ್ಪಿಹೋಯ್ತು,ಮಳೆಯ ಚಳಿ ಕಾಲುಗಳಿಗೆ ನಡುಕ ಹತ್ತಿಸುತ್ತವೆ ತೊರೆಅವನ ಕಾಲುಗಳನ್ನುಹಿಡಿದೆಳೆಯುತ್ತದೆ...ಆಳಕ್ಕೆ...ಅವಳ ಕಟ್ಟು ಬಿಡಿಸಲಾಯಿತು,ರೈಗಳ ನಾಯಿ ಹೇಗೋ ದಡ ಸೇರಿ ಕೆಲಸದವರನ್ನು ಸೇರಿಕೊಂಡಿತು...ಅವರು ಅರ್ಧದಲ್ಲೆ ನಿಂತಿದ್ದಕ್ಕೆ ಅದಕ್ಕೆ ಬೇಜಾರಿಗೋ ಅಥವಾ ಒಳ್ಳೆಯದೇ ಆಯಿತೆಂದೋ ಕುಯ್ ಕುಯ್ ಅನ್ನತೊಡಗಿ ಮೈಕೈ ನೆಕ್ಕತೊಡಗಿತು.ಋತುಮಾನಗಳು ಬದಲಾಗಿದೆಆ ನಾಯಿಯನ್ನು ಕಾಡಿಬೇಡಿ ರಾಮಣ್ಣರೈಯವರಿಂದ ಪಡೆದು ಅವಳು ಜೀವದ ಹಾಗೆ ನೋಡಿಕೊಳ್ಳುತ್ತಿದ್ದಾಳೆ,ಅವಳ ಮನೆ ತೊರೆಯಿಂದ ಸ್ವಲ್ಪಮೇಲೆ ಊರವರಿಂದ ಹೆಂಚುಹಾಕಿಸಿಕೊಂಡು ನಿಂತಿದೆ...ಬೆತ್ತಲೆ ಸತ್ಯ ಇನ್ನೂ ಕತ್ತಲೆಯಲ್ಲಿ ಅಡಗಿದೆ... ಕಷ್ಟ ಆಗ್ತಿದೆ ಆದ್ರು ಪ್ರಯತ್ನ ಮಾಡ್ತೀನಿ... ಅಮ್ಮ ಸತ್ತ ಆ ಮಗಳನ್ನು ಋತುಮತಿಯಾದ ನಂತರ ಬಂದಿಸಲಾಗಿತ್ತು...ಕೈ ಕಾಲು ಬಾಯಿ ಕಟ್ಟಲಾಗಿತ್ತುಹುಟ್ಟುರೂಪದಲ್ಲೆ...ನಂತರ ಕಳೆದದ್ದು ಹಲವು ಮಳೆ ಬಿಸಿಲು ಚಳಿಗಳ ವರ್ಷಗಳು.... ಅವಳದೇ ಅಪ್ಪ...<br /><br />ಕ್ಷಮಿಸಿ,ಮುಂದುವರೆಸಲು ಕಷ್ಟ ಆಗ್ತಿದೆ....ದೇವಕಿhttp://www.blogger.com/profile/06098925153781447704noreply@blogger.com5tag:blogger.com,1999:blog-6213676171448221872.post-54279095237128106592009-09-05T07:43:00.000-07:002009-09-05T07:47:09.700-07:00ಹೀಗೊಂದು ಜೋಗುಳಅಮ್ಮಾ ...ಕಣ್ಮುಚ್ಚಿ... ಮನಬಿಚ್ಚಿ...ದೀರ್ಘ ಉಸಿರು ತೆಗೆದು ಆ ಉಸಿರಿಗೆ ಮೆಲುಧ್ವನಿ ಸೇರಿಸಿ ನಿಧಾನಕ್ಕೆ ಅಮ್ಮಾ ಎಂದು ಹೇಳಿಕೊಂಡಾಗ...ಅದೆಷ್ಟು ಫ್ಲಾಷ್ ಬ್ಯಾಕ್ ದ್ರಷ್ಯಗಳು ಹಾದು ಹೋಗುತ್ವೋ...ಅವೆಷ್ಟು ಸರ್ತಿ ಅಮ್ಮ ನಕ್ಕಿದ್ದು ಅತ್ತಿದ್ದು ಗದರಿದ ಮುಖಭಾವದ ಫೋಟೊಗಳು ಕ್ಲಿಕ್ಕಿಸಿಕೊಂಡಂತಾಗುವುದೋ... ನಾವು ಹೀಗೆ ಪ್ರಯತ್ನಿಸಿದರೆ ಅಮ್ಮನ ಬಗ್ಗೆ ಸುಂದರವಾದ ಭಾವಗೀತೆಗಳನ್ನ ಬರೆಯಬೇಕೆಂದಿದ್ದರೆ ಬರೆಯಬಹುದು, ಆ ಭಾವಗೀತೆಗೆ ಪದಗಳ ಸಾಲು ಸಿಗದೇ ಇದ್ದರೆ ಇದಿಷ್ಟು ಮಾಡಿದರೆ.... ಭಾವಗೀತೆಯ ಚಿತ್ರಣವಾದರೂ ಸಿಗುತ್ತದೆ. ಕೋಟಿ ಕೋಟಿ ಅಮ್ಮಂದಿರಲ್ಲಿ ಒಬ್ಬಾಕೆ ಅಮ್ಮನ ಗುಡಿಸಲ ಬಾಗಿಲಿಗೆ ಹೋಗೋಣ್ವ.ಮುದರು...ಹೆಸರು ಕೇಳುವುದಕ್ಕೆ ವಿಚಿತ್ರ ಅನ್ನಿಸುತ್ತೆ, ಹೆಸರಲ್ಲೇನಿದೆ...ಮುದರು ಸ್ವಲ್ಪ ಎಡವಟ್ಟಾದರು ಈ ಹೆಸರು ಮುದುರು ಆಗಬಹುದು.ಮುದರುವಿನ ಬದುಕೇ ಕಾಡುಗಳ ಮಧ್ಯೆ ಐದು ಗುಡಿಸಲುಗಳಲ್ಲಿ ಒಂದರಲ್ಲಿ ಮುದುರಿಕೊಂಡಿತ್ತು.ತಾಯಿ ಪ್ರೀತಿಯ ಅದಷ್ಟೂ ಮಮಕಾರಗಳನ್ನು ತಬ್ಬಿಕೊಂಡು.ಈ ಗುಡಿಸಲುಗಳಿಗೆ ಪರ್ಲಾಂಗಿನಷ್ಟು ದೂರದಲ್ಲಿ ಬಚ್ಚಿರೆ ಭಟ್ಟರ ತೋಟದ ಮನೆ ಅಲ್ಲಿ ಮುದರು ಮತ್ತು ಅವಳ ಗಂಡ ಮೋಂಟನಿಗೆ ದಿನಕೆಲಸ.ಮುದರುವಿನ ಮನೆಯಲ್ಲಿ ಎರಡುಮೂರು ಬೊಗ್ಗಿಗಳು (ಬೊಗ್ಗಿ-ಹೆಣ್ಣು ನಾಯಿ)ಪ್ರತಿವರ್ಷದಂತೆ ಮರಿಹಾಕಿದಾಗ ಗಂಡುಮರಿಗಳನ್ನು ಭಟ್ಟರ ಮನೆಗೆ ಕೊಡಬೇಕು ಹೇಣ್ಣಾದರೆ ತಾನೇ ಸಾಕಬೇಕು.ಮುದರುವಿನ ಮನೆಯ ಬೊಗ್ಗಿಗೆ ಒಳ್ಳೆಯ ಹೆಸರು ಇದ್ದಿದ್ದರಿಂದಾಗಿ ಹೆಣ್ಣುಮರಿಗಳಿಗೂ ಬೇರೆಯವರಿಂದ ಬೇಡಿಕೆ ಇತ್ತು.ಯಾರೇ ಮರಿಕೇಳುವುದಕ್ಕೆ ಬಂದರೂ ಅನ್ನ ಹಾಕುವುದು ಕಮ್ಮಿಯಾದರೂ ಪರವಾಗಿಲ್ಲ ಪ್ರೀತಿ ಕಮ್ಮಿ ಮಾಡಬೇಡಿಪಾಪ ಮಾತು ಬರದವು ಅಂತಾಳೆ ಮುದರು.ಮರಿಗಳನ್ನು ನಿಮಗೆ ಕೊಡುತ್ತಿಲ್ಲ ನನ್ನ ಮಕ್ಕಳನ್ನ ಕೋಡುತ್ತಿದ್ದೇನೆ ಎಂದು ಹೇಳುತ್ತಲೇ ನಾನು ಒಂದು ರೀತಿ ನಿಮ್ಮ ಮ್ಮನೆಗೆ ಬೀಗತಿ ಇದ್ದ ಹಾಗೆ ಅಂದು ಬಾಯಿತುಂಬ ನಗುತ್ತಾಳೆ.ಮುದರುವಿಗೆ ಇಬ್ಬರು ಮಕ್ಕಳು ದೊಡ್ಡವನಿಗೆ ಎರಡೂವರೆ ವರ್ಷ ಚಿಕ್ಕವಳಿಗೆ ಹನ್ನೊಂದು ತಿಂಗಳು .ತಾವಿಬ್ಬರು ದುಡಿಯುವುದರಲ್ಲಿ ಸಂಸಾರ ಮತ್ತು ನಾಯಿ ಸಂಸಾರನೂ ಸಾಗಿಸಬೇಕಿತ್ತು ಗಂಡ ಮೋಂಟನಿಗೂ ಇದು ಬೇಸರ ತರುವ ವಿಚಾರ ಆಗಿರಲಿಲ್ಲ, ಬದಲಾಗಿ ಸಂಜೆ ಹೊತ್ತಲ್ಲಿ ಕಳ್ಳು ಕುಡಿದು ರಾತ್ರಿ ಮನೆಗೆ ಬಂದ ನಂತರ ನೀನು ನನ್ನಯಾಕೆ ಮದುವೆ ಆದೆ ಒಂದು ಒಳ್ಳೆ ನಾಯಿನೆ ನೋಡಿ ಆಗಬಹುದಿತ್ತಲ್ಲ ಅಂದಾಗ ಮುದರು ಇದ್ದಿದ್ದರಲ್ಲಿ ದಪ್ಪಗಿರುವ ನಾಯಿಯ ಬೆನ್ನು ಚಪ್ಪರಿಸುತ್ತ ಮದುವೆಯ ಸಂದರ್ಭ ನೀನೂ ಹೀಗೇ ಇದ್ದೆ ಎಂದು ರೇಗಿಸುವಳು ಆಗ ಮೋಂಟ ಅವಳಿಗಾಗಿ ಕುಪ್ಪಿಯಲ್ಲಿ ತಂದ ಕಳ್ಳನ್ನು ತಾನೇ ಕುಡಿಯುತ್ತ ಜೋರಾಗಿ ಸಂದಿ ಹಾಡುತ್ತ ಗಂಜಿಯ ಬಟ್ಟಲಿನ ಮುಂದೆ ಕೂರುತ್ತಿದ್ದನು.ಒಂದು ದಿನ...ಮುದರುವಿನ ಮನೆಯಲ್ಲಿ ರಾತ್ರಿಯವರೆಗೂ ಆರೋಗ್ಯವಾಗೇ ಇದ್ದ ಬೊಗ್ಗಿ ಮಿಣ್ಕು ಅಸುನೀಗುತ್ತದೆ ಮೋಂಟ ಇದು ಭೂತದ ಪೆಟ್ಟು ಅಂತಾನೆ.ಮುದರು ಅಳುತ್ತಾಳೆ ಮೋಂಟ ಸಮಾಧನಿಸುತ್ತಾನೆ.ಮಿಣ್ಕು ಮೂರುಮರಿಗಳನ್ನ ಅನಾಥವನ್ನಾಗಿಸಿ ಹೆಣವಾಗಿದ್ದಾಳೆ.ಆ ನಂತರ ಗೊತ್ತಗಿದ್ದು ಮಿಣ್ಕು ಸತ್ತಿದ್ದು ಬೊಮ್ಮಣ ಪೊಜಾರಿಯವರು ಇಟ್ಟ ವಿಷಕ್ಕೆ.ಇದಾದನಂತರ ಒಂದೆರಡು ದಿನ ಮುದರುವಿಗೆ ಕೆಲಸಕ್ಕೆ ಹೋಗಲಾಗಲಿಲ್ಲ ಮರಿಗಳು ಅಳುತ್ತಿದ್ದವು...ಭಟ್ಟರ ಕೊಟ್ಟಿಗೆ ಸೊಪ್ಪು ಹಾಕದೆ ಹಸುಗಳು ಹಾಲು ಕೊಡುತ್ತಿರಲಿಲ್ಲ.ಮಾರನೆಯ ದಿನ ಬೆಳ್ಳಂಬೆಳಗ್ಗೆ ಭಟ್ಟರು ದೂರದಿಂದ ಕೂಗುತ್ತಾ ಬಂದರು ಅವರುಗೂ ಸತ್ತ ನಾಯಿ ಭಯ ಇತ್ತು.ಭಟ್ಟರ ಕೂಗಿಗೆ ಮೋಂಟ ಇನ್ನೋಂದು ಬದಿಯಿಂದ ಓಡಿಹೋಗಿ ಅವರ ಹಿಂದೆಯೇ ನಿಂತು ಅವನೂ ಕೂ ಹಾಕಿ ಏನೆಂದು ಕೇಳುತ್ತಾನೆ .ನೀನೆಲ್ಲಿದ್ದೆ ಅಂದಾಗ ತೋಟದಲ್ಲಿದ್ದೆ ನಿಮ್ಮ ಕೂ ಕೇಳಿ ಹೀಂದೆನೇ ಒಡಿಬಂದೆ ಅನ್ನುವುದು ಮುದರುವಿಗೆ ಕೇಳಿ ನಿನ್ನೆ ರಾತ್ರಿ ತೋಟದಲ್ಲೇ ಮಲಗಿದ್ದ ಎಂದು ನಗುತ್ತಾಳೆ ಮೋಂಟ ಹೌದು ಅಡಿಕೆ ಕಾಯುತ್ತಿದ್ದೆ ಅಂದಾಗ ಭಟ್ಟರಿಗೆ ಸಂಬಳ ಕೊಡುವು ಸಾರ್ಥಕ ಅನ್ನಿಸುತ್ತದೆ.ಎರಡುದಿನದಿಂದ ಕೆಲಸಕ್ಕೆ ಬಾರದ ಮುದರುವಿಗೆ ಗದರದಿದ್ದರೆ ಸರಿ ಇಲ್ಲ ಅಂದವರೇ ಭಟ್ಟರು ಎರಡು ಹೆಜ್ಜೆ ಮುಂದೆ ಹೋಗಿ ಎಲೆಯಡಿಕೆ ಹಾಕಿದ ಅಗಲಬಾಯಿ ತೆರೆದವರೆ ಸುಮ್ಮನಾಗುತ್ತರೆ ಮಾತೇ ಹೊರಡುವುದಿಲ್ಲ.ಮುದರುವಿನ ಎತ್ತರದೆದೆ ಅವರ ಕಣ್ನು ಸೆಳೆಯುತ್ತದೆ ದೂರದಲ್ಲಿರುವ ಅವಳ ಅರೆನಗ್ನ ಮಗನೂ ನಗ್ನ ಮಗಳು ಕಾಣಿಸುತ್ತಾಳೆ...ಆದರೂ ಭಟ್ತರಿಗೆ ಅಲ್ಲಿಂದ ಕಣ್ಣು ಕದಲಿಸಲಾಗುವುದಿಲ್ಲ ಮೋಂಟ ಅವರ ಹತ್ತಿರ ಬರುತ್ತಾನೆ ಅವರನ್ನೂ ಹೆಂಡತಿಯನ್ನೂ ನೋಡುತ್ತಾನೆ ,ಹೆಂಡತಿಗೆ ಆಚೆ ಹೋಗುವಂತೆ ಕೈಸನ್ನೆ ಮಾಡುತ್ತಾನೆ ಅವಳು ನೋಡಲೇ ಇಲ್ಲ,ಭಟ್ಟರ ತೆರೆದ ಬಾಯಿ ಕಣ್ಣುಗಳು ಹಾಗೇ ಇದ್ದವು.ಮುದರುವಿನ ಉಬ್ಬಿದ ಸೆರಗಡಿಯಿಂದ ಒಂದು ನಾಯಿಮರಿ ಜಾರಿ ಕೆಳಗೆ ಬೀಳುತ್ತದೆ.ಅದರ ಬಾಯ ಕೊನೆಯಲ್ಲಿರುವ ಹಾಲಿನ ಹಸಿ ಹಸಿ ಹನಿಯನ್ನು ನಾಲಿಗೆಯಿಂದ ಸವರಿಕೊಳ್ಳುತ್ತದೆ.ಸೆರಗೊಳಗೆ ಇನ್ನೂ ಎರಡು ಮರಿಗಳಿರುವುದು ಭಟ್ಟರಿಗೆ ಅರಿವಿಗೆ ಬಂತು. ಮೋಂಟ ಮೆತ್ತಗೆ ಅವರ ಕಿವಿಗುಸಿರಿದ ಮೊನ್ನೆ ಮಿಣ್ಕು ತೀರ್ಕೊಂಡ್ಲು ಈಗ ಇವಳೇ ಮರಿಗಳಿಗೆ... ಇದ್ಯಾವುದರ ಪರಿವೆಯೇ ಇಲ್ಲ ಅನ್ನುವಂತೆ ಮುದರು ಜಾರಿ ಬಿದ್ದ ಮರಿಯನ್ನು ಮತ್ತೆ ಸೆರಗೊಳಗೆ ಸೇರಿಸುತ್ತಾ ಮೆತ್ತಗೆ ಆ ಮರಿಗಳಿಗೆ ಗದರತೊಡಗಿದಳು .ಯಾಕೆ ಅವಸರ ಪಟ್ಕೋತಿದ್ದೀರಾ...ಅವಳ ಮುಂದೆ ಕುಳಿತು ತಾಯಿಯನ್ನೇ ನೋಡುತ್ತಿದ್ದ ಮಕ್ಕಳ ಮುಖದಲ್ಲಿ ಗೊತ್ತಿರದ ಕಿರುನಗು ಆಗಾಗ ಬಂದು ಹೋಗುತ್ತಿತ್ತು.ಮೋಂಟನಿಗೆ ಭಟ್ಟರು ಮುದರು ಹತ್ತು ದಿನ ಕೆಲಸಕ್ಕೆ ಬರುವುದು ಬೇಡ ಸಂಬಳ ಕಟ್ಟು ಮಾಡುವುದಿಲ್ಲ ಅಂದು ತುಂಬಿಕೊಂಡ ಕಣ್ಣೀರು ಒರಸುತ್ತಾ ಹಿಂತಿರುಗಿದರು.ಅಮ್ಮಾ ನಿನಗೆಷ್ಟು ರೂಪ...?ದೇವಕಿhttp://www.blogger.com/profile/06098925153781447704noreply@blogger.com2tag:blogger.com,1999:blog-6213676171448221872.post-55272737184991983882009-09-05T04:09:00.000-07:002009-09-05T04:53:50.345-07:00ಒಂದು ಕ್ರಿಯಾತ್ಮಕ ಸ್ಪೂರ್ತಿಗಾಗಿ ...ಎಲ್ಲರಿಗೂ ಆತ್ಮೀಯ ನಮಸ್ಕಾರಗಳು.<br /><br />ಕಾಡುವ ಬೆಳದಿಂಗಳು ಬ್ಲಾಗ್ ಬರೆಯುವುದಕ್ಕೆಶುರು ಮಾಡಿದಾಗ ಇಷ್ಟೊಂದು ಪ್ರತಿಕ್ರಿಯೆ ಬರಬಹುದು ಅಂದುಕೊಂಡಿರಲಿಲ್ಲ.<br /><br />ನಿಮ್ಮೆಲ್ಲರ ಪ್ರತಿಕ್ರಿಯೆಯಿಂದಲೇ ಬ್ಲಾಗಿನ ಬರಹಗಳು ೨೦೦ರ ಸಂಚಿಕೆಯ ನೆನಪಿಗಾಗಿ ಪುಸ್ತಕದ ರೂಪ ಪಡೆದಿದೆ.<br /><br />ಪ್ರತಿಕ್ರಿಯೆಗಳನ್ನು ಕೂಡಾ ...ಹೊಗಳಿಕೆ ತೆಗಳಿಕೆ ಸೇರಿ ಅಚ್ಚೊತ್ತಬೇಕೆನ್ನುವ ಆಸೆ ಕಾರಣಾಂತರಗಳಿಂದ ಈಡೇರಲಿಲ್ಲ.ಜೋಗುಳದ ಬಗ್ಗೆ ನಿಮ್ಮ ಬಿಚ್ಚುಮಾತಿನ ಅನಿಸಿಕೆಗಳಿಗೆ ಸದಾ ಸ್ವಾಗತ ಇರುತ್ತದೆ.ಆದರೆ ಒಂದು ವಿನಂತಿ ಹೆಸರಿಲ್ಲದೆ ಪ್ರತಿಕ್ರಿಯೆ ಕೊಡುವ ಬದಲಾಗಿ ನಿಜ ಹೆಸರಿನೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ನೇರ ನುಡಿಯೊಂದಿಗೆ ಹಂಚಿಕೊಂಡರೆ ನಿಜವಾಗ್ಲೂ ಸಂತೋಷ.<br />ಮುಂದೊಂದು ದಿನ ಎಲ್ಲರ ಅನಿಸಿಕೆಗಳೂ ಜೋಗುಳದ ನೆನಪಿನ ಪುಸ್ತಕದ ಬರಹಗಳಾಗಬೇಕೆಂಬುದು ನಮ್ಮಾಸೆ.<br />ಒಂದಷ್ಟು ದಿನದಿಂದ ಬ್ಲಾಗು ಮೌನತಾಳಿದೆ,ಮತ್ತೆ ಉಸಿರಾಡುತ್ತದೆ.ಧಾರಾವಾಹಿ ಮತ್ತು ಅದಕ್ಕೆ ಹೊರತಾದ ಕೆಲವು ಭಾವನಾತ್ಮಕ ಲೇಖನಗಳೊಂದಿಗೆ...<br />ಮತ್ತೊಮ್ಮೆ ನಿಮಗೆ ಮನಪೂರ್ವಕ ನಮನಗಳು.<br />ವಿನು ಬಳಂಜ<br />ಮತ್ತು ಜೋಗುಳ ತಂಡ<br /><p> </p><p> </p>ದೇವಕಿhttp://www.blogger.com/profile/06098925153781447704noreply@blogger.com3tag:blogger.com,1999:blog-6213676171448221872.post-80942356488945477022009-08-23T22:05:00.000-07:002009-08-23T22:07:06.925-07:00ದೇವಕಿಯಾಸರೆ ದೊರೆತರೆ ಬದುಕು. ದೊರಕದಿದ್ದರೆ ಸಾವು.ಬದುಕು ಅಂದ್ರೆ ಏನು ದೇವಕಿ? ನಾನು ತಿಳಿದಿದ್ದಿಷ್ಟೇ ನಿನ್ನ ಎರಡು ಕಣ್ಣ ಹನಿಗಳನ್ನ ಒರೆಸುವುದು. ಸಾಧ್ಯವಾದರೆ ಯಾವತ್ತು ನಿನ್ನ ಕಂಗಳಿಂದ ಹನಿಗಳು ಜಾರದಿರುವಂತೆ ನೋಡಿಕೊಳ್ಳುವುದು, ಒಂದೆರೆಡು ಮೊಳ ಮಲ್ಲಿಗೆಯನ್ನ ನಿನ್ನ ಮುಂದಿರಿಸಿ ನೀನು ಕಣ್ಣು ತುಂಬಿಕೊಂಡು ನೋಡುವುದನ್ನ ನಾನು ಕಣ್ಣು ತುಂಬಿಕೊಳ್ಳುವುದು, ನಿನ್ನ ಕಷ್ಟಗಳಿಗೆ ಆಗುವುದು ನಿನ್ನ ಸುಖಗಳಿಗೆ ತಾಗುವುದು, ಕದ್ದಾದರೂ ಸರಿ ಒಂದು ಒಂದು ಮುತ್ತನ್ನಿಕ್ಕಿವುದು, ಸಾಕು ಬೇಡವೆಂದರೂ ನಿನಗೆ ಇನ್ನೊಂದಿಷ್ಟು ತುತ್ತು ತಿನಿಸುವುದು. ನಿನ್ನ ಕಣ್ಣುಗಳಲ್ಲಿ ನನ್ನದೊಂದಿಷ್ಟು ಕನಸುಗಳನ್ನ ತುಂಬುವುದು, ನನಸಾಗಲಿ ಅನ್ನುತ್ತಾ ದೇವರಲ್ಲಿ ಬೇಡಿಕೊಳ್ಳುವುದು, ಇಷ್ಟೇ ನಾನು ನನಗೆ ಅಂದುಕೊಂಡ ಬದುಕು. ಆದರೆ ಇಷ್ಟು ಸಣ್ಣ ಕೋರಿಕೆಗಳು ಕೂಡ ಫಲಿಸುವ ಸಣ್ಣ ಸೂಚನೆಗಳು ನನಗೆ ಕಾಣಿಸುತ್ತಿಲ್ಲ. ಎಲ್ಲ ಮರೆತು ಹೋಗಿದ್ದ ಈ ವಾಸು ಮತ್ತೆ ಎಲ್ಲವನ್ನು ನೆನಪು ಮಾಡಿಕೊಂಡು ವಾಪಾಸು ಬಂದಿದ್ದಾನೆ. ಇಷ್ಟು ಕೊರಿಕೆಗಳಲ್ಲಿ ಒಂದಾದರು ನಿಜವಾಗಬಹುದ ಅನ್ನುವ ಆಸೆಯಿಂದ ಬಂದಿಲ್ಲ. ಆದರೆ ನಿನ್ನ ಕುರಿತಾಗಿ ಮತ್ತಷ್ಟು ಕನಸುಗಳನ್ನ ಹೆಣೆಯೋದಕ್ಕೆ ಬಂದಿದ್ದಾನೆ. ಎದೆಯ ಒಳಗೆ ಸತ್ತು ಸಮಾಧಿಯಾಗಿದ್ದ ಎಲ್ಲ ಕನಸುಗಳಿಗೆ ಮತ್ತೆ ಜೀವ ಕೊಟ್ಟು ಬದುಕಿನ ಕೊನೆಯ ಯುದ್ಧವನ್ನ ಆರಂಬಿಸುತ್ತಿದ್ದಾನೆ. ದೇವಕಿಯಾಸರೆ ದೊರೆತರೆ ಬದುಕು. ದೊರಕದಿದ್ದರೆ ಸಾವು.ದೇವಕಿhttp://www.blogger.com/profile/06098925153781447704noreply@blogger.com16tag:blogger.com,1999:blog-6213676171448221872.post-13486353151666659932009-08-19T06:45:00.000-07:002009-08-19T08:33:36.631-07:00ಇಲ್ಲೇ ಹತ್ತಿರದಲ್ಲಿ ಇದ್ದುಕೊಂಡು ನಿನ್ನ ನೆನಪಲ್ಲಿದ್ದುಬಿಡುತ್ತೇನೆ.ಭಾರವಾದ ಎದೆಯ ಹೊತ್ತುಕೊಂಡು<span style="font-size:0;"><span style="font-size:100%;"> ಆತ್ಮೀಯ ಅನ್ನಿಸಿಕೊಂಡ ಆತ್ಮೀಯನಲ್ಲದ (ನಮ್ಮ?) ಅಮೇರಿಕಾಕ್ಕೆ</span> </span>ಕಾಲಿಟ್ಟೆನಾದರೂ ಮೊದಲ ಹೆಜ್ಜೆ ಇಡುವಾಗಲೇ ನಾನಿಲ್ಲಿ ಹೆಚ್ಚು ದಿನ ಇರಲಾರೆ ಅನ್ನಿಸಿದ್ದು ನಿನ್ನಷ್ಟೇ ಸತ್ಯ. ನಿನ್ನ ನೆನಪುಗಳನ್ನೆಲ್ಲ ಮೂಟೆಕಟ್ಟಿ ಬಿಟ್ಟು ಬಂದೆನಾದರೂ ಮತ್ತೆ ಮತ್ತೆ ಅಪ್ಪಿಕೊಳ್ಳುತ್ತಿದ್ದ ನಿನ್ನ ಕನಸು ಕನವರಿಕೆಗಳನ್ನ ದೂರ ತಳ್ಳಲಾರದೇ ಅಸಹಾಯಕನಾಗಿದ್ದೂ ಕೂಡ ಮೊನ್ನೆ ಮೊನ್ನೆ ಸೆಲ್ಯೂಟ್ ಹೊಡೆದೆವಲ್ಲ ಆ ಸ್ವಾತಂತ್ರ್ಯದ ದಿನದಷ್ಟೇ ಸತ್ಯ. ನಾನು ನಿನ್ನ ಮೇಲಿಟ್ಟಿದ್ದ ಪ್ರೀತಿಗೆ ಆದ ವಂಚನೆ, ಅವಮಾನ ನಿರಾಸೆ ಇವೆಲ್ಲವೂ ಸೇರಿ ಸ್ವಲ್ಪ ದಿನ ನನ್ನನ್ನಿಲ್ಲಿ ಬಂಧಿಸಿಟ್ಟಿದ್ದವು ದೇವಕಿ. ಆದರೇ ಎಲ್ಲಕ್ಕಿಂತ ಮಿಗಿಲಾಗಿ ನೀನು ನನ್ನನ್ನ ಆರಾಧಿಸುತ್ತಿದ್ದ ಪರಿಯ ನೆನಪಾಯಿತು ನೊಡು ಆ ಹೊತ್ತಿನಲ್ಲಿ ನಾನು ನಾನಾಗಿರಲಿಲ್ಲ. ಮನಸ್ಸಿನ ಪುಟಗಳಲ್ಲಿ ದೇವಕಿ ನಾನಂದುಕೊಂಡಷ್ಟು ಕೆಟ್ಟವಳಲ್ಲ ಅಂತ ಯಾಕನ್ನಿಸಿತೋ ಗೊತ್ತಿಲ್ಲ ದೇವರ ಮುಂದೆ ಸಣ್ಣದೊಂದು ದೀಪ ಹಚ್ಚಿಕೊಂಡು ಕುಳಿತುಬಿಟ್ಟೆ. ಹಾಗೆ ಕುಳಿತವನು ಕೇಳಿಕೊಂಡ ಒಂದೇ ಒಂದು ಕೋರಿಕೆಯೆಂದರೇ ದೇವರೇ, ನನ್ನ ದೇವಕಿಯ ತಪ್ಪುಗಳನ್ನ ಕ್ಷಮಿಸಿಬಿಡು.<br /><br /><br />ಡಾಲರುಗಳನ್ನ ಸಂಪಾದಿಸಿ ಅದ್ಯಾವ ಅರಮನೆಯನ್ನ ಕಟ್ಟೊಕೆ ಇಲ್ಲಿಗೆ ಬಂದೆ ದೇವಕಿ ನಾನು? ಜೊತೆಗೆ ನೀನಿರುವುದಿಲ್ಲ ಅನ್ನುವ ಸತ್ಯ ಗೊತ್ತಿತ್ತರೂ ಬಂದಿದ್ದು ತಪ್ಪಲ್ಲವ? ಮನುಷ್ಯ ಬದುಕೋಕೆ ಮಹಲುಗಳ, ಆಡಂಬರ ಐಶ್ವರ್ಯಗಳ ಮುಲಾಜಿಗೆ ಬಿದ್ದು ಬದುಕಿನ ಅರ್ಥವನ್ನ ಹೇಗೆ ಕಳೆದುಕೊಳ್ಳುತ್ತಾನೆ ಅಂತ ಕನ್ನಡಿ ಮುಂದೆ ನಿಂತು ನನ್ನನ್ನ ನಾನೆ ಪ್ರಶ್ನೆ ಮಾಡಿಕೊಂಡೆ. ನಿನ್ನ ಬಿಟ್ಟು ಬಂದ ನನ್ನಲ್ಲಿ ಉತ್ತರವಿರಲಿಲ್ಲ. ಸಹಜ ಬದುಕಿಗೆ ಆ ಆಡಂಬರದ ದೇಶದ ಅಗತ್ಯ ನನಗಿಲ್ಲ ದೇವಕಿ. ನನ್ನಲ್ಲಿ ಕನಸುಗಳನ್ನ ಹುಟ್ಟುಹಾಕುತ್ತಿದ್ದ ನಿನ್ನ ಅಗತ್ಯ ನನಗೆ ಬೇಕು ಅನ್ನಿಸುತ್ತಿದೆ. ನನ್ನನ್ನ ನೀನು ದೂರವಿಟ್ಟರೂ ಸರಿ ಅಲ್ಲೇ ಹತ್ತಿರದಲ್ಲಿ ಇದ್ದುಕೊಂಡು ನಿನ್ನ ನೆನಪಲ್ಲಿದ್ದುಬಿಡುತ್ತೇನೆ. ಅಮೇರಿಕಾಕ್ಕೆ ಇದ್ದುಬಿಡುವ ತೀವ್ರತೆಯ ಒತ್ತಡಕ್ಕೆ ಅಮೇರಿಕಾದಲ್ಲೇ ಮುಪ್ಪು ಆವರಿಸಿದೆ. ಮನಸ್ಸು ಹಣ್ಣಾಗಿದೆ.<br /><br /><br />ಮತ್ತೆ ವಾಪಾಸು ಬಂದಿದ್ದೀನಿ ದೇವಕಿ. ನಿನ್ನ ಪಡಿಯೋದಕ್ಕೇನಾ ಅಂತ ನನ್ನನ್ನ ನಾನೆ ಪ್ರಶ್ನೆ ಮಾಡಿಕೊಂಡರೂ ನನಗೀಗ ಉತ್ತರ ಸಿಗುತ್ತಿಲ್ಲ. ಆದರೇ ನಿನ್ನಿಂದ ತುಂಬಾ ದೂರ ಇರಲಾರದ ಈ ವಾಸುವಿನ ಅಸಹಾಯಕತೆಯನ್ನ ಪ್ಲೀಸ್<br />ಕ್ಷಮಿಸಿಬಿಡು.ದೇವಕಿhttp://www.blogger.com/profile/06098925153781447704noreply@blogger.com4tag:blogger.com,1999:blog-6213676171448221872.post-6545754118308248602009-08-18T06:42:00.000-07:002009-08-18T08:35:49.157-07:00ಎಲ್ಲೋ ದೂರದಲ್ಲಿ ನಿಂತು ಕದ್ದಾದರೂ ಸರಿ ನಿನ್ನ ನೋಡಬೇಕು..ಕಣ್ಣೆದುರು ಸುಳಿಯುವಳೇ ನನ್ನ ದೇವಕಿ?!<br />"ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ<br />ನೆನಪಿನಲ್ಲಿ ಸುಳಿದಂತೆ ನನ್ನ ದೇವಕಿ!"<br /><br />ಹೀಗೆ ಒಬ್ಬನೇ ಹಾಡಿಕೊಳ್ಳುತಿರುತ್ತಿದ್ದೆ. ನನ್ನ ಒಂಟಿತನದಲಿ ಬಹುಮುಖ್ಯ ಸಾಥಿ ನಿನ್ನ ನೆನಪುಗಳು. ಅವು ಬರೆಸಿದ ಒಂದಿಷ್ಟು ಕವಿತೆಗಳು. ಇತ್ತ ವಿರಹ ಕ್ಷಣ ಕ್ಷಣವೂ ವಿಷವುಣಿಸುತ್ತಿದ್ದರೆ ಕವಿತೆಗಳು ನನ್ನಲ್ಲಿ ಉಸಿರುಮೂಡಿಸುತ್ತಿದ್ದವು. ಅವುಗಳಿಂದಲೇ ಕಾಲಕಳೆಯುತಿತ್ತು. ಆದ್ದರಿಂದಲೇ ಬಹುಶಃ ನಾನೂ ಉಳಿದದ್ದು.<br /><br />ಒಳಗಿನ ಭಾವನೆಗಳನ್ನು ಈ ಬ್ಲಾಗಲ್ಲದೇ ನಿನಗೆ ತಿಳಿಸುವುದಾದರೂ ಹೇಗಿತ್ತು? ಎಷ್ಟೊಂದು ಭಾವಗಳು ಎದೆಯಲ್ಲಿ ಕುದಿಯುತ್ತಿದ್ದವು? ನಿನ್ನ ಒಂದು ಮುಖದರ್ಶನಕ್ಕಾಗಿ ಜನುಮವಿಡೀ ಕಾಯುವ ಶಿಕ್ಷೆ ವಿಧಿಸಿದರೂ ಪರವಾಗಿಲ್ಲ ಅನ್ನುವಷ್ಟು ಎಲ್ಲ ಕಳಕೊಂಡ ಫಕೀರನಾಗಿದ್ದೇನೆ. ಆಗಷ್ಟೇ ಖಾರ ತಿಂದವ ನೀರು ಬಯಸುವಷ್ಟು ತೀವ್ರವಾಗಿ ನಿನ್ನ ನೋಡಬೇಕು, ಒಮ್ಮೆ ನಿನ್ನ ಮಡಿಲು ಸೇರಬೇಕು, ನನ್ನೆಲ್ಲಾ ವಿರಹ, ನೋವುಗಳು ನಿನ್ನ ಮಡಿಲಿನಲ್ಲಿ ಕೊನೆಯುಸಿರೆಳೆವುದನ್ನು ಕಾಣಬೇಕು ಅನ್ನುವ ಭಾವ. ಆದರೆ ಒದ್ದಾಡುವಂತೆ ಮಾಡುವ ಈ ಸಾವಿರ ಸಾವಿರ ಮೈಲುಗಳ ದೂರ. ಶತ್ರುವಾಗಿರುವ ಏಳು ಸಾಗರಗಳು ನಮ್ಮೀರ್ವರ ನಡುಮಧ್ಯೆ.<br /><br />ನಾನೀಗ ಡಾಲರುಗಳ ಊರಲ್ಲಿ ಕನಸುಗಳನ್ನು ಕಳಕೊಂಡ, ಮುಂದಿನ ಯಾವುದೋ ಅಮೃತಘಳಿಗೆಗಾಗಿ ನನ್ನ ಈಗಿನ ಕ್ಷಣಗಳನ್ನು ಒತ್ತೆಯಿಟ್ಟ, ಎಂದೋ ಒಮ್ಮೆ ದೊರಕಬಹುದಾದ, (ದೊರಕದೆಯೂ ಇರಬಹುದಾದ) ಪ್ರೀತಿಗಾಗಿ ಬದುಕಿನ ಮುಖ್ಯಭಾಗದ ಕಪ್ಪ ಒಪ್ಪಿಸಿದ ಹುಡುಗ. ಇಲ್ಲಿನ ಚಳಿಯಲ್ಲಿ ನಿನ್ನ ನೆನಪು ಕಾಡೋದಂದರೆ ಅದನ್ನು ಬರೀ ಪದಗಳಲ್ಲಿ ವಿವರಿಸೋದು ಹ್ಯಾಗೆ ಸಾಧ್ಯ? ಅದು ಉಪಮಾನಗಳೇ ನೀಡಲಾಗದ ನೋವಿನನುಭವದ ಕಂತೆ. ಲಕ್ಷ ಲಕ್ಷ ಚುಚ್ಚುವಿಕೆಯ ನಿಶಾನಿಯಿರುವ ರಾತ್ರಿಯಾಗಸದ ಕತೆ. ಅದರ ಕೆಲಸ, ಕೇವಲ ನೀನು ನನ್ನ ಬಳಿಯಿಲ್ಲ ಎಂಬ ಸೂಜಿಯನ್ನೇ ಮತ್ತೆ ಮತ್ತೆ ನಾಟುವುದು. ನೆನಪುಗಳ ಈ ಬಗೆಯ ಕಾಡುವಿಕೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮಾಡಬೇಕಾದ್ದೇನು? ನಾನು ಮತ್ತೆ ಸಂತಸದಲ್ಲಿರಲು, ಬದುಕಬೇಕೆಂಬ ಸ್ಪೂರ್ತಿ ಬರಲು, ಪ್ರೀತಿಯ ಮೇಲೆ ನಂಬಿಕೆ ಹುಟ್ಟಲು, ಸಧ್ಯಕ್ಕೆ ಮಾಡಿಯೇ ತೀರಬೇಕಾದ್ದು ಏನು? ಹೀಗನ್ನಿಸಿದ್ದರಿಂದ ಡಾಲರುಗಳ ಕನಸುಗಳು ತೂಕ ಕಳಕೊಂಡಿವೆ. ಶತ್ರುವಿನಂಥ ಏಳು ಸಾಗರಗಳು ದೃಷ್ಟಿಯುದ್ಧದಲ್ಲೇ ಸೋತ ಸೈನಿಕನಂತಾಗಿವೆ. ನನಗೆ ಎಲ್ಲಕ್ಕಿಂತ ಮುಖ್ಯವಾಗಿರುವ ನಿನ್ನ ಬಿಟ್ಟು ಇದ್ಯಾಕೆ, ಇದೇನು, ಇದ್ಯಾವುದರ ಹಿಂದೆ ಬಿದ್ದಿದ್ದೇನೆ ಅನ್ನಿಸತೊಡಗಿದೆ. ನಿನ್ನ ನೋಟದ ಇಂಧನವಿಲ್ಲದೇ ಖಾಲಿಯಾದ ವಿಮಾನದಂತಾಗಿದೆ ನನ್ನೀ ಮನಸ್ಸು.<br /><br />ಇಲ್ಲಿ ಸಮಯ ಕಳೆಯಲಾಗುತ್ತಿಲ್ಲ. ಬದುಕಲಾಗುತ್ತಿಲ್ಲ. ನಾನು ಕೃಶವಾಗಿಹೋಗುತ್ತಿದ್ದೇನೆ ಅನ್ನಿಸುತ್ತಿದೆ. ಒಮ್ಮೆ ನಿನ್ನ ನೋಡಬೇಕು, ಎಲ್ಲೋ ಮೂಲೆಯಲ್ಲಿ ನಿಂತು ಕದ್ದಾದರೂ ಸರಿ. ಮತ್ತೆ ಒಂಚೂರು ಬಾಳುವ ಆಸೆ ಬದುಕೀತು ಅನ್ನಿಸಿದೆ. ಅದಕ್ಕೆ ಎಲ್ಲಾ ತೊರೆದು ಬರುತ್ತಿದ್ದೇನೆ ದೇವಕಿ. ಈಗೀಗ<br /><br />ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ<br />ಕಣ್ಣೆದುರೇ ಸುಳಿದಂತೆ ನನ್ನ ದೇವಕಿ<br />ಅಂತ ಹಾಡಿಕೊಳ್ಳುತ್ತಿದೆ ಮನಸ್ಸು!ದೇವಕಿhttp://www.blogger.com/profile/06098925153781447704noreply@blogger.com4tag:blogger.com,1999:blog-6213676171448221872.post-7795487415476825342009-08-09T08:19:00.000-07:002009-08-09T22:22:40.424-07:00ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇರಾತ್ರಿ ಮುಗಿದ ನಂತರ ಹಗಲು. ಕತ್ತಲ ನಂತರ ಬೆಳಕು. ಬಾಡಿದ ಹೂವು ಬಿದ್ದು ನೆಲ ಸೇರಿದರೂ ಮರುದಿನ ಬೆಳಿಗ್ಗೆ ಮತ್ತೊಂದು ಮೊಗ್ಗು.<br /><br /><div>ಇದು ಪ್ರಕೃತಿ ನಿಯಮ.<br /><br />ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ. ತಾನು ಕೊಡುವ ಪರಿಣಾಮಕ್ಕಿಂತ ಭೀಕರ ಸ್ಥಿತಿಯಲ್ಲಿರುವವನನ್ನು ಸಾವು ಕೂಡ ಏನು ಮಾಡೀತು ಎಂಬಂಥ ಪರಿಸ್ಥಿತಿ. ಸುನಾಮಿಯ ನಂತರ ದಡಕ್ಕಿನ್ನು ಅಲೆಯ ಭಯವಿಲ್ಲ. ಅಪ್ಪನ ಬೆಲ್ಟಿನ ರುಚಿ ತಿಂದ ಹುಡುಗನಿಗೆ ಮೇಷ್ಟರು ಕೋಲು ಬೆತ್ತ ತೋರಿದರೆ ಹೆದರುತ್ತಾನಾ? ಅಂತೆಯೇ ಬೇರೆ ನೋವುಗಳು ಬಳಿಬರಲೂ ಕೀಳರಿಮೆ ಹೊಂದುವಷ್ಟು ಪೆಟ್ಟು ತಿಂದಿದೆ ಮನಸ್ಸು.<br /><br />ಈಗ ಅದೇ ಪ್ರಕೃತಿ ನಿಯಮದ ಪ್ರಕಾರ ನನ್ನ ಬರುವ ನಾಳೆಗಳು ಚೆನ್ನಾಗಿರುತ್ತದಾ? ಈಗಿನಂತೆ ಹಗಲುಗಳು ದಹಿಸದೇ, ಅರಳುವಂತಾಗುತ್ತದಾ? ನಾನು ಮತ್ತೆ ಕನಸು ಕಾಣುವಂತಾಗುತ್ತೇನಾ? ನನ್ನೊಳು ಜೀವನ ಎಂದಿನಂತೆ ಪ್ರವಹಿಸುತ್ತದಾ? ಅದಕ್ಕೆಲ್ಲಾ ತನಗೇನೂ ಮಾಡಲಾಗದು ; ನಿನ್ನ ಸಹಿಯಿಲ್ಲದೇ ಎಂಬಂತೆ ಮುಗುಮ್ಮಾಗಿದ್ದಾನೆ ದೇವರು. ನಿನ್ನ ಪ್ರೀತಿ, ನನ್ನ ಉಸಿರು ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ನಿನ್ನ ಹೂಂ ಉಹೂಂ ಗಳ ಮಧ್ಯೆಯೇ ಜೋಕಾಲಿಯಾಡುತಿದೆ ನನ್ನ ಬದುಕು. ಪ್ರೀತಿಯೆಂದರೆ ಭೀಕರ; ಪ್ರೀತಿಯೆಂದರೆ ಸುಂದರ, ಈ ಎರಡು ವ್ಯಾಖ್ಯೆಗಳಿಗೆ ನಿನ್ನುತ್ತರವೇ ರಿಸಲ್ಟು.<br /><br />ಹೀಗೆ ನಿನಗೆ ಪತ್ರಗಳನ್ನೇಕೆ ಬರೆಯುತ್ತಿದ್ದೇನೆ. ತಲುಪುವ ಗುರಿಯಿಲ್ಲದ ಈ ಪತ್ರಗಳು ನನ್ನ ನೋವುಗಳನ್ನು ಇಂಗಿಸುತ್ತದಾ? ಕದವಿಕ್ಕಿಕೊಂಡಿರುವವರ ಮನೆಬಾಗಿಲು ಬಡಿದು ತನ್ನಿರವನ್ನು ತಿಳಿಸುತ್ತದಾ? ಎಂದೋ ಒಂದು ದಿನ ಇವೇ ನನ್ನ ಪ್ರೀತಿಯನ್ನು ಉಳಿಸುತ್ತದೆ ಎಂಬುದು ನನ್ನ ನಂಬಿಕೆಯಾ?<br /><br /><br />ನಿಜಕ್ಕೂ ವಿರಹದ ನೋವುಗಳನ್ನು ಬರಹಗಳು ತೊಡೆದುಹಾಕುತ್ತದಾ?</div>ದೇವಕಿhttp://www.blogger.com/profile/06098925153781447704noreply@blogger.com5tag:blogger.com,1999:blog-6213676171448221872.post-76229270711086698072009-08-08T02:12:00.000-07:002009-08-08T08:17:18.526-07:00ದೇವಕಿ ಹೆಸರಿನ ಅರಮನೆ ಮುರಿದು ಬಿದ್ದಿತ್ತು....ಅಲ್ಲಿ ನಿನ್ನ ಹೆಸರ ಮರಳಿನ ಮೇಲೆ ಬರೆದು ಮುಗಿಸಿದವನ ಕಂಗಳಲ್ಲಿ ಎಂತದೋ ದಿಗ್ವಿಜಯ ಸಾಧಿಸಿದ ಸೈನಿಕನ ಕಣ್ಣಲ್ಲಿದ್ದ ಹೊಳಪು. ನಿನ್ನ ಹೆಸರ ಸುತ್ತ ಮೂರು ಸುತ್ತು ಗಿರಗಿಟ್ಲೆಯಾಡಿದಂತೆ ಸುತ್ತು ಹೊಡೆದೆ. ಏನೋ ಸಂತೋಷ ಏನೋ ಉಲ್ಲಾಸ. ಬರೆದ ಹೆಸರಿನ ಮೇಲೆ ಮತ್ತೆ ಮತೆ ಕೈಯಾಡಿಸಿದೆ. ಹೆಸರಿಗೆ ಪ್ರೀತಿಯಿಂದ ಒಂದು ಮುತ್ತನ್ನಿಕ್ಕಿ ಹಾಗೆ ನೋಡುತ್ತಾ ನಿಂತೆ. ಒಂದು ಬಗೆಯ ಸಾರ್ಥಕತೆಯ ಭಾವ, ಅಳಿಸಿ ನನ್ನ ಮನದ ನೋವ, ಹಾಗೆ ಮರೆಯಾದಂತಾಯಿತು. ಹೆಸರ ಬರೆದು ಹಾಗೇ ದೇವಕೀ ಅನ್ನುತ್ತ ಸಾಗರ ತೀರದುದ್ದಕ್ಕು ಓಡುತ್ತಿದ್ದೆ. ಅಲ್ಲಿ ನಿನ್ನ ಬಗೆಗಿನ ನನ್ನ ಪ್ರೀತಿಯನ್ನ ಹೇಳಿಕೊಳ್ಳಲು ಯಾವ ಅಡೆತಡೆಗಳಿರಲಿಲ್ಲ. ಯಾರ ಕ್ರೂರ ದೃಷ್ಟಿಗಳೂ ಬೀಳುವ ಅಪಾಯವಿರಲಿಲ್ಲ ಸುತ್ತಲೂ ನೋಡಿದೆ ನನಗೆ ಅಲ್ಲಿ ಯಾವ ದೇವರುಗಳ ಕುರುಹುಗಳೂ ಕಣಿಸುತ್ತಿರಲಿಲ್ಲ. ದೇವಕಿ ಹೆಸರು ಬರೆದ ಮೇಲೆ ದೇವಕಿಗೊಂದು ಪುಟ್ಟ ಮನೆಯ ಮಾಡದಿದ್ದರೇ ಹೇಗೆ ಅಂದುಕೊಂಡು ಕುಳಿತಲ್ಲಿಯೆ ದೇವಕಿಗೆ ಒಂದು ಪುಟಾಣಿ ಗೂಡು ಕಟ್ಟಬೇಕೆನಿಸಿತು. ಪುಟ್ಟ ಗೂಡಾದರೂ ತುಂಬಾ ಪ್ರೀತಿಯಿಂದ ಗೂಡು ಹೆಣೆಯುತ್ತಿದ್ದೆ. ಅಷ್ಟು ಚಿಕ್ಕ ಗೂಡು ಕಟ್ಟೋವಾಗಲೂ ದೇವಕಿಗೋಸ್ಕರ ಒಂದು ಮಹಲನ್ನೇ ಕಟ್ಟುತ್ತಿದ್ದೇನೆ ಅನ್ನಿಸುತ್ತಿತು. ನಿನ್ನ ಮೇಲಿರುವಷ್ಟೇ ಪ್ರೀತಿಯನ್ನ ಅ ಗೂಡಿಗೂ ಧಾರೆಯೆರೆದು ಕಟ್ಟುತಿದ್ದೆ. ಶಾಂತವಾಗಿದ್ದ ಸಾಗರ ಇದ್ದಕ್ಕಿದ್ದಂತೆ ಭೋರ್ಗರೆದ ಶಬ್ಧ. ಆಕಾಶದಷ್ಟೆತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದವು. ಬರೆದ ದೇವಕಿಯ ಹೆಸರೇನಯಿತು ಅಂದುಕೊಂಡು ಹೆಸರಿದ್ದಲ್ಲಿಗೆ ಹೋಗಿ ನೋಡಿದರೇ ಅಲ್ಲಿ ನಿನ್ನ ಹೆಸರಿರಲಿಲ್ಲ. ನಿನ್ನ ಹೆಸರು ಇತ್ತು ಅನ್ನುವ ಕುರುಹುಗಳೂ ಅಲ್ಲಿ ನನಗೆ ಕಣಿಸಲಿಲ್ಲ. ದುಃಖ ಉಮ್ಮಳಿಸಿ ಬಂತು. ಹಿಂದಿರುಗಿ ನೋಡಿದರೇ ಮತ್ತೆ ನಿನಗೆ ಅಂತ ಕಟ್ಟಿದ್ದ ಗೂಡಿನ ಮೇಲು ಅಲೆಗಳು ಅಕ್ರಮಣ ಮಾಡುತ್ತಿದ್ದವು. ಹಾಳು ಸಮುದ್ರಕ್ಕೆ ಶಪಿಸುತ್ತ ಗೂಡು ಇದ್ದಲ್ಲಿಗೆ ಹೋಗಿ ದೇವಕಿ ಹೆಸರಿನ ಅರಮನೆ ಮುರಿದು ಬಿದ್ದಿತ್ತು.<br /><br /><br />ಈ ಜಗತ್ತಿನಲ್ಲಿ ನನಗೆ ದೇವಕಿಯೊಲವಿಗೆ ಆಸೆರೆಯಾಗುವಂತ ಒಂದೇ ಒಂದು ಜೀವವಿಲ್ಲವಾ ಎಂದು ಗಟ್ಟಿಯಾಗಿ ಕೂಗಬೇಕೆನ್ನಿಸಿತು. ಮತ್ತೆ ಶಾಂತವಾಗಿ ಮಲಗಿದ್ದ ಸಾಗರದತ್ತ ಧೈನ್ಯತೆಯಿಂದ ನೋಡಿ ಕಣ್ಣೀರಿಟ್ಟು ದೇವಕಿ ಹೆಸರು ಮತ್ತು ಅವಳಿಗೊಂದು ಪುಟ್ಟ ಗೂಡು ಕಟ್ಟುತ್ತಿದ್ದೆ.<br /><br /><br />ದೂರದಲ್ಲೇಲ್ಲೋ ಮತ್ತೆ ಅಲೆಯೇಳುತ್ತಿದ್ದ ಕುರುಹುಗಳು ಕಾಣಿಸುತ್ತಿದ್ದವು.ದೇವಕಿhttp://www.blogger.com/profile/06098925153781447704noreply@blogger.com5tag:blogger.com,1999:blog-6213676171448221872.post-21462194287311914192009-08-06T03:39:00.000-07:002009-08-07T23:55:50.789-07:00ಪ್ರಯಾಸವಾದರೂ ಓಕೆ ನಿನ್ನ ಮರೆಯಲಾರೆ.. ಮರೆಯಲಾಗದು...!!<div>ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸಪಟ್ಟಾದರೂ ಓಕೆ; ನಿನ್ನ ಮರೆಯಲೇಬೇಕು!<br /><br /></div><div>ಇನ್ನೆಷ್ಟು ದಿನ ಈ ವಿರಹದಲ್ಲೇ ಬದುಕಿದ್ದೂ ಸತ್ತಂತಿರಲು ಸಾಧ್ಯ? ಇನ್ನೆಷ್ಟು ದಿನ ಉಸಿರಾಡುವುದೇ ಭಾರ ಅನ್ನುವಂಥ ಸ್ಥಿತಿ? ಕಾಲಕ್ಕೇ ಬೊಜ್ಜು ಬಂದಂತೆ ಮೆಲ್ಲ ಮೆಲ್ಲ ಹೆಜ್ಜೆ? ಎಷ್ಟು ದಿನವೆಂದು ಆಯಸ್ಸಿಗೆ ವಿರಹದ ಲೆಕ್ಕ ಒಪ್ಪಿಸಬೇಕು? ಅದೆಷ್ಟು ಜನುಮ ಒಪ್ಪಿಗೆಯ ಮೀನಿಗಾಗಿ ಗಾಳ ಹಾಕುತ್ತ ಕುಳಿತ ಬೆಸ್ತನಾಗಲಿ? ಅದಕ್ಕಿಂತ ಒಳಗಿರುವ ನೆನಪನ್ನೆಲ್ಲಾ ಗುಡಿಸಿ ಹಾಕಿ ಎದೆಯಂಗಳದಲ್ಲಿ ಹೊಸ ರಂಗೋಲಿ ಹಾಕಿಬಿಡಬೇಕು.<br /><br /></div><div>ಅರಳಿ ನಿಂತ ಮಲ್ಲಿಗೆಯಲಿ ನಿನ್ನದೇ ನಗೆ..<br />ಹೂವಿನ ಮಕರಂದ ನಿನ್ನ ತುಟಿಯದೇ ಬಗೆ..<br /><br /></div><div>ಪ್ರತೀ ಕ್ಷಣ ಈಗ ನೀನಲ್ಲಿ ಏನು ಮಾಡುತ್ತಿರಬಹುದು ಅಂತ ಇನ್ನು ಊಹಿಸುತ್ತಾ ಇರಲ್ಲ. ದೇವರೆದುರು ನನ್ನ ಪ್ರಾರ್ಥನೆಯ ಜೋಳಿಗೆ ಬಿಚ್ಚುವಾಗ ನಿನ್ನ ಮೇಲಿನ ಕೋರಿಕೆಗೆ ಕೊನೆಯ ಸ್ಥಾನ. ಬಟ್ಟೆ ಅಂಗಡಿಯಲ್ಲಿನ ಬೊಂಬೆಗುಡಿಸಿದ ಡ್ರೆಸ್ಸು ನಿನಗೆ ಹೇಗೆ ಕಾಣಬಹುದು ಎಂದಿನ್ನು ಕಲ್ಪಿಸಿಕೊಳ್ಳುವುದಿಲ್ಲ. ನಿನ್ನ ಹೆಸರಿಟ್ಟುಕೊಂಡ ಅಂಗಡಿಯ ಮುಂದೆ ನಿಂತು ನಿನ್ನ ನೆನೆಸಿಕೊಳ್ಳುತ್ತಾ ಇನ್ನು ಮೈಮರೆಯೋದಿಲ್ಲ. ರಸ್ತೆ ತಿರುವಿನಲ್ಲಿ ನಿನ್ನನೊಮ್ಮೆ ಭೇಟಿ ಮಾಡಿದ ನೆನಪುಗಳನ್ನಿನ್ನು ಎಂದಿಗೂ ನೇವರಿಸೋಲ್ಲ. ನಿನ್ನ ನೆನಪುಗಳನ್ನು ತೀವ್ರವಾಗಿ ತರಿಸುವ ಭಾವಗೀತೆಗಳನ್ನಿನ್ನು ಗುನುಗುನಿಸಲ್ಲ. ದಿಂಬಿಗಿನ್ನು ಬೇರೆ ನಾಮಕರಣ; ನಿನ್ನ ಹೆಸರಲ್ಲ!<br /><br /></div><div>ಬೀಸಿ ಬಂದ ಗಾಳಿಯಲ್ಲಿ ನಿನ್ನ ಪರಿಮಳ..<br />ಮಾಮರದಲ್ಲಿ ನಿನ್ನದೇ ಗಾನಮಂಜುಳ...<br /><br /></div><div>ನಿನ್ನ ಕನಸುಗಳೇ ಬರುವುದಾದರೆ ನನಗಿನ್ನು ನಿದಿರೆಯೇ ಬೇಡ. ವಿರಹವನ್ನು ನೋಡಿ ನಗುವ ಚಂದಿರ ಇನ್ನು ನನ್ನ ಪಾಲಿಗಿನ್ನು ಕುರೂಪಿ. ಅವಳ ಕಣ್ಣುಗಳ ನೆನಪಿಸುವ ನಕ್ಷತ್ರಗಳನ್ನು ನೋಡುವುದು ಭಾದ್ರಪದ ಶುಕ್ಲಪಕ್ಷ ದಲ್ಲಿ ಚಂದಿರನನ್ನು ನೋಡಬಾರದೆಂಬಷ್ಟೇ ಸ್ಟ್ರಿಕ್ಟು. ಜೀವ ಹರಿದು ಹಾಕುವ ವಿರಹಕ್ಕೆ ಇನ್ನು ಅವಳ ನೆನಪುಗಳ ತೇಪೆಯಿಲ್ಲ! ಇನ್ಮೇಲೆ ನಾನು+ನೀನು= ನಾನು ಅಲ್ಲ!<br /><br /></div><div>ನಲ್ಲೇ, ನಿನ್ನ ಮರೆಯಲು ಏನೆಲ್ಲಾ ಮಾಡಿದೆ..<br />ಆದರೂ ಎಲ್ಲೆಲ್ಲೂ ನಿನ್ನಾ ನೆನಪೇ ಕಾಡಿದೆ!<br /><br /></div><div>*********<br />ಅಂತರಾತ್ಮನ ಮತ್ತು ನನ್ನ ಜಗಳ ಹೀಗೆ ಮುಗಿಯುತ್ತದೆ. ಅವಳನ್ನು ಮರೆಯಬೇಕು ಅನ್ನುವ ವಾಕ್ಯವನ್ನೇ ಅಂತರಾತ್ಮ ತಪ್ಪೆನ್ನುತ್ತದೆ. ಅವಳನ್ನು ಮರೆಯುವುದೆಂದರೆ ಅವಳೂ ನೀನೂ ಬೇರೆಯಾಗಬೇಕಲ್ಲವೇ? ಇಬ್ಬರೂ ಒಂದೇ ಆಗಿರುವಾಗ ಮರೆಯುವುದು, ತೊರೆಯುವುದು ಹೇಗೆ ಸಾಧ್ಯ ಅನ್ನುತ್ತದೆ. ಮೌನವಾಗಿ ಸೋಲೊಪ್ಪಿಕೊಳ್ಳುತ್ತೇನೆ. ಕವಿಯೊಬ್ಬನ ಭಾವಗೀತೆಯಂತಹ ಅಂತರಾತ್ಮನ ಮಾತು ವಿಜಯಿಯಾಗುತ್ತದೆ. ನನ್ನ ಮಾತುಗಳೆಲ್ಲ ತಿರುಗುಬಾಣ ಆಗುತ್ತದೆ.<br /><br /></div><div>"ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸವಾದರೂ ಓಕೆ ; ನಿನ್ನ ಮರೆಯಲಾರೆ; ಮರೆಯಲಾಗದು !....."</div>ದೇವಕಿhttp://www.blogger.com/profile/06098925153781447704noreply@blogger.com0tag:blogger.com,1999:blog-6213676171448221872.post-18052774712010353052009-08-05T21:04:00.000-07:002009-08-05T01:44:44.189-07:00ನಾನಿಲ್ಲಿ ಕತ್ತಲೆಯಲಿ ; ನಿನಗಲ್ಲಿ ಬೆಳಕು!"ಐ ಮಿಸ್ ಯೂ"<br />"ನೀನಿಲ್ಲದೇ ಬದುಕಿರೋಕೆ ಸಾಧ್ಯ ಇಲ್ಲ"<br />"ನೀ ಬಳಿಯಿರದ ನಿಮಿಷಗಳೆಲ್ಲ ವರುಷಗಳು"<br /><br /><br />ಇಂಥದ್ದೆಲ್ಲಾ ಸಾಲುಗಳನ್ನು ಸುಮ್ಮನೆ ಹರವಿಕೊಂಡು ಕುಳಿತಿದ್ದೇನೆ. ನನ್ನೆದೆಯ ನೋವಿಗೆ ಅದ್ಯಾವುದೂ ಸರಿಯಾದ ಪದವೆಂದು ಅನ್ನಿಸುತ್ತಿಲ್ಲ. ಚಲನಚಿತ್ರಗಳಲ್ಲಿ ಡೈಲಾಗ್ ಆಗಿ, ಆಕೆಯನ್ನು ಸುಮ್ಮನೆ ಮೆಚ್ಚಿಸಬೇಕೆಂದು ಎಸ್ಸೆಮ್ಮೆಸ್ಸುಗಳಲ್ಲಿ ಕೇವಲ ಬೆರಳುಗಳ ಕ್ರಿಯೆಗಾಗಿಯೇ ಆ ಪದಗಳು ಬಳಸಲ್ಪಟ್ಟಿರುವಾಗ, ವಿರಹದಿಂದ ವಿಲಪಿಸುತ್ತಿರುವ, ನಿನ್ನ ಒಂದು ಭೇಟಿಗಾಗಿ ಪರಿತಪಿಸುತ್ತಿರುವ ಎದೆಯ ಭಾವಕ್ಕೆ ಅದೇ ಪದಗಳನ್ನು ಹೇಗೆ ಬಳಸಲಿ ಹೇಳು? ಯಾವುದಕ್ಕೂ ಎದೆಯ ಬೇಗೆಯನ್ನು ಶಮನ ಮಾಡಲು ತಾಕತ್ತಿಲ್ಲ.<br /><br /><br />ಇಲ್ಲಿ ಈ ದೂರದೂರಿನಲಿ ನನ್ನ ಪಾಡನ್ನು ಬೇರೆ ಹೇಗೆ ತಿಳಿಸಲಿ ನಿನಗೆ? ನಿನ್ನದೇ ಊರಲ್ಲಿದ್ದಿದ್ದರೆ ಆಕಾಶದಲಿ ಮಲ್ಲಿಗೆಯಂತರಳಿದ ನಕ್ಷತ್ರವೊಂದು ಕಣ್ಣು ಮಿಟುಕಿಸಿ ನೋಡುತಿರುವಾಗ ಅದೇ ಕ್ಷಣ ನೀನೂ ಅದೇ ನಕ್ಷತ್ರವನ್ನೇ ನೋಡುತ್ತಿದ್ದಿರಬಹುದಾ ? ನಮ್ಮಿಬ್ಬರ ವಿರಹವನ್ನು, ಪಡುತಿರುವ ಪಾಡನ್ನು ಕಂಡೇ ಅದು ಪಿಳಿಪಿಳಿಸುತ್ತಿರುವುದಾ ಅಂತೆಲ್ಲಾ ಅಂದುಕೊಳ್ಳಬಹುದಿತ್ತು.<br /><br /><br />ವಿಪರ್ಯಾಸ ನೋಡು; ಈಗ ನಾನಿಲ್ಲಿ ಕತ್ತಲೆಯಲಿ; ನಿನಗಲ್ಲಿ ಬೆಳಕು! ಒಂಟಿಸೂರ್ಯನೊಬ್ಬ ಹಗಲ ಕ್ಷಣಗಳನ್ನು ಹೇರಿಹೋದ ನೋವಲ್ಲಿ ಒದ್ದಾಡಿದಕ್ಕಾಗಿ ನನಗಿಲ್ಲಿ ಸಾವಿರ ಸಾವಿರ ನಕ್ಷತ್ರಗಳ ಸಮಾಧಾನ. ಕಲೆಗೊಂಡ ಮೊಗದಲ್ಲೂ ಚಂದಿರನ ಸಾಂತ್ವನ ನೀಡುವ ನಗು. ಈ ದಿವ್ಯ ಮೌನದ ರಾತ್ರಿ, ಬೆಳದಿಂಗಳು, ಚುಕ್ಕಿಗಳು ಎಲ್ಲಾ ಒಟ್ಟಾಗಿ ಒಳಹರಿವಿನಲ್ಲಿ, ದೇವಕಿ ನಿನ್ನವಳೇ ಅಂತ ನನಗೆ ಸಮಾಧಾನ ನೀಡದೇ ಹೋಗಿದ್ದರೆ ರಾತ್ರಿಗಳು ಉರುಳುವುದಾದರೂ ಹೇಗಿತ್ತು?<br /><br /><br />ನಾನು ಉಳಿಯುವುದಾದರೂ ಹೇಗಾಗುತ್ತಿತ್ತು?!ದೇವಕಿhttp://www.blogger.com/profile/06098925153781447704noreply@blogger.com5tag:blogger.com,1999:blog-6213676171448221872.post-91799928161711856842009-08-04T07:44:00.000-07:002009-08-04T07:45:14.970-07:00ಈ ಕನಸಿನ ಕ್ಷಣ ದೇವಕಿ ನನ್ನಿಂದ ತಪ್ಪಿಹೋಗಿದ್ದು ಹೇಗೆ?<div>ತಂದೆ-ತಾಯಿಯ ಆಶೀರ್ವಾದದಿಂದ, ಅವರ ಪುಣ್ಯದ ಫಲವಾಗಿ ನನಗೆ ಆಯಸ್ಸು ಹೆಚ್ಚಿರುತ್ತದೆ. ಲೆಕ್ಕ ಪತ್ರ ನೋಡುವಂತೆ ನನ್ನ ಭವಿಷ್ಯ ನೋಡಿದ ಚಿತ್ರಗುಪ್ತ ಆಶ್ಚರ್ಯಚಕಿತನಾಗುತ್ತಾನೆ. ದೇವರ ಬಳಿ ಅದನ್ನು ಕೊಂಡೊಯ್ದು ಕಂಪ್ಲೇಂಟ್ ಕೊಡುತ್ತಾನೆ. ಒಬ್ಬ ಮನುಷ್ಯನಿಗೆ ಹೀಗೆ ಯುಗಗಳ ಕಾಲ ಬದುಕುವ ಅವಕಾಶವಿರುವುದಿಲ್ಲ; ಹಾಗೆ ಮಾಡಿದರೆ ಪ್ರಕೃತಿ ವಿನಾಶವಾಗುತ್ತದೆ ಅಂತೆಲ್ಲಾ ಅನ್ನುತ್ತಾನೆ. ದೇವರಿಗೆ ನಿಜಕ್ಕೂ ಪೇಚಿಗಿಟ್ಟುಕೊಳ್ಳುತ್ತದೆ. ಅತ್ತ ಪುಣ್ಯಫಲಗಳ ಲೆಕ್ಕಾಚಾರವನ್ನು ಧಿಕ್ಕರಿಸುವಂತೆಯೂ ಇಲ್ಲ; ಇತ್ತ ಯುಗಗಳ ಕಾಲ ಆಯಸ್ಸು ಕೊಡುವಂತೆಯೂ ಇಲ್ಲ. ದೇವರಿಗೂ ಒಂದು ಐಡಿಯಾ ಪಕ್ಕನೆ ಹೊಳೆಯುತ್ತದೆ. ಇವನ ಪ್ರೇಯಸಿಯಿಂದ ಇವನನ್ನು ಕೆಲಕಾಲ ದೂರವಿಡಿ. ಅವನ ಕ್ಷಣಗಳೂ ಯುಗಗಳಂತೆ ಕಳೆಯುತ್ತದೆ. ಬಾಳು ಕ್ಷಣಗಳೇ ಆದರೂ ಯುಗವೊಂದು ಬದುಕಿದಂತೆ ಆಗುತ್ತದೆ.</div><div><br /></div><div>ಪಕ್ಕನೆ ಎಚ್ಚರಾಯಿತು. ಕಂಡಿದ್ದು ಕನಸು. ಹೀಗೆ ಇಂಥಾ ಪರದೇಶದ ಯಾವುದೋ ಒಂದು ಮೂಲೆಯಲ್ಲಿ ನನಗಾಗಿಯೇ ದೇವರು ಕೊಟ್ಟ ದೇವಕಿಯನ್ನು ಕ್ಷಣ ಕ್ಷಣವೂ ನೆನೆಸಿಕೊಳ್ಳುವಾಗ ಇಂಥ ಕನಸು ಮೂಡಿದ್ದು ಹೇಗೆ? ಈ ಕನಸಿನ ಕ್ಷಣ ನನ್ನಿಂದ ದೇವಕಿ ತಪ್ಪಿಹೋಗಿದ್ದು ಹೇಗೆ? ಇದೇ ನಿಜವಿರಬಹುದಾ? ಅವಳಿಂದ ನನ್ನ ದೂರ ಮಾಡಲು ದೇವರು ಹೂಡಿದ ತಂತ್ರವಿರಬಹುದಾ? ಎಂಥೆಂಥಾ ಕೆಟ್ಟಪ್ರೀತಿಗಳ ಮೇಲೂ ಅವನು ಕರುಣೆ ತೋರುತಿರುವಾಗ, ಅಂಥದ್ದೆಲ್ಲ ಯಶಸ್ಸು ಕಾಣುತಿರುವಾಗ, ನನ್ನ-ದೇವಕಿಯ ಕತೆಯೇಕೆ ಹೀಗೆ?</div><div><br /></div><div>ದೇವರದ್ದೇ ಕಣ್ಣು ಬಿದ್ದಿರಬಹುದಾ?!</div>ದೇವಕಿhttp://www.blogger.com/profile/06098925153781447704noreply@blogger.com2tag:blogger.com,1999:blog-6213676171448221872.post-81194891507082726132009-08-03T04:44:00.000-07:002009-08-03T04:47:07.337-07:00ನೀನೆಂಬುದು ಬ್ರಹ್ಮ ನನ್ನ ಹಣೆಯಲಿ ಬರೆದ ಪದವಲ್ಲ...<span class="Apple-style-span" style="border-collapse: separate; color: rgb(0, 0, 0); font-style: normal; font-variant: normal; font-weight: normal; letter-spacing: normal; line-height: normal; orphans: 2; text-indent: 0px; text-transform: none; white-space: normal; widows: 2; word-spacing: 0px;font-family:'Times New Roman';font-size:100%;" ><span class="Apple-style-span" style="border-collapse: collapse;font-family:arial;" >ದೇವರು ಕೊಟ್ಟ ವರ ಕಿತ್ಕೊಳ್ಳಲ್ಲ!<br /><br />ಕಳ್ಳಕತ್ತಲೊಂದು ಹೊರಹೋಗುತ್ತಾ ಹೊಸ್ತಿಲಲಿ ಎಡತಾಕುವ ಸಮಯದಲ್ಲಿ ಹುಟ್ಟಿದ ಕನಸು<br />ನೀನು. ಮುಂಜಾವು, ಹೀಗೆ ನನಸುಗಳಾಗುವ ಕನಸುಗಳನು ಹೊತ್ತು ತರದೇಹೋಗಿದ್ದಿದ್ದರೆ ಇಡೀ ದಿನವೆಂಬ ಈ ಇಪ್ಪತ್ನಾಲ್ಕು ಘಂಟೆಗಳು ಕಳೆಯುವುದು ಹೇಗಾಗುತ್ತಿತ್ತು? ಮುಂಜಾವಿನ ಕನಸುಗಳು ನಿಜವಾಗುತ್ತದೆ ಎಂಬ ಮಾತಿನ ಅರಿವಿದ್ದುದರಿಂದಲೇ ಅಪರಾತ್ರಿಗಳಲ್ಲಿ ಎಚ್ಚರವಾಗಿರುತ್ತಿದ್ದೆನಾ? ಗೊತ್ತಿಲ್ಲ.<br /><br />ನೀನೆಂಬುದು ಬ್ರಹ್ಮ ನನ್ನ ಹಣೆಯಲಿ ಬರೆದ ಪದವಲ್ಲ ಅನ್ನಿಸುವ ಈ ಕ್ಷಣಗಳ ಈಟಿ ಎದೆಗೆ ನೀಡುವ ನೋವನ್ನು ಯಾವ ರೀತಿ ತೋಡಿಕೊಳ್ಳಲಿ? ಕೊನೆಯ ಪಕ್ಷ ನನ್ನ ಕೊನೆಯ ಸಾಲಾದರೂ ನಿನಗೆ ತಲುಪುತ್ತದೆ ಎಂಬ ಕಿಂಚಿತ್ ಭರವಸೆ ಇಲ್ಲದೆಯೂ ಬರೆಸಿಕೊಳ್ಳುತಿರುವ ಈ ಸಾಲುಗಳ ಋಣ ದೊಡ್ಡದು. ಅವು ನನಗೆ ನೀಡುತಿರುವ ಬದುಕಿನೆಡೆಗಿನ ಪ್ರೀತಿ ದೊಡ್ಡದು.<br /><br />ಒಬ್ಬ ಅಂಬಿಗನ ಎಕ್ಸ್ ಪೀರಿಯೆನ್ಸ್, ಕುಶಲತೆ ಏನೂ ಕೇಳದೇ ನದಿ ದಾಟಲು ದೋಣಿ ಹತ್ತಿಕೊಳ್ಳುತ್ತೇವಲ್ಲ ಅಂಥದ್ದೇ ನಿಶ್ಕಲ್ಮಶ ನಂಬುಗೆಯೊಂದಿಗೆ ದೇವರನ್ನು ನಂಬಿ ನಿನ್ನನ್ನು ಪ್ರೀತಿಸ್ತಿದ್ದೀನಿ. ಕೈಕೊಟ್ಟ ಹುಡುಗಿಯರ ಎಷ್ಟೋ ಕತೆಗಳಿದ್ದರೂ<br />ಅವನ್ನೆಲ್ಲಾ ಮನಸಲ್ಲಿ ಗುಡಿಸಿ ಹಾಕಿ ಮತ್ತೆ ಮತ್ತೆ ಪ್ರೀತಿಯೆಡೆಗೆ ತುಡಿಯುವ ಹುಡುಗನ ಪ್ರಾಮಾಣಿಕ, ಮುಗುದ ಮನಸ್ಸಿನ ಹಿಂದೆ ದೇವರ ಕೈ ಇರದೇ ಇರುತ್ತದಾ ಹೇಳು?<br /><br />ಸಧ್ಯಕ್ಕೆ ನನ್ನ ಉಸಿರೆಳೆಸುತ್ತಿರುವುದು ಒಂದೇ ಒಂದು ನಂಬಿಕೆ :<br />ದೇವರು ಕೊಟ್ಟ ವರವನ್ನು ಹಾಗೆಲ್ಲ ಮತ್ತೆ ಕಿತ್ತುಕೊಳ್ಳುವ ಕಟುಕನಲ್ಲ!<br /><br />ಹೌದಲ್ವಾ ದೇವಕೀ..?</span></span>ದೇವಕಿhttp://www.blogger.com/profile/06098925153781447704noreply@blogger.com7tag:blogger.com,1999:blog-6213676171448221872.post-12909249975052163402009-07-30T08:28:00.000-07:002009-07-30T09:14:23.476-07:00ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ.ದೇವಕಿ ಪ್ರೀತಿಯಲ್ಲಿ ಹೇಳಿಕೊಂಡಿದ್ದನ್ನ ಮತ್ತು ಹೇಳಿಕೊಳ್ಳಲಾಗದೇ ಇದ್ದಿದ್ದನ್ನ ಒಂದು ತಕ್ಕಡಿಯಲ್ಲಿ ಹಾಕಿ ತೂಗಿದರೆ ಹೇಳಿಕೊಳ್ಳಲಾಗದ್ದೇ ಹೆಚ್ಚು ತೂಗುತ್ತಂತೆ ನಿಜವಾ? ಬಹುಶ ಈ ಪತ್ರವನ್ನ ಓದಿದ ಮೇಲೆ ನಿನಗೆ ನನ್ನ ಮಾತು ನಿಜವನ್ನಿಸಿದರೂ ಅನ್ನಿಸಬಹುದು. ಅಥವ ಇವನೊಬ್ಬ ಸುಳ್ಳ ಅಂತನೂ ಅನ್ನಿಸಿ ಪತ್ರವನ್ನ ಹರಿದೆಸೆದು ನಿರ್ಲಪ್ತತೆಯಿಂದ ಸುಮ್ಮನಿದ್ದುಬಿಡಬಹುದು. ನಿಜ ದೇವಕಿ, ನಿನ್ನ ಮುಂದೆ ಇಲ್ಲಿಯವರೆಗೂ ಹೇಳಲಾರದ ಸಣ್ಣ ಸಣ್ಣ ಸಂಗತಿಗಳು ತುಂಬಾನೆ ಇವೆ. ಸಣ್ಣ ಸಂಗತಿಗಳಾದರೂ ಅದರಲ್ಲಿ ತುಂಬು ಪ್ರೀತಿಯ ಸಾರ್ಥಕತೆ ಇದೆ. ನಿಜವಾದ ಪ್ರೇಮಿಗಳಿಗೆ ಸಣ್ಣ ಸಣ್ಣ ಸಂಗತಿಗಳೂ ಕೂಡ ಬೆಟ್ಟದಷ್ಟು ದೊಡ್ಡದಾದ ನೆಮ್ಮದಿಯನ್ನ ಕೊಡುತ್ತವಂತೆ.<br /><br /><br /><br />ನಿಜ ಹೇಳ್ತ ಇದ್ದೀನಿ ಕೆಲವೊಮ್ಮೆ ನಿನ್ನ ಹಣೆಗೊಂದು ಮುತ್ತು ಕೊಡಬೇಕೆನ್ನಿಸುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲ ನಿನ್ನನ್ನ ಯಾವತ್ತೂ ದೂರಾಗದ ಹಾಗೆ ಗಟ್ಟಿಯಾಗಿ ತಬ್ಬಿಹಿಡಿದು ಕುಳಿತುಬಿಡಬೇಕು ಅನ್ನಿಸುತ್ತಿತ್ತು. ನೂರಾರು ಕಿಲೋಮೀಟರುಗಳ ದೂರವನ್ನ ಒಂದೇ ಒಂದು ಮಾತನಾಡದೆ ನಿನ್ನ ಕಿರುಬೆರಳ ಹಿಡಿದು ನಡೆಯಬೇಕೆನ್ನಿಸುತ್ತಿತ್ತು. ಸುರಿವ ಸ್ವಾತಿ ಮಳೆಯಲ್ಲಿ ನಾನೆ ನಿನ್ನ ಭುಜಕ್ಕೊರಗಿಕೊಂಡು ಪ್ರೇಮಕವಿ ಕೆ.ಎಸ್.ಎನ್ ಅವರ ಒಂದು ಪೂರ್ತಿ ಕವಿತೆಯನ್ನ ನಿನಗೆ ಓದಿಹೇಳಬೇಕೆನ್ನಿಸಿದ್ದು ಸುಳ್ಳಲ್ಲ. ಇದ್ದಕ್ಕಿದ್ದಂತೆ ಕಣ್ಮುಚ್ಚಿ ಉಸಿರು ಕಟ್ಟಿದ ಹಾಗೆ ನಾಟಕವಾಡಿ ನೀನು ಗಾಬರಿ ಬೀಳೋದನ್ನ ಕದ್ದು ನೋಡಿ ನೀನೆಷ್ಟು ಪ್ರೀತಿಸುತ್ತಿಯ ಎಂದು ನಿನ್ನ ಕಿವಿಯಲ್ಲಿ ಹೇಳಿ ಕಣ್ಣು ತುಂಬಿಕೊಳ್ಳಬೇಕೆನ್ನಿಸುತ್ತಿತ್ತು. ದೇವರ ಸನ್ನಿಧಿಯಲ್ಲಿ 3 ಸುತ್ತಿನ ಬದಲು ಮೂವತ್ಮೂರು ಸುತ್ತುಗಳನ್ನ ನಿನ್ನನ್ನ ಹೊತ್ತು ತಿರುಗಿಸಬೇಕೆನ್ನಿಸುತ್ತಿತ್ತು. ಸನಿಹವಿದ್ದಾಗ ನಿನ್ನ ಪ್ರೀತಿಯನ್ನ ದೂರವಿದ್ದಾಗ ನಿನ್ನ ವಿರಹವನ್ನ ಮನಸಾರೆ ಅನುಭವಿಸುವ ಆಸೆಯಾಗುತ್ತಿತ್ತು.<br /><br /><br /><br />ಹೇಳೋಕೆ ತುಂಬಾನೆ ಇದೆ ದೇವಕಿ. ಕೆಲವು ಕಾರಣಗಳು ನಿನಗೆ ಸಿಲ್ಲಿ ಅನ್ನಿಸಬಹುದು. ಆದರೇ ಕೇವಲ ಭಾವನೆಗಳಲ್ಲೆ ಬದುಕುವ ನನ್ನಂತವರ ಪಾಲಿಗೆ ಈ ಸಣ್ಣ ವಿಷಯಗಳು ಸಣ್ಣ ವಿಷಯಗಳೇನು ಅಲ್ಲ. ಹೀಗೆ ನಿನ್ನ ಬಗ್ಗೆ ಏನೇ ಬರೆದರೂ ಅದು ಯಾಕೋ ಪ್ರೀತಿಯಲ್ಲೇ ಮುಕ್ತಾಯವಾಗುತ್ತದೆ. ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ. ಈ ಅಸಹಾಯಕತೆಗೆ ಏನನ್ನಲಿ?ದೇವಕಿhttp://www.blogger.com/profile/06098925153781447704noreply@blogger.com3tag:blogger.com,1999:blog-6213676171448221872.post-39483497911293069892009-07-29T08:01:00.000-07:002009-07-29T08:33:20.646-07:00ಈ ಒಂದು ಜನ್ಮದಲ್ಲಾದರೂ ನೀನು ನನ್ನ ಜೊತೆಗಿರಬೇಕುಮನುಷ್ಯ ತೀರಾ ಅಸಹಾಯಕನಾದಾಗ ಏನಾಗುತ್ತಾನೆ?<br /><br />ಪ್ರತಿಯೊಬ್ಬರೂ ಅವರಿಗೆ ತೋಚಿದ ಒಂದೊಂದು ಕಾರಣಗಳನ್ನ ಕೊಟ್ಟುಕೊಳ್ಳಬಹುದು. ಆದರೆ ವಾಸು ಹೇಳೋದು, ಮನುಷ್ಯ ತೀರಾ ಅಸಹಾಯಕನಾದಾಗ ಅವನು ಮಗುವಾಗುತ್ತಾನೆ. ಆ ಸಮಯದಲ್ಲಿ ಈ ಜಗತ್ತಿನ ಯಾವ ಸುಖ ಸಂತೋಷಗಳೂ ಅವನಿಗೆ ಏನೆಂದರೆ ಏನೂ ಅನ್ನಿಸುವುದಿಲ್ಲ. ಅಲ್ಲಿಯವರೆಗೆ ತನ್ನೊಳಗೆ ತಾನೆ ಕಟ್ಟಿಕೊಂಡ ಕೆಲವು ಆಪ್ತ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತವೆ. ಹೊಸ ಸಂಬಂಧಗಳೆಡೆ ಅಂತಾ ವ್ಯಾಮೋಹವಿರುವುದಿಲ್ಲ. ಜಗತ್ತೇ ಮುಗಿದು ಹೋಯಿತೇ ಅಂದುಕೊಳ್ಳುತ್ತಾನೆ. ಅವತ್ತಿನಿಂದಲೇ ಅವನ ಬದುಕಲ್ಲಿ ಇನ್ನು ಸೂರ್ಯಾಸ್ತ ಮತ್ತು ಸೂರ್ಯೋದಯವಾಗುವುದೇ ಇಲ್ಲವೇನೋ ಅಂದುಕೊಂಡು ಕಣ್ಮುಚ್ಚಿಬಿಡುತ್ತಾನೆ.ಬದುಕ ಕಟ್ಟುವ ಯಾವ ಹಾಡುಗಳೂ ಸುಂದರವಾಗಿ ಕೇಳಿಸುವುದಿಲ್ಲ. ತನ್ನ ಮೇಲಿನ ತನಗಿದ್ದ ನಂಬಿಕೆಯನ್ನೆ ಓರೆಗೆ ಹಚ್ಚಿನೋಡು ಅಂತ ಪ್ರತಿ ಸಲ ಮನಸ್ಸು ಹೇಳುತ್ತಲೇ ಇರುತ್ತೆ. ಮತ್ತೆ ತನ್ನ ಕನಸುಗಳೇ ಚಿಗುರುವುದಿಲ್ಲ ಅಂದುಕೊಂಡವನು ಮತ್ತೆ ಹೊಸ ಕನಸುಗಳೆಡೆ ಕೈಚಾಚುವ ಮಾತು ಇನ್ನು ದೂರವೆ.<br /><br />ದೇವಕಿ ಅದೇ ಅಸಹಾಯಕತೆಯಲ್ಲಿ ನಾನಿದ್ದೀನಿ. ನನಗೆ ಮೇಲೆ ನಾನು ಹೇಳಿದ ನನ್ನ ಸಾಲುಗಳು ನಿನ್ನಾಣೆ ಅನ್ವಯಿಸುವುದಿಲ್ಲ. ಈ ಅಸಹಾಯಕತೆಯಲ್ಲಿ ನನಗೆ ನೀನು ಬೇಕು ಅನ್ನಿಸುತ್ತಿದೆ. ಬದುಕಿನ ತುತ್ತ ತುದಿಯವರೆಗೂ ನಿನ್ನ ಮುದ್ದಾದ ಕೈಬೆರಳುಗಳನ್ನ ಹಿಡಿದು ಸಾಗಬೇಕೆಂಬ ಆಸೆಯಾಗುತ್ತಿದೆ. ಯಾವತ್ತೂ ಮತ್ತೆ ನನ್ನಿಂದ ಕೈ ಜಾರದೇ ಇರುವ ಹಾಗೆ ಗಟ್ಟಿಯಾಗಿ ಹಿಡಿದುಕೊಂಡು ಹೆಜ್ಜೆಯ ಹಾಕಬೇಕು ಅಂತ ಅನ್ನಿಸುತ್ತಿದೆ. ಪ್ಲೀಸ್ ಈ ವಾಸು ತುಂಬಾ ದೊಡ್ಡದಾದ ಕೋರಿಕೆಯನ್ನೇನು ನಿನ್ನ ಮುಂದೆ ಸಲ್ಲಿಸುತ್ತಿಲ್ಲ. ನನಗೆ ಈ ಹಾಳು ಏಳು ಜನುಮಗಳಲ್ಲಿ ನಂಬಿಕೆಯಿಲ್ಲ ದೇವಕಿ. ಈ ವಾಸು ಬದುಕಿರುವ ಈ ಒಂದು ಜನ್ಮದಲ್ಲಾದರೂ ನೀನು ನನ್ನ ಜೊತೆಗಿರಬೇಕು ಅನ್ನಿಸುತ್ತಿದೆ.<br /><br />ಹೇಳು ವಾಸು ಪ್ರೀತಿಗೆ ಒಂದು ಜನುಮದ ಭಿಕ್ಷೆಯನ್ನಾದರು ಕೊಡುತ್ತೀಯ ಅಲ್ಲವಾ?ದೇವಕಿhttp://www.blogger.com/profile/06098925153781447704noreply@blogger.com3tag:blogger.com,1999:blog-6213676171448221872.post-45511708485318246412009-07-28T21:04:00.000-07:002009-07-29T08:00:07.013-07:00ಬಿಕ್ಕುವಿಕೆಯನ್ನ ಮರೆಮಾಚಲು ಆ ಮಳೆಗೂ ಸಾಧ್ಯವಾಗಲಿಲ್ಲ.ಕಣ್ಮುಚ್ಚಿ ಕುಳಿತಿದ್ದೆ. ಕಣ್ಣುಗಳಲ್ಲಿರುವ ನಿನ್ನ ನೆನಪಾದರೂ ಜೊತೆಗಿರಲಿ ಅನ್ನುವ ಸಣ್ಣ ಆಸೆಯಿಂದ. ಕಣ್ಣೀರಿನೊಂದಿಗೆನಿನ್ನ ನೆನಪುಗಳು ಹೊರಹೆಜ್ಜೆ ಹಾಕದಂತೆ ತುಂಬಾ ಜಾಗ್ರತೆವಹಿಸಿದ್ದೆ. ಆದರೇ ನನ್ನ ಸಣ್ಣ ಆಸೆಯನ್ನೂ ಪಕ್ಕಸರಿಸಿ ಕಣ್ಣುಗಳು ಸೋಲೊಪ್ಪಿಕೊಂಡವು ಗೆಳತಿ. ನನ್ನೆದುರೇ ನೀನು ಹನಿಗಳ ರೂಪದಲ್ಲಿ ನನ್ನಿಂದ ಕೆಳಗಿಳಿಯುತ್ತಿದ್ದೆ. ಒಂದು ಯಾತನಾದಾಯಕವಾದ ಮುಖಭಾವ ಹೊತ್ತುಕೊಂಡು ದಿಗಂತದಾಚೆ ದೃಷ್ಟಿ ಹಾಯಿಸುತ್ತಾ ನಿಂತಿದ್ದೆ. ಅಲ್ಲಾದರೂ ಕಾಣಬಹುದೇ ನೀನೆಂದು. ಅಲ್ಲಿ ಕಂಡಿದ್ದು ಸುಡುವ ಸೂರ್ಯ, ಅಣಕಿಸುವ ವಿಶಾಲ ಆಕಾಶದ ನೀಲಿ ನೀಲಿ. ಕೆಳಗೆ ವಿಶಾಲ ರಂಗಮಂದಿರದಂತಹ ಸುಡುವ ಬಯಲು. ಅಲ್ಲಿ ಜೀವಂತಿಕೆಯ ಯಾವ ಕುರುಹುಗಳು ನನಗೆ ಕಾಣಿಸಲಿಲ್ಲ. ವಿಶಾಲ ಬಯಲು ಸುಡುವ ಬಿಸಿಲು ತಾಳಲಾರದೇ ಹಾಗೆ ಮಲಗಿಕೊಂಡಿತ್ತು.<br />ಮತ್ತದೇ ನನ್ನಿಷ್ಟದ ಹಾಡುಗಾರನ ಹೇಳಿ ಹೋಗು ಕಾರಣಾ...<br />ಹೋಗುವಾ ಮೊದಲೂ....ಕಾಡುವುದಕ್ಕೆ ಶುರುವಾಯಿತು ...ಅದು ಆ ಸೂರ್ಯನಿಗೂ ಗೊತ್ತಯಿತು ಅನ್ನಿಸುತ್ತೆ...<br /><br />ಸುಡುವ ಸೂರ್ಯ ಸರಿಯತೊಡಗಿದ. ತಂಪಾದ ಮೋಡಗಳ ಮೆರವಣಿಗೆ ಆರಂಭವಾಗಿತ್ತು.. ಕೂಡಲೇ ಕೆಲವು ಮಕ್ಕಳೆಲ್ಲ ಹೋ ಎಂದುಕೊಂಡು ಬಂದು ಯಾವುದೋ ಆಟಗಳನ್ನ ಹಚ್ಚಿಕೊಂಡರು. ನನಗೆ ಕೆಳಗಿಳಿದು ಹೋಗಿ ಮಕ್ಕಳಲ್ಲಿ ಮಗುವಾಗಬೇಕೆನ್ನಿಸಿತು. ಕೆಳಗಿಳಿದು ಹೋದೆ. ನಿಧಾನವಾಗಿ ಮಳೆಯ ಹನಿಗಳು ಸುಡುವ ಬಯಲಿಗೆ ಮುತ್ತಿಕ್ಕತೊಡಗಿದ್ದವು. ಮಕ್ಕಳೆಲ್ಲ ಒದ್ದೆಯಾದರು, ಮುದ್ದೆಯಾದರು. ಮಳೆ ಮಕ್ಕಳಿಗೆ ಹಳೆಯ ನೋವುಗಳನ್ನೆಲ್ಲ ಮರೆಸಿ ಒಂದಷ್ಟು ಹೊಸ ನಗುವನ್ನ ಅವರ ಗಲ್ಲಗಳಿಗೆ ತುಂಬಿ ಕಳಿಸಿತ್ತು. ಮರುಭೂಮಿಯಂತ ನೆಲಕ್ಕೆ ಒಂದಿಷ್ಟು ಹಸಿರ ಬಟ್ಟೆಯನ್ನ ತೊಡಿಸಿತ್ತು. ಮಲ್ಲಿಗೆ ಸಂಪಿಗೆ ಬಳ್ಳಿಗಳು ಚಿಗುರೊಡೆಯುತ್ತಿದ್ದವು. ಗುಲಾಬಿ ಗಿಡದ ಸಂಬ್ರಮ ಮಾತಿನಲ್ಲಿ ಹೇಳೋಂತದ್ದಲ್ಲ. ಚಿಟ್ಟೆಗಳೆಲ್ಲ ಶ್ರಿಂಗಾರ ಬಂಗಾರ ಮಾಡಿಕೊಂಡವರತೆ ಮೆರವಣಿಗೆ ಹೊರಟಿದ್ದವು.ಆ ಹೊತ್ತಿಗಾಗಲೇ ಗಂಡ ಹೆಂಡತಿಯರು ಗೂಡು ಸೇರಿ ಚಳಿಗೆ ಜ್ವರ ಬರಿಸುತ್ತಿದ್ದರು. ಗೆಳತಿಯರು ಆ ಚಳಿಗೆ ಗೆಳೆಯರ ಎದೆಯ ಕೂದಲಿನ ಲೆಕ್ಕ ಸಿಗದೆ ಪರಿತಪಿಸುತ್ತಾ ಚಳಿಗೆ ಶಪಿಸುತ್ತ ಮತ್ತು ವಂದಿಸುತ್ತ ಹುಸಿಮುನಿಸು ತೋರಿಸುತ್ತಿದ್ದರು. ಒಂದು ಮಳೆ ಒಂದು ಕ್ಷಣದಲ್ಲಿ ಏನೆಲ್ಲವನ್ನ ಬದಲಿಸಿತ್ತು.<br /><br />ಆದರೆ ಆದರೆ ವಾಸು ಹಾಗೆ ಮಳೆಯಲ್ಲಿ ನಿಂತೇ ಇದ್ದ. ಮಾಮೂಲಿನಂತೆ ಮಳೆಯಲ್ಲಿ ಅಳುವಾಗ ಕಣ್ಣೀರೇನೋ ಕಾಣಿಸುತ್ತಿರಲಿಲ್ಲ.ಆದರೆ ಹೃದಯದ ಬಿಕ್ಕುವಿಕೆಯನ್ನ ಮರೆಮಾಚಲು ಆ ಮಳೆಗೂ ಸಾಧ್ಯವಾಗಲಿಲ್ಲ.ದೇವಕಿhttp://www.blogger.com/profile/06098925153781447704noreply@blogger.com1tag:blogger.com,1999:blog-6213676171448221872.post-63672571012745661362009-07-27T05:04:00.000-07:002009-07-27T08:58:17.417-07:00ದೇವಕಿ ಬದುಕಿನ ಪುಟಗಳಲ್ಲಿ ವಾಸು ಅನ್ನುವ ಹೆಸರಿರುತ್ತಾ?<p>ಅಲ್ಲಿ ನಾನು ಎಲ್ಲ ಕಳೆದುಕೊಂಡು ನಿಂತಿದ್ದೆ. ಬದುಕಿನ ಪುಟಗಳಿಗೆ ಬಣ್ಣ ತುಂಬುವ ಬದಲು ಕೇವಲ ಮಣ್ಣು ತುಂಬಿದ ನನ್ನ ಅದೃಷ್ಟವನ್ನ ಶಪಿಸುತ್ತ ದಿಗಂತದೆಡೆ ಕಣ್ಣ ಹಾಸಿಕೊಂಡು ಮುಂದೇನು ಅನ್ನುವ ಪ್ರಶ್ನೆಯನ್ನ ನನಗೆ ನಾನೆ ಹಾಕಿಕೊಂಡು ನಿಂತಿದ್ದೆ. ಹೀಗೆ ನನ್ನದಲ್ಲದ ಲೋಕದಲ್ಲಿದ್ದವನನ್ನ ವಾಸ್ತವಕ್ಕೆ ಕರೆದುಕೊಂಡು ಬಂದಿದ್ದು ನನಗೆ ಸ್ವಲ್ಪವೇ ದೂರದಲ್ಲಿ ನಿಂತುಕೊಂಡು ದೇವರು ನಕ್ಕ ಹಾಗೆ ನಗುತ್ತಾ ನಿಂತಿದ್ದ ಒಂದು ಪುಟಾಣಿ ಮುದ್ದು ಮಗು. ಅಲ್ಲಿ ಕುಳಿತು ನನ್ನನ್ನೇ ದಿಟ್ಟಿಸಿ ನೋಡುತ್ತಿತ್ತು. ಹತ್ತಿರ ಹೋದವನಿಗೆ ಕಂಡಿದ್ದು ಆಗಷ್ಟೇ ಅಮ್ಮನ ಅಮೃತವನ್ನ ಕುಡಿದುಕೊಂಡು ಬಂದ ಮಗುವಿನ ಗುಲಾಬಿ ತುಟಿಗಳು. ಆ ಮಗುವಿನ ಮೊಗದಲ್ಲಿದ್ದ ನಗು ಅಮಾಯಕ ಮುಗ್ಧತೆ. ಬೆಟ್ಟದಷ್ಟಿದ್ದ ಎದೆಯ ದುಃಖವನ್ನ ಮಗುವಿನ ಮುಂದೆ ಹೇಳಿ ಹಗುರಾಗಬೇಕೆನ್ನಿಸಿತು. ಭಕ್ತರು ದೇವರ ಮುಂದೆ ಮಂಡಿಯೂರಿ ಹೇಳಿಕೊಳ್ಳುತ್ತಾರಲ್ವ ಹಾಗೆ.<br /><br />ಆಟವಾಡುತ್ತಿದ್ದ ಮಗುವನ್ನ ನೋಡುತ್ತಾ ಕುಳಿತೆ. ನನ್ನ ಪಕ್ಕ ಕುಳಿತು ಏನು ನಿನ್ನ ದುಃಖವೆಂಬತ್ತೆ ನೋಡಿ ಹುಬ್ಬು ಹಾರಿಸಿತು. ನಾನು ಏನೂ ಹೇಳಲಿಲ್ಲ. ಮುಖ ತಿರುಗಿಸಿಕೊಂಡು ಕುಳಿತೆ. ಮತ್ತೆ ಒಂದು ಸ್ಮೈಲ್ ಮಾಡಿ ಹೇಳು ಏನು ನಿನ್ನ ದುಃಖವೆಂಬತೆ ಸನ್ನೆ ಮಾಡಿ ಹುಬ್ಬು ಹಾರಿಸಿ ನನ್ನ ಕೆಣಕುವ ಹಾಗೆ ನೋಡಿತು. ಭಯಂಕರ ಕೋಪದ ನಟನೆಯನ್ನ ಮಾಡುತ್ತ ಮತ್ತೆ ಮುಖ ತಿರುಗಿಸಿಕೊಂಡು ಕುಳಿತೆ. ಏನು ಮಾಮ ಎಂಬತ್ತೆ ಮತ್ತೆ ಮುಖದ ಬಳಿ ಬಂದು ಹೆಗಲಲ್ಲಿ ಜೋಕಾಲಿಯಾಡಿ ಮುತ್ತನ್ನಿತ್ತು ರಮಿಸಿ ನನ್ನ ಮುಖವನ್ನ ತನ್ನ ಪುಟಾಣಿ ಕೈಗಳಲ್ಲಿ ಬೊಗಸೆ ಮಾಡಿ ಹಿಡಿದುಕೊಂಡು ಒಂದು ಸಲ ನನ್ನ ನೋಡಿತು. ಇನ್ನು ನನಗೆ ತಡೆದುಕೊಳ್ಳಲಾಗಲಿಲ್ಲ. ಮಗುವಿನ ಗುಲಾಬಿ ರಟ್ಟೆಗಳನ್ನ ಸ್ವಲ್ಪ ಬಿಗಿಯಾಗೆ ಹಿಡಿದುಕೊಂಡು..... ನಾನು ದೇವಕಿಯನ್ನ ತುಂಬಾ ಪ್ರೀತಿಸ್ತೀನಿ ಗೊತ್ತಾ.... ಎಂದು ಜೋರಾಗಿ ಕೇಳಿಬಿಟ್ಟೆ.<br /><br />ಹಿಂದೆ ಹೆಗಲ ಮೇಲೆ ಜೋಕಾಲಿಯಾಡುತ್ತಿದ್ದ ಮಗು ನನ್ನನ್ನ ಸುತ್ತಿಕೊಂಡು ಬಂದು ಪಕ್ಕದಲ್ಲಿ ಕುಳಿತು ನನ್ನ ಮುಖ ನೋಡುತ್ತಿತ್ತು. ಪ್ರೀತಿಯೊಂದೇ ಅಲ್ಲ ಆರಾಧಿಸ್ತೀನಿ ಗೊತ್ತಾ? ಜೀವನಪೂರ್ತಿ ಜೊತೆಗಿರುವ ಕನಸು ಕಟ್ಟಿಕೊಂಡು ಕುಳಿತಿದ್ದೆ. ಆದರೇ ನನ್ನ ಕನಸ್ಸಿಗೆ ಹೆಚ್ಚಿನ ಆಯುಷ್ಯವಿರಲಿಲ್ಲ. ಬದುಕಿನ ಪುಟಗಳಲ್ಲಿ ಕೇವಲ ದೇವಕಿ ಅನ್ನುವ ಅಕ್ಷರವನ್ನ ಬರೆಯಲು ಹೊರಟಿದ್ದೆ. ಆದರೇ ಮೊದಲಕ್ಷರ ಬರೆಯುವಷ್ಟರಲ್ಲಿಯೇ ಪೆನ್ನಿನ ಇಂಕು ಖಾಲಿಯಾಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ...ಹಲೋ.. ಕೇಳಿಸ್ಕೋತಿದ್ದೀಯಾ ತಾನೆ? ಎಂದು ಮಗುವಿನ ರಟ್ಟೆಯನ್ನ ಮತ್ತೆ ಜೋರಾಗಿ ಹಿಡಿದುಕೊಂಡು ಕೇಳಿದೆ. ಪಾಪ ನೋವಾಗಿರಬೇಕು. ಮುಖ ಕಿವಿಚಿದ ಹಾಗೆ ಮಾಡಿಕೊಳ್ಳುತ್ತ ನನ್ನ ಮುಖವನ್ನೇ ನೋಡುತ್ತ ಕುಳಿತು ಬಿಡ್ತು.<br /><br />ನಿನಗೆ ಕೆಲವು ಪ್ರಶ್ನೆ ಕೇಳ್ತೀನಿ ಪ್ಲೀಸ್ ನನಗೆ ಉತ್ತರಬೇಕು ಅಂದು ಮಗುವಿನ ಮುಖ ನೋಡಿದೆ. ಅದು ನನ್ನ ನೋಡುತ್ತಲೇ ಕುಳಿತಿತ್ತು. " ದೇವಕಿ ಮತ್ತೆ ನನಗೆ ಸಿಕ್ತಾಳ? ದೇವಕಿ ಬದುಕಿನ ಪೂರ್ತಿ ಪುಟಗಳಲ್ಲಿ ವಾಸು ಅನ್ನುವ ಹೆಸರಿರುತ್ತಾ? ಆ ಭಗವಂತ ದೇವಕಿಯ ಕುರಿತು ಬರೆಯಬೇಕಾದ ನನ್ನ ಪೆನ್ನಿಗೆ ಇಂಕು ತುಂಬಿಸುತ್ತಾನಾ? ದೇವಕಿಯ ಕುರಿತಾಗಿ ನಾನು ಕಂಡ ಅಷ್ಟು ಕನಸುಗಳಲ್ಲಿ ಒಂದಾದರೂ ನಿಜವಾಗುತ್ತಾ? .... ಹಲೋ.. ನಾನ್ ಹೇಳೋದು ನಿನಗೆ ಅರ್ಥವಾಗ್ತಿದೆಯಾ? ಏನ್ ನಿನ್ನ ಹೆಸರು? ಸ್ವಲ್ಪ ಮಾತಾಡ್ತೀಯಾ? ಇಷ್ಟು ಹೊತ್ತು ನಾನ್ ಹೇಳಿದ್ದನ್ನೆಲ್ಲ ಕೇಳಿಸಿಕೊಂಡೆ ತಾನೆ?<br /><br />ಮಗು ಒಂದೊಂದೆ ಹೆಜ್ಜೆ ಮುಂದಿಡುತ್ತಾ ನನ್ನ ಒಂದೇ ಒಂದು ಪ್ರಶ್ನೆಗೂ ಉತ್ತರಿಸದೆ ಮುಂದೆ ಸಾಗುತ್ತಿತ್ತು. ಮಗುವಿನ ಮುಗ್ಧತೆ, ಆ ಕಣ್ಣಲ್ಲಿರುವ ಹೊಳಪು ಅದರ ನಗು ಅದರ ಕಣ್ಣು ಎಲ್ಲವೂ ನಿನ್ನನ್ನ ನೆನಪಿಸುತ್ತಿದ್ದವು. ನನ್ನ ಬದುಕ ಕುರಿತು ಕೇಳಿದ ಕೆಲವೇ ಕೆಲವು ಪ್ರಶ್ನೆಗಲಿಗೆ ಒಂದು ಮಗುವೂ ಉತ್ತರಿಸಲಾರದ್ದನ್ನ ಕಂಡು ನನಗೆ ಎದೆ ತುಂಬಿ ಬಂತು. ಉಕ್ಕಿ ಬಂದ ಬಿಕ್ಕಳಿಕೆಯನ್ನ ಕಷ್ಟಪಟ್ಟು ತಡೆದುಕೊಂಡೆ. ಕೇಳಿದ ಒಂದು ಪ್ರಶ್ನೆಗೂ ಉತ್ತರಿಸದೇ ಹಾಗೆ ಹೋದ ಮಗು ನನಗೆ ನಿನ್ನ ನೆನಪು ಮಾಡುತ್ತಿತ್ತು. </p>ದೇವಕಿhttp://www.blogger.com/profile/06098925153781447704noreply@blogger.com8tag:blogger.com,1999:blog-6213676171448221872.post-23313435606239359702009-07-26T21:00:00.000-07:002009-07-27T01:24:20.536-07:00ಹೃದಯ ತುಂಬಾ ಬೇಗ ಮನಸ್ಸಿಗೆ ಗಾಯ ಮಾಡ್ಕೊಂಡ್ಬಿಡುತ್ತೆ...ಜೀವನದಲ್ಲಿ ಅತಿಯಾಗಿ ಹಚ್ಕೊಕೊಂಡಿದ್ದನ್ನ ಕಳ್ಕೊಂಡಾಗ ಮನುಷ್ಯ ವೇದಾಂತಿಯಾಗ್ತಾನಾ? ನನಗೆ ಕಾಡುವ ಪ್ರಶ್ನೆಗಳು.. ಈ ಅತೀ ಅನ್ನಿಸುವ ವಿಷಯಗಳೇ ಪ್ರಪಂಚದಲ್ಲಿ ಉಸಿರಾಡ್ಬಾರ್ದು. ಆಗ ಜಗತ್ತು ಹೇಗಿರಬಹುದು?<br /><br />ದುಡ್ಡು, ಹಸಿವು, ಪ್ರೀತಿ,ಪ್ರೇಮ, ಪ್ರಣಯ, ಅಂತಸ್ತು ಹೀಗೆ ಯಾವುದೂ ಇಲ್ಲದಿದ್ದಲ್ಲಿ ಮನುಷ್ಯ ಸೋಮಾರಿಯಾಗಿಬಿಡುತ್ತಿದ್ದ. ಮಂಗನಿಂದ ಮಾನವ ಅನ್ನುವ ಸತ್ಯ ಉಲ್ಟ ಹೊಡೆಯುತ್ತಿತ್ತೇನೋ,, ನಗುಬರುತ್ತೆ. ನಾನು ಸ್ವಲ್ಪ ಹಾಗಾಗಿದ್ದಿನಿ. ಮನುಷ್ಯನಾಗಿದ್ದು ಮಂಗ ಆಗಿದ್ದೀನಿ. ( ಮಾಡ್ಬಿಟ್ರೇನೊ). ಹೀಗಾಗೋವರೆಗೆ ನನಗೆ ಬರಿಬೇಕೂ ಅಂತ ಅನ್ನಿಸ್ತಿರಲಿಲ್ಲ. ಓದ್ಬೇಕು ಅಂತ ಅನ್ನಿಸ್ತಿರಲಿಲ್ಲ. ಈಗ ಎರಡೂ ಕಲ್ತಿದ್ದೀನಿ. ನನ್ ಬಗ್ಗೆ ನಿಮಗೆ ಕನಿಕರಬರಬಹುದು, ಜೋಕೂ ಕಟ್ಟಬಹುದು, ಕನಿಕರಕ್ಕೆ ಮರುಗಬೇಡಿ..! ಇನ್ನೊಬ್ಬರಿಗೆ ಹಾಗಾಗದಿರಲಿ ಅಂತ ಬೇಡಿಕೊಳ್ಳಿ. ದೇವರ ಹತ್ರಕ್ಕಿಂತ ನಿಮ್ಮ ಹೃದಯ ದೇಗುಲದ ಆತ್ಮ ಮುಟ್ಟಿಕೊಳ್ಳಿ. ತಪ್ಪು ಮಾಡುವವರು ನಾವೆ ಅಲ್ವಾ ಅದಕ್ಕೆ. ನಮ್ಮೊಳಗಿರುವ ದೇವರು ಸದಾ ತಲೆಗೆ ಮೊಟಕುತ್ತಾ ಇರಲಿ. ರೆಟ್ಟೆಗೆ ಗಿಲ್ತಾ ಇರಲಿ.<br /><br />ಜೋಕು ಕಟ್ಟಿದರೆ ಜೋರಾಗಿ ನಕ್ಕುಬಿಡಿ ಸಂತೋಷದ ತುದ್ದ ತುದಿಯಲ್ಲಿ ನಿಲ್ಲುವಷ್ಟು. ಆದರೆ ನಗ್ತಾ ನಗ್ತಾನೆ ಅದು ಅಳುವಿನ ರೂಪ ಪಡಿಬಹುದು. ಅದು ಡೇಂಜರಸ್. ಪ್ರಪಾತದ ಅಂಚಿನಲ್ಲಿ ತುದಿಪಾದದಲ್ಲಿ ನಿಂತಷ್ಟು ಡಿಪ್ರೆಸ್ ಗೆ ಹೋಗ್ತೀರ. ಡಿಪ್ರೆಸ್ ಅನ್ನೊದು ಸಾವಿನ ದಾರಿಗೆ ಜಾಸ್ತಿ ಟಾರ್ಚ್ ಹಿಡಿಯುತ್ತೆ. ಕ್ಷಮಿಸಿ ಇದನ್ನೆಲ್ಲ ಹೇಳಬಾರದು. ಆದರೆ ಸಾವಿರ ಸರ್ತಿ ನನಗೆ ಹೀಗಾಗಿದೆ, ಆಗ ಗೆಲ್ಲೋದಕ್ಕೆ ಕನಸು ಕಟ್ಟೊದಕ್ಕೆ ಶುರುಮಾಡ್ತೀನಿ. ದಾರಿ ತಪ್ಪಿಸುವಂತದ್ದಲ್ಲ. ಒಳ್ಳೇಯ ದಾರೀಲಿ ನಡೆಯೋಷ್ಟು ಬೆಳಕು ಚೆಲ್ಲು ಶಕ್ತಿಯೇ ಎಂದು...<br /><br /><br />ಅದಕ್ಕೆ ವಾಸು ಇನ್ನು ಬದುಕಿದ್ದಾನೆ<br /><br /><br />ಚಿಂತೆಗೆ ಬಿದ್ದವರು ಊಟ ಬಿಡ್ತಾರೆ. ಗಡ್ಡ ಕೂದಲುಗಳನ್ನ ಉದ್ದುದ್ದ ಬೆಳಿತಾರೆ. ಆದರೆ ನಾನು ಹಾಗೆ ಮಾಡ್ಲೇ ಇಲ್ಲ. ಯಾಕಂದ್ರೆ ನಾಳೆ ನನ್ನ ಕನಸೇ ನಿಜ ರೂಪ ಪಡೆದು ನನ್ನ ಕೈ ಹಿಡಿಯಲು ಬಂದಾಗ ಪರದೇಸಿಯಯ್ಯ ನೀನು ಅನ್ನಬಾರದಲ್ವಾ ಅದ್ಕೆ. ಆದರೂ ಮನಸ್ಸನ್ನೋದು ತುಂಬಾ ಸೂಕ್ಷ್ಮ. ಬಹುಶ ಅದು ಅಂಬೆಗಾಲಿನಿಂದ ಹಿಡಿದು ಬೆನ್ನು ಬಾಗಿ ಊರುಗೋಲು ಹಿಡಿಯುವವರೆಗೂ ಹಸುಳೆಯಾಗೆ ಇರುತ್ತೆ ಅನ್ಸುತ್ತೆ. ತುಂಬಾ ಬೇಗ ಪರಚುಗಾಯ ಮಾಡ್ಕೊಂಡ್ಬಿಡುತ್ತೆ.<br /><br /><br />ನನ್ನ ಮತ್ತು ದೇವಕಿಯ ಪ್ರೀತಿಯ ಹಾಗೆ...ದೇವಕಿhttp://www.blogger.com/profile/06098925153781447704noreply@blogger.com1tag:blogger.com,1999:blog-6213676171448221872.post-83896672563152394452009-07-25T01:11:00.000-07:002009-07-25T08:02:53.316-07:00ನನಗೆ ನಿನಗಿಂತ ಬೇರೊಂದು ಕನಸು ಬೇಕಿತ್ತಾ ?<div>ಅದೊಂದು ಏಕಾಂತ ಸ್ಥಳ...</div><div><br /></div><div>ಆ ಜಾಗದಲ್ಲಿ ಒಂದು ಬತ್ತಿ ಹೋದ ತೊರೆ. ಅಲ್ಲಿ ಕುಳಿತು ನಿನ್ನ ನೆನಪು ಮಾಡಿಕೊಳ್ಳುತ್ತಿದ್ದೆ. ಇದ್ದಕ್ಕಿದ್ದಂತೆ ಬತ್ತಿ ಸತ್ತು ಹೋಗಿದ್ದ ತೊರೆ ಜುಳುಜುಳು ಪಿಸುಧನಿಯೊಂದಿಗೆ ನೀರು ತುಂಬಿ ಚಲಿಸಲಾರಂಬಿಸಿತು. </div><div><br /></div><div>ಅದರ ದಡದಲ್ಲಿ ನನಗೆ ಹೆಸರು ಹೇಳಲು ಬಾರದ ಕೆಲವು ಹೂವುಗಳು ಬೆಳೆಯಲಾರಂಬಿಸಿದವು. ಹಾಡು ಕಟ್ಟುವ ಹಕ್ಕಿಗಳ ಆಗಮನವಾಯಿತು. ಇದ್ದಕ್ಕಿದ್ದಂತೆ ನನ್ನನ್ನ ನಾನೆ ಮರೆಯುವಷ್ಟು ಅಲ್ಲಿನ ವಾತಾವರಣವೆಲ್ಲ ಬದಲಾಯಿತು... </div><div><br /></div><div>ಗೆಳತಿ...</div><div> </div><div>ನನಗೆ ನೀನು ತುಂಬಾ ನೆನಪಾದೆ. ಜೊತೆಗೆ ನೀನಿದ್ದಿದ್ದರೆ ಹೆಸರೇ ಗೊತ್ತಿಲ್ಲದ ಹೂವನ್ನ ತೆಗೆದು ನಿನ್ನ ಮುಡಿಗಿಡುತ್ತಿದ್ದೆ. ಹಾಡು ಹೇಳುವ ಅನಾಮಿಕ ಹಕ್ಕಿಗೆ ನಿನ್ನ ಪರಿಚಯಿಸುತ್ತಿದ್ದೆ. ನಿನ್ನ ಕೈ ಹಿಡಿದು ಸುಮ್ಮನೆ ನದಿತೀರದಲ್ಲಿ ಮಾತೆ ಆಡದಂತೆ ಒಂದು ಸುತ್ತು ಹಾಕುತ್ತಿದ್ದೆ. ಆದರೇ ಅದನ್ನೆಲ್ಲ ನಾನು ಹಣೆಯಲ್ಲಿ ಬರೆದುಕೊಂಡು ಬಂದಿಲ್ಲ ನೋಡು. </div><br /><div> </div><br /><div> ಆ ತೊರೆಯ ಪಕ್ಕ ಕುಳಿತವನಿಗೆ ಯಾವ್ಬುದೋ ಅನಾಮಿಕರ ಗುಂಪೊಂದು ರಾಶಿ ರಾಶಿ ಕಾಗದಗಳನ್ನ ತಂದುಕೊಟ್ಟು ಮರೆಯಾಯಿತು. ಹಾಗೆ ರಾಶಿ ರಾಶಿ ಕಾಗದಗಳನ್ನ ತೊರೆಯ ಪಕ್ಕ ಸುರಿದುಕೊಂಡು ಒಂದೊಂದನ್ನೂ ದೋಣಿಗಳನ್ನ ಮಾಡುತ್ತ ಒಂದೊಂದರಲ್ಲೂ ಅದೆಷ್ಟೊ ತೂಕದ ಕನಸುಗಳನ್ನ ತೇಲಿಬಿಡುತ್ತೇನೆ. ನಿನ್ನ ನೆನಪಿನ ಮಧುರ ಹೆಸರಿನ ಅಚ್ಚೊತ್ತುತ್ತಾ....</div><div><br /></div><div>ಆ ದೋಣಿಗಳು ನೀರ ಸ್ಪರ್ಶಕ್ಕೆ ತೇವವಾಗಿ ತನ್ನ ಸ್ವಂತಿಕೆಯನ್ನ ಕಳೆದುಕೊಳ್ಳುವ ಭೀತಿಯನ್ನ ವ್ಯಕ್ತಪಡಿಸದೇ ಪುಳಕಿತವಾಗುತ್ತಾ ಸಾಗುತ್ತವೆ. ಅವುಗಳಿಗೆ ನನ್ನ ನೆನಪಿನ... ಅವಳ ಸ್ಪರ್ಶದ ಖುಷಿ ಇರಬೇಕೇನೊ. ವಾರೆಕೋರೆಯಾಗಿ ನೇರವಾಗಿ ಮನಸ್ಸಿಗೆ ಬಂದಂತೆ ದೂರದಿಂದ ದೂರಕ್ಕೆ ಸಾಗುತ್ತಿವೆ. ಎಲ್ಲಾ ದೋಣಿಗಳಿಗು ನೆನಪಿನ ಹೆಸರೆ ಯಾಕೆ?????</div><div><br /></div><div>ಒಂದರಲ್ಲಿ ಅವಳನ್ನೆ ಕೂರಿಸಿದರೆ ಹೇಗೆ ಎಂದು ಅವಳ ಹೆಸರೆ ಇಟ್ಟೆ......ದೇವಕಿ</div><div><br /></div><div>ದೀರ್ಘ ಮುತ್ತಿಕ್ಕಿ .... ಉಸಿರೆಳೆದು.... ಉಸಿರು ಕೊಟ್ಟು....ತೇಲಿಬಿಟ್ಟೆನಲ್ಲ.</div><div> </div><br /><div>ಎಲ್ಲ ನೆನಪಿನ ದೋಣಿಗಳು ತೇಲಿ ತೇಲಿ ಕಣ್ಣೋಟದ ದೂರದ ತೀರದಂಚಿಗೆ ಸರಿದರೂ ದೇವಕಿ ದೋಣಿ ಒಂದು ದಡ ಸೇರಿತ್ತು. ಮತ್ತೆ ಅದನ್ನ ಚಲಿಸಲು ಹತ್ತಿರ ಹೋದವನಿಗೆ ದಡದ ಪಕ್ಕದಲ್ಲಿನ ವಿಶಾಲ ಖಾಲಿಜಾಗ ಆಕರ್ಷಿಸಿತು . ಗುಂಯ್ ಗುಡುವ ನೀರವ ಮೌನದಲ್ಲೂ ಮಧುರ ಧ್ವನಿಯ ಆಲಾಪ ನನ್ನ ಕಿವಿ ತಾಕಲು ಯತ್ನಿಸುತ್ತಿದೆ ಅನ್ನಿಸುವಂತಹ ವಾತಾವರಣ. ವ್ಯಾಮೋಹದ ಉಸಿರಿನ ಉದ್ವೇಗವೋ ಏನೋ ಆ ಖಾಲಿ ಜಾಗಕ್ಕೆ ಕಾಲಿರಿಸಿದೆ. ಕಾಲಿನ ಸ್ಪರ್ಶಕ್ಕೆ ಅಷ್ಟಗಲ ಭೂಮಿ ಹಸಿರಾಯ್ತು. ಇನ್ನೊಂದು ಹೆಜ್ಜೆಗೆ ಹಸಿರುಕ್ಕುವ ಗಿಡಗಳಲ್ಲಿ ಕಂದು ಕೆಂಪಗಿನ ಚಿಗುರೊಡೆದವು. ಒಂದೊಂದು ಹೆಜ್ಜೆಗೂ ಬದಲಾದ ಆ ಜಾಗದಲ್ಲಿ ಕ್ಷಣಕ್ಕೊಂದು ಗಿಡ ಹೆಸರುಗೊತ್ತಿರದ ಹೂವು ಬಿಡುತ್ತ ಪನ್ನೀರ ಕಂಪನ್ನ ತುಂಬಿ ಬಿಡ್ತು. ಅಲ್ಲಿಯವರೆಗೂ ನೋಡಿರದ ಹಕ್ಕಿ ಸುಶ್ರಾವ್ಯವಾಗಿ ಹಾಡುತ್ತಿತ್ತು. ನೀನು ನನ್ನ ಜೊತೆಗಿದ್ದಿದ್ದರೆ ನಿನ್ನ ಹೆಸರನ್ನ ಆ ಹಕ್ಕಿಗೋ ಅಥವ ಆ ಹಕ್ಕಿಯ ಹೆಸರನ್ನ ನಿನಗೋ ಇಟ್ಟು ಇಷ್ಟಗಲ ಕಣ್ಣು ಬಿಟ್ಟು ನಿನ್ನ ನೋಡುತ್ತಿದ್ದೆ. </div><br /><div> </div>ಗೆಳತೀ....<div><br /><div>ಹಾಗೆ ನಿನ್ನ ನೋಡುತ್ತಾ ನೋಡುತ್ತ ಇರುವಾಗಲೇ ದೊಡ್ಡದಾದ ಹಳೆಯ ಬಂಗಲೆ ಸೃಷ್ಟಿಯಾಯ್ತು. ಸ್ವಯಂ ಹವಾನಿಯಂತ್ರಿತ ಮನೆ ಅಲ್ಲಿ ಎಲ್ಲವೂ ಅದ್ಭುತ ದೃಶ್ಯ ವೈಭವಗಳೆ. </div><div><br /></div><div>ದೂರದ ಕೋಣೆಯ ಬಾಗಿಲಿನ ಅಂಚಿನಿಂದ ಸೆರಗೊಂದು ಹಾರುತ್ತಿತ್ತು. </div><div><br /></div><div>ಮುಂಗುರುಳು ಚೆಲ್ಲಾಡುತ್ತಿತ್ತು. ಬಳೆಯ ಸದ್ದಿನ ಸಂಗೀತ ಓ ಇನಿಯಾ ಅನ್ನುತ್ತಿತ್ತು.</div><div><br /></div><div>ನಾನೂ ಬದಲಾಗುತ್ತಾ ಹೊದೆ. ನೋಡುನೋಡುತ್ತಿರುವಂತೆಯೇ ನಾನು ಮತ್ತೆ ಅವಳು ದರ್ಬಾರು ನಡೆಸುತ್ತಿದ್ದೆವು. </div><div><br /></div><div>ಪ್ರಜೆಗಳೆದುರಲ್ಲ!!!!</div><div><br /></div><div>ಪ್ರೇಮ ಸಾಮ್ರಾಜ್ಯದ ಪ್ರೇಮಿಗಳೆದುರು.... </div><div><br /></div><div>ಆ ರಾಜ್ಯದಲ್ಲಿ ಬದುಕಬೇಕಾದ ನಿಯಮಗಳನ್ನ ಹೇಳಿಕೊಡುತ್ತಿದ್ದೆವು ಎಲ್ಲರೂ ನಮಗೆ ಜೈಕಾರ ಹಾಕುವವರೆ ಜೈಕಾರದ ನಡುವೆ ನನ್ನನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದ ದೋಣಿಯ ನೆನಪಾಯ್ತು ತೊರೆಯ ದಡದತ್ತ ಓಡಿ ಬಂದೆ ಹಿಂತಿರುಗಿ ನೋಡುತ್ತಾ... ನೋಡುತ್ತ್ತಾ.... ಆ ವೈಭವದ ಒಂದೊಂದೇ ಮಹಲುಗಳು ಕುಸಿದು ಬೀಳುತ್ತಿವೆ ಹೆಸರೇ ಗೊತ್ತಿರದ ಹೂಗಳ ಪಕಳೆಗಳು ಉದುರಿ ಬೀಳುತ್ತಿವೆ ಗಿಡಗಳು ಬುಡದಿಂದಲೇ ಬಾಡಿ ಹೋಗುತ್ತಿವೆ ಪರಿಚಯವಿರದ ಹಕ್ಕಿಯ ರಾಗ ಗದ್ಗಧಿತವಾಗುತ್ತಿದೆ, ಕರ್ಕಶವಾಗುತ್ತಿದೆ ನೋಡು ನೋಡುತ್ತಲೇ ಎಲ್ಲವೂ ಮಾಯವಾಗಿ ಮಾಮೂಲಿನಂತೆಯೇ ಹಿಂದಿನ ಖಾಲಿ ಜಾಗವಾಗುತ್ತೆ ನಾನು ನನ್ನವಳ ಹೆಸರು ಬರೆದ ದೋಣಿಯನ್ನ ನೋಡುತ್ತಿದ್ದೇನೆ ತೇವವಾಗಿ ತಳ ಒಡೆದಿದೆ ಅರ್ದ ನೀರು ತುಂಬಿಕೊಂಡಿದೆ।</div>.....<br /><div> </div>.....</div><div><br /><div>ಕ್ಷಮಿಸು ದೇವಕಿ ಆಫೀಸಿನ ಕಟ್ಟಡದ ತುತ್ತ ತುದಿಯಲ್ಲಿ ಕುಳಿತು ಒಬ್ಬಂಟಿಗನಾಗಿ ಈಗ ನಾನು ತುಂಬಾ ಧೈನ್ಯತೆಯ ಸ್ಥಿತಿಯಲ್ಲಿ ನನ್ನ ನಾನೇ ಕೇಳಿಕೊಳ್ಳುತ್ತಿದ್ದೇನೆ। </div><br /><div> </div><br /><div>ನನಗೆ ನಿನಗಿಂತ ಬೇರೊಂದು ಕನಸು ಬೇಕಿತ್ತಾ?</div><div> </div></div>ದೇವಕಿhttp://www.blogger.com/profile/06098925153781447704noreply@blogger.com2tag:blogger.com,1999:blog-6213676171448221872.post-22078250831157362952009-07-24T01:00:00.000-07:002009-07-24T08:21:54.953-07:00ನನ್ನ ಮನೆಯ ಹೊಸ್ತಿಲಿನ ಮುಂದೆ ನಿನ್ನ ಹೆಜ್ಜೆ ಗುರುತುಗಳಿದ್ದವು<div>ದೇವಕಿ, ನಿನಗೊಂದು ತುಂಬು ಹೃದಯದ ತುಂಬಾ ಚಿಕ್ಕ ಪತ್ರ. ಒಂದೆರೆಡು ನಿಮಿಷಗಳಲ್ಲಿ ಬರೆದು ಮುಗಿಸಿದ ಸಾಲುಗಳಾದರೂ ನಿನ್ನನ್ನ ನಾನು ಅದೆಷ್ಟು ಪ್ರೀತಿಸುತ್ತೀನಿ, ಅಂತ ಈ ಕೆಳಗಿನ ಸಾಲುಗಳನ್ನೇ ನೋಡು. ಒಂದು ಕ್ಷಣಕ್ಕಾದರೂ ನನ್ನ ನೆನಪು ನಿನ್ನ ಮುಂದೆ ಹಾಗೆ ಸುಮ್ಮನೆ ಅನ್ನುವುದಕ್ಕಾದರೂ ಬಂದು ಹೋಗದೇ ಇದ್ದೀತು. </div><div><br /></div><div><br /></div><div>ನನ್ನ ಮನೆಯ ಹೊಸ್ತಿಲಿನ ಮುಂದೆ......!<br /><br />ಪ್ರಪಂಚದಲ್ಲಿರುವ ಎಲ್ಲ ಸುಖ ಸಂತೋಷಗಳು ಕಾಲು ಮುರಿದುಕೊಂಡು ಬಿದ್ದಿದ್ದವು. ಅಲ್ಲಿ ಕೇವಲ ಸಿಹಿಗನಸುಗಳು ಅರಳೋ ಸೂಚನೆಗಳು ನನಗೆ ಕಾಣಿಸುತ್ತಿದ್ದವು. ಅಲ್ಲಿ ನೆಮ್ಮದಿಯ ಬದುಕು ಅನ್ನೋದನ್ನ ಯಾರೋ ನೊಂದವರಿಗೆ ಮಾರಾಟ ಮಾಡುತ್ತಿದ್ದರು. ಬಾರ ಹೃದಯಗಳನ್ನ ಹೊತ್ತು ತಂದ ಕೆಲವರು ಅಲ್ಲಿ ಬಾರವಿಳಿಸಿಕೊಂಡು ಹಗುರಾಗಿ ಹೋಗುತ್ತಿದ್ದರು. ದುಃಖಗಳೆಲ್ಲ ಇನ್ನು ನಮಗಿಲ್ಲಿ ಜಾಗವಿಲ್ಲ ಅನ್ನುತ್ತ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಹೊರಟು ಹೋಗುವ ಮಾತನಾಡುತ್ತಿದ್ದವು. ಜಗತ್ತಿನ ಪ್ರೇಮಕಥೆ ಕಾವ್ಯಗಳ ಮೊದಲ ಸಾಲುಗಳೆಲ್ಲ ಇಲ್ಲಿಂದಲೇ ಉದಯವಾದವೇನೋ ಅನ್ನುವ ಹಾಗೆ ನನಗೆ ಭಾಸವಾಗಿತ್ತಿತ್ತು.ಕೆಲವು ಅನಾಥ ಮಕ್ಕಳು, ತಾಯಂದಿರ ಜೋಗುಳ ಕೇಳಿಸಿಕೊಂಡು ನಿದ್ದೆ ಹೋಗಿದ್ದಾರೇನೋ ಅನ್ನಿಸುತ್ತಿತ್ತು. ಅಲ್ಲಿ ಕೆಲವು ಹೂಗಳ ಗಿಡ ಮತ್ತು ಬಳ್ಳಿಗಳು ತಮ್ಮ ಬೇರೂರಲು ಆಸೆಗಣ್ಣಿನಿಂದ ನೋಡುತ್ತಿದ್ದವು. ಭೂಮಿಗಿಳಿಯುವ ಮೊದಲ ಮಳೆಯ ಮೊದಲ ಹನಿ ಆ ಜಾಗದಲ್ಲೆ ಪ್ರತಿ ಸಾರಿಯೂ ಬೀಳುತ್ತಿತ್ತು. ಕೆಲವೊಮ್ಮೆ ಸೂರ್ಯನ ಸುಡುವ ಕಿರಣಗಳು ಚಂದ್ರನ ತಂಪನ್ನ ಆ ಜಾಗಕ್ಕೆ ರವಾನೆ ಮಾಡುತ್ತಿದ್ದವು. ಮರೆತ ಹಾಡುಗಳು ನೆನಪಾಗುತ್ತಿದ್ದವು. ಕತ್ತಲೇ ಆವರಿಸಿಕೊಂಡಿದ್ದ ನನಗೆ ಅಲ್ಲಿ ಒಂದಿಷ್ಟು ಬೆಳಕು ಕಾಣಿಸುತ್ತಿತ್ತು. ಯಾವ ಶಾಪಗಳು ತಟ್ಟದಂತ ಸುಂದರ ತಾಣವೆಂದೆ ನಾನುಂದುಕೊಂಡಿದ್ದೇನೆ. ಅಲ್ಲಿ ದೇವರು ಇದ್ದಿರೂ ಇರಬಹುದೇ? ಅಂದುಕೊಂಡು ಹುಡುಕಿದ್ದೂ ಇದೆ. ಅಲ್ಲಿ ಒಂದಿಷ್ಟು ಕನಸುಗಳಿವೆ. ಒಂದಿಷ್ಟು ಬಯಕೆಗಳಿವೆ, ಬದುಕಿನ ನಾಳೆಗಳಿಗೆ ಬೇಕಾದ ಭರವಸೆಗಳ mooಟೆಗಳಿವೆ. ಹಾಗೆ ಅಲ್ಲಿ ನನ್ನ ಪೂರ್ತಿ ಬದುಕಿದೆ.</div><br /><div>ನನ್ನ ಮನೆಯ ಹೊಸ್ತಿಲಿನ ಮುಂದೆ ಕುಕ್ಕರುಗಾಲಿನಲ್ಲಿ ಕೂತಿದ್ದೆ. ನನ್ನ ಮುಂದೆ...ಮುಂದೆ ಮುಂದೆ ಸಾಗಿದ ನಿನ್ನ ಹೆಜ್ಜೆ ಗುರುತುಗಳಿದ್ದವು.</div>ದೇವಕಿhttp://www.blogger.com/profile/06098925153781447704noreply@blogger.com5