Sunday, July 5, 2009

ಬೆಳ್ಳಿ ಮೋಡಗಳಿಗೆ ಭಾಷೆಯ ಹಂಗಿಲ್ಲ



ಬೆಳ್ಳಿಮೋಡ ಬೆನ್ನಟ್ಟುತಾವ
ಬೆಟ್ಟಗಳ ತಬ್ಬುತಾವ ಅದಕೆ ಭಾಷೆಯ ಹಂಗಿಲ್ಲ
ಮೋಡಗಳು ಓಡೋಡಿ ಬಂದು ಬೆಟ್ಟಗಳನ್ನ ಅಪ್ಪಿಕೊಳುತ್ತೆ, ಆದ್ರೆ ಅದಕ್ಕೆ ಯಾವುದೆ ಹಂಗಿಲ್ಲ. ನಮ್ಮ ಬದುಕು ಕೂಡ ಹಾಗೆ ಯಾವುದೆ ಯಾರದೆ ಹಂಗಲ್ಲದೆ ಬದುಕ ಬೇಕು ವಾಸು, ಆದ್ರೆ ನಮಗೆ ಅ ರೀತಿ ಆಗೋಲ್ಲ ಅಲ್ವ ಅಂದ್ದಿದ್ದೆ ನೀನು ಮರೆತಿರಬೇಕು, ನೆನಪಿದೆ ನನಗೆ, ಸಂಬಂಧಗಳನ್ನು ಕಟ್ಟಿಕೊಂಡು ಬದುಕನ್ನ ಹಸನು ಮಾಡುವವರು ನಾವು ನಮಗೆ ಎಲ್ಲರ ಎಲ್ಲದರ ಹಂಗು ಬೇಕು. ಹೀಗೆ ಬದುಕಲು ಹೇಳಿ ನೀನು ಈಗ ಯಾರಿಗು ಸಿಗದೆ, ಹೀಗೆ ಬದುಕಲು ಹೇಗೆ ನಿರ್ಧರಿಸಿದೆ... ಪ್ರೀತಿ ಎಂದರೆ smsನಲ್ಲಿ ಕಳುಹಿಸುವ quotationಗಳಂತೆ ಅಲ್ಲ, ಅದು ಬದುಕಾಗಬೇಕು ಆಗ ಆ ಪದಗಳು ಅರ್ಥ ಪಡೆಯುತ್ತವೆ... ನಾವಿಬ್ಬರು ಒಂದು ಕನಸು ಕಂಡಿದ್ವಿ ಎಲ್ಲರಂತೆ ನಾವು ಮದುವೆಯಗಿ ನಮಗೆ ಮಕ್ಕಳಾಗಿ, ಆ ಮಕ್ಕಳಿಗೆ ಇಟ್ಟ ಹೆಸರನ್ನ ಕರೆಯದೆ ಪುಟ್ಟಾ ಪುಟ್ಟಿ ಎಂದು ಕರೆಯುತ್ತಾ ಎಲ್ಲಾ ಅಪ್ಪಂದಿರಂತೆ ನಾನು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವುದು ನೀನು ಪುಟ್ಟಾ ಪುಟ್ಟಿಯನ್ನ ಡ್ರೆಸ್ಸ್ ಮಾಡ್ಸಿ school ಗೆ ಕರ್ಕೊಂಡ್ ಹೋಗಿ ಬಿಟ್ಟು ಬರುವುದು ನನಗೆ ಕೆಲಸದ ನಡುವೆ ಬಿಡುವು ಮಾಡಿಕೊಂಡು ನಿನ್ನೊಡನೆ phoneನಲ್ಲಿ ಮಾತನಾಡುವುದು ಸಂಜೆ ಬೇಗ ಮನೆಗೆ ಬಾ ಅಂತ ನೀನು ಕರೆಯುವುದು ನಾನು ಆದ್ರೆ ಬರ್ತೀನಿ ಅಂತ ಹೇಳಿ ಬರೋಕಾಗ್ದೆ late ಆಗಿ ಬಂದು ನಿನ್ನ mood ಸರಿ ಮಾಡೊಕೆ
ಆ ಅರ್ಥವಾಗ್ದೆ ಇರೋ pop musicನ ಜೋರಾಗಿ ಹಾಕ್ಕೊಂಡು ನಿನ್ನ ಮುಂದೆ dance ಮಾಡ್ತಾ ಇರೋವಾಗ ಪುಟ್ಟಾ ಪುಟ್ಟೀನ ಕರ್ಕೊಂಡ್ ಬಂದ ಪಕ್ಕದ ಮನೆ ಶಾಂತಕ್ಕ ಇದನ್ನ ನೋಡಿ ಅಯ್ಯಯ್ಯೋ ಅಂತ ಕಿರುಚಿಕೋಡು ಓಡ್ದಾಗ ನಿನಗೆ ಜೋರಾಗಿ ನಗು ಬಂದು ನನ್ನ ಮುಖ ನೋಡಿ ಬಿದ್ದು ಬಿದ್ದು ನಕ್ಕು ಮತ್ತೆ ನನ್ನ ಕಡೆ ನೋಡಿ ವಾಸು ನಿನ್ನ ಈ expression ನ ನೋಡೆ ಇಲ್ಲ ಕಣೊಅಂತ ಅಂದಾಗ ನನಗು ನಗು ಬಂದು ನಿನ್ನ ಕಡೆ ನೋಡಿ ನಾನು ನಕ್ಕೆ ಆಹಾ!!! ಎಂತಹ ಪುಟ್ಟ ಕನಸು ಆದರೆ ಯಾಕೆ ದೇವಕಿ? ಯಾಕೆ ಹೀಗೆ ಮಾಡ್ದೆ? ಪುಟ್ಟ ಪುಟ್ಟಿಯರ sslc exam result ನೋಡಿ ಯಾವ ಕಾಲೇಜಿನ ಸೀಟೂ ಅಂತ ನಾವು ಅಳೆದು ಸುರಿದು ಹುಡುಕಿ puc ಗೆ scienceಅ Artsಆ commerceಅ ಅಂತ ಪ್ರಶ್ನೆ ಬಂದಾಗ science ತಗೊಂಡು mbbs ಮಾಡ್ರೋ ಅಂತ ನೀನು ಹೇಳೋದು, ನಾನು ಕೆಲ್ಸ ಸಿಗಲ್ಲ ಬೇರೆ ಯಾವುದಾದ್ರು ತಗೊಳ್ರೊ ಅಂತ ನಾನು ನೀನು ಯೋಚ್ನೆ ಮಾಡ್ತಿರ್ಬೇಕಾದ್ರೆ ನಮ್ಮಿಬ್ಬರ ಆಸೆಗು ಮೀರಿ ಅವರು ಬೇರ್ಯಾವುದೊ ದಾರಿ ಆರಿಸಿಕೊಂಡಾಗ ರೇಗ ಬೇಕೆಂದುಕೊಂಡಿದ್ದ ನನಗೆ ಸಮಾಧಾನ ಹೇಳಿ ಹಕ್ಕಿಗಳಿಗೆ ಸ್ವತಂತ್ರಕೊಟ್ರೇನೆ ಆಕಾಶದ ಅಳತೆ ಗೊತ್ತಾಗೋದು ಅಲ್ವ ವಾಸು ಅಂತ ಅಂದಾಗ ಅವ್ರು ಯಾರ್ನಾದ್ರು ಪ್ರೀತ್ಸಿದ್ರೆ ಬೇಗ ಮದ್ವೆ ಮಾಡ್ಬಿಡೋಣ ಅಂದು ನಾಚಿದ್ದೆ ನೀನು
ಯಾಕ್ ಹೀಗ್ ಮಾಡ್ದೆ?
ಹಳೆಬೀಡಿನ ಸಂತೆ ನೆನಪಿಸ್ದೆ,ಜಾತ್ರೆ ನೆನಪಿಸ್ದೆ ಜಾತ್ರೆ ಯಲ್ಲಿ ಬರುವ ಥೇರನ್ನ ಎಳೆಯಲು ಆ ತುಂಬಿದ ಜನರ ನಡುವೆ ನುಗ್ಗಿ ಅದನ್ನ ನನ್ನ ಜೊತೆಯಲ್ಲೆ ಎಳೆಯಬೇಕು ಅಂದಾಗ...
ಸಂಜೆವರ್ಗು ಸಂತೆ ಸುತ್ತಿ ಬಳೆ ಬೊಟ್ಟೂ ಬಾಚಣಿಗೆ ಕವಡೆ ಮಣಿಸರ, ಎಲ್ಲ ತಗೊಂಡು ಕಾಡು ಹರಟೆ ಹೊಡ್ದು, ರಾತ್ರಿ ಅಮ್ಮ ಮಾಡಿದ ಬಿಸಿ ಬಿಸಿ ಸಿಹಿ ಪೊಂಗಲ್ ತಿಂದು ನನಗೂ ತಿನಿಸಿ ನಿನ್ನ ಎದೆಯ ಗೋಡಲ್ಲಿ ಬೆಚ್ಚನೆ ಅಪ್ಪುಗೆಯ ಆ ಸಿಹಿ ನೆದ್ರೆಯ ಕನಸು!!! ದೇವಕಿ please ನಾನು ಅತ್ತು ಅತ್ತು ಕಣ್ಣೀರೇ ಮುಗಿಸಿದ್ದೇನೆ ನೀನು ನನಗೆ ಕನಸುಗಳನ್ನ ಕೊಡಬಾರದಿತ್ತು ಯಾಕೆ ದೇವಕಿ ನಮ್ಮ ಕನಸುಗಳನ್ನ ಮರೀಚಿಕೆ ಮಾಡ್ಬಿಟ್ಟೆ... ಜೀವ ಚಿಲುಮೆ ನೀನು... ಯಾಕೆ ಹೀಗೆ...? ದುಃಖ ಉಮ್ಮಳಿಸಿ ಬರುತ್ತಿದ್ದೆ ನಿನ್ನ ಕನಸುಗಳೊಟ್ಟಿಗೆ ನನ್ನನ್ನ track suit ಹಾಕಿ competetion ಗೆ ನಿಲ್ಲಿಸಿಬಿಟ್ಟೆ, ಮುಕ್ತಾಯದ ಗೆರೆಯಲ್ಲಿ ನೀನು ನಿಂತ್ತಿದ್ದೆ ನಿನ್ನ ತಲುಪಲು ಓಡಿದ್ದೆ ಓಡಿದ್ದು ,ಓಡಿದ್ದೆ ಓಡಿದ್ದು, ಓಡಿದ್ದೆ ಓಡಿದ್ದು ಎಗರಿ ಬಿದ್ದು ಗಾಯ ಮಾಡ್ಕೊಂಡು, ಕಣ್ಣೀರು ತೊಟ್ಟಿಕ್ಕೊ ತನಕ ಆ ನೋವಿನ ಎಚ್ಚರದಲ್ಲಿ ತಿರುಗಿ ನೋಡಿದಾಗ ನೀನು ಆರಂಬದ ಗೆರೆಯಲ್ಲು ಇರಲಿಲ್ಲ, ಅಂತ್ಯದಲ್ಲು ಇಲ್ಲ ಎಲ್ಲೋ ದೂರದಲ್ಲಿ ಯಾರದೋ ಜೊತೆ ಐಸ್ ಕ್ಯಾಂಡಿ ತಿನ್ನುತ್ತಿದ್ದೆ ನಿನ್ನ ಆ ಬೆಚ್ಚನೆಯ ಮುಖವನ್ನ ನನ್ನ ಗೂಡಿನಿಂದ ಯಾಕೆ ದೂರ ಮಾಡ್ದೆ????!!!!! ನನಗು ಅಮೇರಿಕ ಬೇಕಿರಲಿಲ್ಲ ನಮ್ಮ ಕನಸಿಗೆ ಒತ್ತಾಗ್ಲೀಂತ ಬೇಗ ನನಸಾಗ್ಲೀಂತ ಹೋಗಿದ್ದು ಇದು ತಪ್ಪೊಪ್ಪಿಗೆ ಅಲ್ಲ ಕನಸುಗಳ ಬಾಗಿನ ನನಗು ಸೇರಿದಲ್ಲವ ಅದಕ್ಕೆ ನನ್ನದು ಒಂದು ಹಣ್ಣು ಎಲೆ ಅಡಿಕೆ ಅಕ್ಕಿ ಬೇಕಲ್ವ ನಿಂಗೊತ್ತಾ ಜೋರಾಗಿ ಬಂದು ನಿಂತ ಮಳೆಯನ್ನ ಕುಡಿದ ಮಣ್ಣಿನ ವಾಸನೆಯ ಜೊತೆಗೆ ನಿನ್ನೊಟ್ಟಿಗೆ ಕೂತು ಬಾಳೆಕಾಯಿ ಬಜ್ಜಿ ತಿನ್ನುತ್ತಾ ಕಾಫಿ ಕುಡಿಯುವ ಆ ಕನಸನ್ನ ಏನು ಮಾಡಲಿ ಹೇಳು please please

1 comment:

  1. ತಂತಿಹರಿದರೂ
    ಆ ವೀಣೆ ಇಹುದಲ್ಲ..
    ಹೊಸತಂತಿ ಜೋಡಿಸಿ
    ನುದಿಸಬಹುದಲ್ಲ..
    ಹೋಗಿರುವ ವೈಣಿಕಳು
    ಬಾರದೇ ಇರಳು..
    ಅಲ್ಲಿಯತನಕ ನೀ
    ತಾಳು..ತಾಳು...

    ಕಡುವಾ ಕನಸಿಂದ
    ಸ್ಫೂರ್ತಿ ಪಡೆ ನೀನು..
    ಚಿಂತೆಯಾ ಸುಳಿಯಿಂದ
    ಆಚೆಬಾ ನೀನು..
    ಆಸೆಗೂ ಕನಸಿಗೂ
    ಮಿತಿಯೆಂಬುದಿಲ್ಲ..
    ನಿಷ್ಕಲ್ಮಶ ಪ್ರೀತಿಗೆ
    ಸೊಲೇ ಇಲ್ಲ..

    ReplyDelete