ಕುಗ್ರಾಮ,ಸರಕಾರವೇ ಸಾರಿಬಿಟ್ಟಿದೆ.ಕುಗ್ರಾಮದಲ್ಲಿ ಇರುವ ಕೆಲವು ಮನೆಗಳಲ್ಲೂ ಹಲವರ ಗಮನಕ್ಕೆ ಕಣ್ಣಿಗೆ ಬೀಳದ ಮಳೆಗಾಲದಲ್ಲಿ ಬೊಬ್ಬಿಟ್ಟು ಹರಿಯುವ ತೊರೆ ಬೇಸಿಗೆಯಲ್ಲಿ ತನ್ನಿರುವಿಗಷ್ಟೇ ಬಾಯಾರಿಕೆಯ ನೀರಿಟ್ಟುಕೊಳ್ಳುತ್ತದೆ.ಅದರ ಅಂಕುಡೊಂಕಿನ ಸಂದಲ್ಲಿ ಅಡಿಕೆಮರದ ಸೋಗೆಯ ಗುಡಿಸಲು,ಒಬ್ಬನೇ ವಾಸ ಇರುವ ಗುಡಿಸಲು.ಯಾರ ತಂಟೆಗೂ ಹೋಗದ ಯಾರ ಮುಖವನ್ನೂ ನೋಡಲಿಚ್ಚಿಸದ ಅರೆಗೂನುಬೆನ್ನಿನ ಮಧ್ಯವಯಸ್ಕ ಅದರೊಡೆಯ.ಗೆಣಸು ಬೆಳೆಸಿ ತಿನ್ನುತ್ತನೆ ಕೆಲಸೇರಷ್ಟೇ ಬೆಳೆಸುವ ಬತ್ತವನ್ನು ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡಿ ಉಣ್ಣುತ್ತಾನೆ.ಅದರ ತವುಡನ್ನೂ ಬಿಡದೆ ಕುದಿಸಿ ಕುಡಿಯುತ್ತಾನೆ ಇಷ್ಟಕ್ಕೋ ಬಡತನಕ್ಕೋ ಅಥವಾ ಆಹಾರಕ್ಕೂ ಬೇರೆಕಡೆ ಹೋಗೋದು ಬೇಡ ಎಂದೋ...ಮೀನುತಿನ್ನುವ ಬಾಯಿಚಪಲಕ್ಕೆ ಮಳೆಗಾಲದಲ್ಲಿ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಗಾಳ ಹಾಕುತ್ತಾನೆ,ಬೇಸಿಗೆಯಲ್ಲಿ ಅದೇಬತ್ತಿಹೋಗುವ ತೊರೆಯಲ್ಲಿ ಕಾಲ್ಲುಗಳ್ನ್ನು ಸರಿಸಿಯೋ ಇಲ್ಲ ಚಿಕ್ಕ ಚಿಕ್ಕ ಬಿಲಗಳಿಗೆ ಕೈ ಹಾಕಿಯೋ ಏಡಿ ಹಿಡಿಯುಇತ್ತಾನೆ.ಆಗಲೂ ಜನರ ಕಣ್ಣಿಗೆ ಜಾಸ್ತಿಯಾಗಿ ಬಿದ್ದವನಲ್ಲಹೀಗಿರುವ ಆಅರೆಬೆನ್ನಿನವನ ಬಗ್ಗೆ ಕಳ್ಳು ಕುಡಿದು ಬೀಡಿಸೇದುವವರ ಬಾಯಲ್ಲಿ ಮಾತಲ್ಲಿ ತೇಲಿಹೋಗಿದ್ದನಷ್ಟೆ.ಯಾವುದೇ ಸರಕಾರಿ ಧಾಖಲೆಗಳಿಲ್ಲದ ಜೀವನ ಅವನದಾಗಿತ್ತು.
ಅದೊಂದುವರುಷದ ಜಡಿಮಳೆಯ ದಿನ ಬರುವವರೆಗೂ ಆ ಪುಟ್ಟ ಸೋಗೆ ಮನೆಯ ಬೆತ್ತಲಸತ್ಯ ಬೆತ್ತಲಾಗಲೇ ಇಲ್ಲ.ಜೋರಾದ ಗಾಳಿಗೆ ತೆಂಗಿನ ಮರ ಇನ್ನು ಬಗ್ಗಿದರೆ ಸಾವೇ ಅನ್ನುವಷ್ಟು ವಾಲುತ್ತಿದೆ,ಈ ಹಿಂಸೆ ಇನ್ನುಬೇಡ ಅಂದುಕೊಂಡ ಕೆಲ ಅಡಿಕೆಮರಗಳು ತುಂಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವು...ಗೊನೆಹೊತ್ತು ಭಾರವಾಗಿದ್ದ ಬ್ಬಳೀಎ ತಾಯ್ತನವೆಸಾಕೆಂದು ನೆಲದಪ್ಪುಗೆಗೆ ಮಲಗೇ ಬಿಟ್ಟವು...ತೊರೆಯಲ್ಲಿಕೆಂಪುನೀರು ಹಲಸು ತೆಂಗಿನಕಾಯಿಗಳನ್ನು ತೇಲಿಸುತ್ತ ಕುದುರೆಜಿಗಿತದೊಂದಿಗೆಆಚೀಚೆಯ ತೋಟಗದ್ದೆಗಳನ್ನು ಸವರುತ್ತಾ...ಒಂದಷ್ಟು ಹೊತ್ತಿಗೆ ಇಡಿಯಾಗಿ ನುಂಗಿಬಿಟ್ಟಿತ್ತು.ಮನಸ್ಸಿಗೆ ಮಂಪರು ಕವಿದಂತೆ ಆದಿನದ ವಾತಾವರಣಕ್ಕೂ ರಭಸದ ಮಳೆಯ ಮಂಪರು ಕವಿದಿತ್ತು,ಅಸ್ಪಸ್ಟ ಚಿತ್ರಣದಲ್ಲೂ ಮಿಂಚಿನ ಸ್ಪಸ್ಟತೆಯಗೆರೆಗಳು ಜೋರಾಗೇ ತನ್ನತನವನ್ನು ಮೂಡಿಸಿಹೋಗುತ್ತಿತ್ತು.ಹಗಲಲ್ಲೂ ಕತ್ತಲು ಬೆಳಕಿನಾಟದಲ್ಲಿ ಅಂಕುಡೊಂಕಿನ ಸಂದಿನಲ್ಲಿದ್ದ ಸೋಗೆ ಮನೆ...ಶಿಥಿಲವಾಗುತ್ತಾ ಹೋಗುತ್ತಿತ್ತು...ಆಮನೆಯ ಗೋಡೆಗೆ ಹಿಂಸೆಯ ಹೆರಿಗೆನೋವು ಕಾಡುತ್ತಿತ್ತು....ತನ್ನನ್ನು ಬಗಿದುಕೊಳ್ಳಲೆಂದೇ ಈ ಪರಿಯ ಮಳೆಯನ್ನು ಅದುಬೇಡಿಕೊಂಡಿತ್ತೋ ಏನೋ...ಮಳೆಗೆ ಇನ್ನಷ್ಟು ಮತ್ತಷ್ಟುತನ್ನನ್ನು ತೋಯಿಸಿಕ್ಪೊಳ್ಳುತ್ತಾ ಇಂಚಿಂಚಾಗಿ ಬಾಯಿತೆರೆಯತೊಡಗಿತು.
ಆಮನೆಯಾಲ್ಲ್ಲಿ ಅಲ್ಲಿಯವರೆಗೂ ಇರದ ಹೊರಜಗತ್ತಿಗೆ ಕಾಣದ ಜೀವವೊಂದು ಸುರಿಯುವ ಆ ಮಳೆಗೆ ತೆವಲುತ್ತ ಸೇರಿಸಿಕೊಂಡಿತು.ಅರೆಪ್ರಾಯದ ಹೆಣ್ನುಮಗಳು...ಕೈ ಕಾಲು ಬಾಯಿಗೆ ಬಟ್ಟೆಬಿಗಿದ ಸ್ಥಿತಿಯಲ್ಲಿ..ಅದೆಷ್ಟೋವರ್ಷಗಳಿಂದ ಜಗತ್ತಿನ ಬೆಳಕನ್ನು ನೋಡದ ಜೀವ...ಬಿರುಸು ಮಳೆಯಲ್ಲೂಪ್ರಪಂಚದ ಕಣ್ಣಿಗೆಬಿದ್ದಳು.ಪುಟ್ಟ ಕಂದನಂತೆ ತೆವೆಳುತ್ತ ತೆವಳುತ್ತಾ ರೋದಿಸುತ್ತ.ಅವಳ ಹಿಂದೆ ಅರೆಗೂನುಬೆನ್ನಿನ ಮನುಷ್ಯ ಕರಿನೆರಳಿನಂತೆ ಅವನೂ ನೆನೆಯುತ್ತ ಸ್ಪಷ್ಟವಾಗತೊಡಗಿದ ತುಕ್ಕುಹಿಡಿದಕತ್ತಿಯನ್ನು ಗಟ್ಟಿಯಾಗಿ ಹಿಡಿದಿದ್ದ.ಮೇಲಿನ ಮನೆಯ ರಾಮಣ್ಣ ರೈ ಗಳ ನಾತಿ ನೀರಲ್ಲಿ ಕೊಚ್ಚಿಹೋಗುತ್ತಿತ್ತು ಕೆಲಸದಾಳುಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊರೆಯ ಆಚೀಚೆ ನುಗ್ಗಿದ ನೀರಲ್ಲಿ ನೆಗೆಯುತ್ತ ಬರುತ್ತಿದ್ದವರಿಗೆ ಆ ಸೋಗೆಮನೆಯ ಇಬ್ಬರು ಕಾಣಿಸುತ್ತಾರೆ.ಅವರನ್ನು ಕಂಡ ಕೆಲಸದಾಳುಗಳು ಜೋರಾದ ದ್ವನಿಯಲ್ಲಿ ಹೋಯ್ ಹೋಯ್ ಎಂದು ಕಿರುಚಾಡುತ್ತಾರೆ. ಅನಿರೀಕ್ಷಿತವಾದ ಈ ಘಟನೆಯಿಂದ ಗಾಭರಿಯಾದ ಅರೆಗೂನುಬೆನ್ನಿನವ ಹಿಂದೆಸರಿಯುತ್ತಾನೆ ಅವಳನ್ನು ಕಡಿಯಬೇಕಿದ್ದ ಕೈಯಿಂದ ಕತ್ತಿ ಕೆಳ ಬೀಳುತ್ತದೆ.ರೈಗಳ ನಾಯಿ ಕುಯ್ ಕುಯ್ ಅಂದುಕೊಂಡೇ ನೋಟದಿಂದಾಚೆ ಸರಿಯುತ್ತದೆ.ಅರೆಗೂನುಬೆನ್ನಿನವ ಕೆಲಸದಾಳುಗಳಿಂದ ತಪ್ಪಿಸಿಕೊಳ್ಲುವ ಪ್ರಯತ್ನದಲ್ಲಿ ರಭಸವಾಗಿ ತೊರೆಯಾಚೆ ಜಿಗಿಯುತ್ತಾನೆ...ಲೆಕ್ಕಾಚಾರ ತಪ್ಪಿಹೋಯ್ತು,ಮಳೆಯ ಚಳಿ ಕಾಲುಗಳಿಗೆ ನಡುಕ ಹತ್ತಿಸುತ್ತವೆ ತೊರೆಅವನ ಕಾಲುಗಳನ್ನುಹಿಡಿದೆಳೆಯುತ್ತದೆ...ಆಳಕ್ಕೆ...ಅವಳ ಕಟ್ಟು ಬಿಡಿಸಲಾಯಿತು,ರೈಗಳ ನಾಯಿ ಹೇಗೋ ದಡ ಸೇರಿ ಕೆಲಸದವರನ್ನು ಸೇರಿಕೊಂಡಿತು...ಅವರು ಅರ್ಧದಲ್ಲೆ ನಿಂತಿದ್ದಕ್ಕೆ ಅದಕ್ಕೆ ಬೇಜಾರಿಗೋ ಅಥವಾ ಒಳ್ಳೆಯದೇ ಆಯಿತೆಂದೋ ಕುಯ್ ಕುಯ್ ಅನ್ನತೊಡಗಿ ಮೈಕೈ ನೆಕ್ಕತೊಡಗಿತು.ಋತುಮಾನಗಳು ಬದಲಾಗಿದೆಆ ನಾಯಿಯನ್ನು ಕಾಡಿಬೇಡಿ ರಾಮಣ್ಣರೈಯವರಿಂದ ಪಡೆದು ಅವಳು ಜೀವದ ಹಾಗೆ ನೋಡಿಕೊಳ್ಳುತ್ತಿದ್ದಾಳೆ,ಅವಳ ಮನೆ ತೊರೆಯಿಂದ ಸ್ವಲ್ಪಮೇಲೆ ಊರವರಿಂದ ಹೆಂಚುಹಾಕಿಸಿಕೊಂಡು ನಿಂತಿದೆ...ಬೆತ್ತಲೆ ಸತ್ಯ ಇನ್ನೂ ಕತ್ತಲೆಯಲ್ಲಿ ಅಡಗಿದೆ... ಕಷ್ಟ ಆಗ್ತಿದೆ ಆದ್ರು ಪ್ರಯತ್ನ ಮಾಡ್ತೀನಿ... ಅಮ್ಮ ಸತ್ತ ಆ ಮಗಳನ್ನು ಋತುಮತಿಯಾದ ನಂತರ ಬಂದಿಸಲಾಗಿತ್ತು...ಕೈ ಕಾಲು ಬಾಯಿ ಕಟ್ಟಲಾಗಿತ್ತುಹುಟ್ಟುರೂಪದಲ್ಲೆ...ನಂತರ ಕಳೆದದ್ದು ಹಲವು ಮಳೆ ಬಿಸಿಲು ಚಳಿಗಳ ವರ್ಷಗಳು.... ಅವಳದೇ ಅಪ್ಪ...
ಕ್ಷಮಿಸಿ,ಮುಂದುವರೆಸಲು ಕಷ್ಟ ಆಗ್ತಿದೆ....
Subscribe to:
Post Comments (Atom)
nimma ee reetiya kathe odalu tumba kushiyaguttade..
ReplyDeletemunduvaresade munduvareda bhagavannu odugana kalpanege biduva tantragarike tumba ishtavayitu...
ದೇವಕಿ,
ReplyDeleteತುಂಬಾ ಇಷ್ಟವಾಯಿತು ನಿಮ್ಮ ಬರಹ ಶೈಲಿ, ಕೊನೆಯ ಸಾಲು ಮನ ತಟ್ಟಿದೆ
Am in US.
ReplyDeleteAm watching this serial through mypopcorn.com.
I love this serial.
jogula team u rock.
Nijavagalu channagide adaru kaaduva prasgegalu saavira, uttara namma alochanege bittaddu ,odugana kalapana loka tereyuttade
ReplyDeleteTUmba channagide
ReplyDelete