ಆ ಊರಿನ ಹೆಸರು ಪ್ರೀತಿ ಹೂಬನ.ಅಲ್ಲಿರುವ ರಾಜಮಾರ್ಗದ ಹೆಸರು ಮಕರಂದ. ಇಲ್ಲಿ ನಡೆದಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ವಿಶ್ವಾಸ,ಸಹನೆ ಮತ್ತು ಪರಸ್ಪರ ಗೌರವದ ಪ್ರಮಾಣ ಪತ್ರ ಬೇಕು. ಇತಿಮಿತಿಯ ಚೌಕಟ್ಟಿನೊಳಗೆ ಬದುಕುವವರಿಗೆ ಇದು ದೂರತೀರ...ಸೇತುವೆಯೂ ಇಲ್ಲದ ಕಲ್ಪನಾ ತೋಟ. ಈ ಹೂಬನದಲ್ಲಿ ಯಾರಿಗೂ ಯಾರ ತಂಟೆಯೂ ಇಲ್ಲ .. ಅಲ್ಲಿರುವಾಗ ಬೇರೆಯವರು ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ. ಹೂಬನ ತನ್ನ ಜಾಲದೊಳಗೆ ಸೆಳೆದುಕೊಂಡು ಮೆಚ್ಚಿದ ಎರಡು ಹೃದಯಗಳಿಗೆ ಇಂಪು ಕಂಪಿನ ಲಾಲಿ ಹಾಡುತ್ತದೆ.
ದೇವಕೀ....ನಾವೂ ಈ ಹೂಬನದಲ್ಲಿ ಕೊನೆಯ ತನಕ ಉಸಿರಾಡೋ ಉಸಿರನ್ನ ಕಳೆಯಬೇಕೆಂದುಕೊಂಡಿದ್ವಿ ಅಲ್ವಾ...? ಹೂಬನಕ್ಕೂ ಗೊತ್ತಾಗದೆ...ಆದರೆ ದುತ್ತನೆ ಎದುರಾಗಿದ್ದು ಆಷಾಡ.ಆಷಾಡದ ಮುಗಿಲು, ಆಷಾಡದ ಗಲುಗತ್ತಲು ...ಲವಲವಿಕೆಯನ್ನೇ ಹೆಪ್ಪುಗಟ್ಟಿಸುತ್ತದೆ. ಈ ತಿಂಗಳಿಗೆ ಅದ್ಯಾಕೋ ಒಳ್ಳೆಯದನ್ನು ಅರಗಿಸಿಕೊಳ್ಳೋ ಉಧಾರತೆಯೇ ಇಲ್ಲವೇನೋ ಅನ್ನುವ ಹಾಗೆ ವರ್ತಿಸುತ್ತದೆ. ನನ್ನ ಮತ್ತು ದೇವಕಿಯ ಮದ್ಯೆ ಲಕ್ಷಣ ರೇಖೆಯನ್ನು ಎಳೆದುಬಿಡ್ತು... ಇಲ್ಲ ಅದು ನನಗೆ ಗೊತ್ತಾಗಲು ಆಷಾಡವೇ ಬೇಕಾಯ್ತೋ ಏನೋ.. ನಾನು ಈ ಹೂಬನದಿಂದ ಚದುರೋದಿಲ್ಲ ಅಂತ ಮಂಡಿಯೂರಿ ಕಾಯ್ತ ಕೂತಿರ್ತೀನಿ.ನನ್ನ ಎದೆಗಂಟಿದ ನೋವಿಗೆ ಹಸಿರಿಂದ ಮುಕ್ತವಾದ ಕೆಂಪೆಲೆಗಳು ತಿರುತಿರುಗಿ ಉದುರುತ್ತಿವೆ ನಿನಗೆ ನಾವು ಸಂಗಾತಿಯಾಗಲೇ ಎಂದು . ಆ ಎಲೆ ಉದುರಿದ ಮರಗಳಲ್ಲಿ ಚಿಗುರು ಮೂಡೋವರೆಗೂ ನಾನು ಕದಲಲ್ಲ...
ನಾನು ಅಮೇರಿಕಾಗೆ ಹೊರಟು ನಿಂತಾಗ ಇನ್ನೂ ನೆನಪಿದೆ ದೇವಕೀ...
ಪಯಣಿಸುವ ವೇಳೆಯಲಿ
ಬಂದು ಅಡಿಗೆರಗಿಮುಂದೆ
ನಿಂದಳು ನನ್ನ ಕೈಹಿಡಿದ ಹುಡುಗಿ.
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು.
ಅದೆಷ್ಟು ಹೊತ್ತು ಮೌನವಾಗಿ ನಿಂತಿದ್ವೊ.. ದೂರಕ್ಕೆ ದೃಷ್ಟಿ ಹರಿಸಿ ಅಲ್ಲೇ ಕರಗಿ ಹೋದ್ವೇನೋ ಅನ್ನುತ್ತಿರುವಾಗಲೇ ಎಚ್ಚರಿಸುವ ಸುನೀತಾಳ ಮಾತುಗಳಿಂದ ಮತ್ತೆ ಮತ್ತೆ ನಮ್ಮನ್ನ ನಾವೆಷ್ಟು ಸರ್ತಿ ನೋಡ್ಕೊಂಡ್ವೋ.. ಅಂಗೈ ಅಂಗೈ ಬಿಗಿದು.. ಸವರಿ.. ಕೊಟ್ಟುಕೊಂಡ ಭಾಷೆಗಳೆಷ್ಟೋ.. ಅಷ್ಟು ಹೊತ್ತಿನ ಮೌನದಲ್ಲಿ ಬರೆದುಕೊಂಡ ಭವಿಷ್ಯಗಳೆಷ್ಟೋ..ಅದೆಷ್ಟು ಸರ್ತಿ ಹೆಜ್ಜೆ ಮುಂದೆ ಇಟ್ಟು ನಿನ್ನ ಮತ್ತೆ ಮತ್ತೆ ಹಿಂತಿರುಗಿ ನೋಡಿದಾಗ ತುಂಬಿದ ಕಣ್ಣಿನ ಆ ನಿನ್ನ ಪ್ರೀತಿಯನ್ನ ಬಿಟ್ಟು ಹೊರಡಲು ನನ್ನ ಕಾಲಿಗೆಷ್ಟು ಬಲವಂತ ಮಾಡಿದೆನೋ.. ನಾನು ಹಾಗೆ ಮಾಡಿದಾಗಲೆಲ್ಲ ನೀನು ಬಲವಂತಕ್ಕೆ ನಗುತ್ತಿದ್ದೆ.. ಆ ನಗುವಿನಲ್ಲಿ ನೀನು ನನಗೆ ಮಗುವಾಗಿ ಕಾಣುತ್ತಿದ್ದೆ.
ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ,
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ,
ವೇಣಿಯಿರಲು ವಸಂತ ಪುಷ್ಪವನದಂತೆ,
ಮನಸು ಬಾರದು ಎನಗೆ ಅಡಿಯನಿಡೆ ಮುಂದೆ
ದೇವಕಿ ನೀನು ನನ್ನನ್ನು ಅಂದು ಕಳಿಸಿಕೊಡುವಾಗಿನ ಕಣ್ಣೀರಿನ ಅರ್ಥ ಇಂದಿನ ನಿನ್ನ ಈ ಸ್ಥಿತಿಯೇ? ನಾನು ಹೋಗುವಾಗ ಬಲವಂತವಾಗಿ ತಡೆದುಕೊಂಡ ದುಃಖದ ನಿಟ್ಟುಸಿರಿನ ಕೊನೆ ಇವತ್ತಿನ ನನ್ನ ಈ ಸ್ಥಿತಿಯೇ? ಅಂದು ಬಿಗಿದಪ್ಪಿದ ನಮ್ಮ ಅಂಗೈಗಳು ಕೊಟ್ಟ ಭಾಷೆಗಳಿಗೆ ಈ ತೀರ್ಮಾನ ನ್ಯಾಯ ಸಮ್ಮತವೇ.. ಈ ಪ್ರೀತಿ ಹೂಬನದ ದಾರಿ ತೋರಿಸಿದವಳು ನೀನೆ ಅಲ್ವಾ..
ನೀನು ಇವತ್ತು ಇಲ್ಲಿರದೇ ಇರಬಹುದು.. ಹಾಗಂತ ನಾನು ಇಲ್ಲಿಂದ ಕದಲುವುದು ಸಾಧ್ಯವಿಲ್ಲ ರಚ್ಚೆ ಹಿಡಿವ ಕಾಲುಗಳು ನೀನಿಲ್ಲದೆ ಹೆಜ್ಜೆ ಇಡಲೂ ಸಹಕರಿಸುತ್ತಿಲ್ಲ... ಇಲ್ಲಿಂದಾಚೆಗಿನ ಜಗತ್ತು ಕತ್ತಲಾಗಿ ಕಾಣಿಸಿಕೊಳ್ಳುತ್ತಿದೆ. ಹೂಬನವೂ ಬರಿದಾಗೆ ಕಾಣಿಸುತ್ತಿದೆ. ಬ್ರಹ್ಮ ಕಮಲದ ಗಿಡ ಒಂದನ್ನು ಬಿಟ್ಟು. ಅದು ಯಾವತ್ತು ಅರಳುವುದೋ........ಕಾಯುತ್ತೇನೆ.
ಬ್ರಹ್ಮ ಕಮಲ ಅರಳುವಾಗ ಎಲ್ಲಾ ದೇವತೆಗಳು ಅಲ್ಲಿ ಸೇರುವರಂತೆ, ಆಗಲಾದರೂ ವರಸಿಕ್ಕಿ ಈ ವಾಸು ಶಾಪಮುಕ್ತನಾಗುವನೋ ನೋಡೋಣ..... ತೋಚಿದ್ದನ್ನ ಹೇಳಿಕೊಂಡಿದ್ದೇನೆ.. ಮತ್ತೆ ಪ್ರಶ್ನೆಯೊಂದು ಕಾಡುತ್ತಿದೆ . ಕತ್ತಲನ್ನು ಸತ್ಯಕ್ಕೂ ರಾತ್ರಿಯನ್ನ ಮಿಥ್ಯಕ್ಕೂ ಹೋಲಿಸುತ್ತಾರೆ..ಆದರೇ ನೀನು ಅರಳುವುದೇ ರಾತ್ರಿ ಅಂದರೆ ವಾಸು ಕಡೆಗಿದ್ದ ನಿನ್ನ ಪ್ರೀತಿ ಪ್ರಶ್ನೆ ಮಾಡುವಂತದ್ದಾ.....? ಪ್ರಶ್ನೆ ಮಾಡ್ಲಾ.....?
ಆದ್ರೆ ನಿನ್ನ ಮುಗ್ಧ ಮುಖ ಕಾಣಿಸುತ್ತೆ ...
ಅಳು ಬರುತ್ತೆ.
Subscribe to:
Post Comments (Atom)
ಆ ಊರಿನ ಹೆಸರು ಪ್ರೀತಿ ಹೂಬನ.ಅಲ್ಲಿರುವ ರಾಜಮಾರ್ಗದ ಹೆಸರು ಮಕರಂದ. ಇಲ್ಲಿ ನಡೆದಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ವಿಶ್ವಾಸ,ಸಹನೆ ಮತ್ತು ಪರಸ್ಪರ ಗೌರವದ ಪ್ರಮಾಣ ಪತ್ರ ಬೇಕು
ReplyDeletetumba chanda ide nim baraha vaasu
vaasu give me your phn num please.....
ReplyDeletebhavachitra@gmail.com plz send your num
bhaavana
enu ibbaru serial mugida takshana reply maadiro haagide?
ReplyDeletetumba chennagide. joogula is my favourite serial.
ReplyDeleteJeevana elkond hogid kade ela eshta eddo eldaleno hogtide nam badku........khushi ede dukha erad hidi jaasti ede ....namig bekadavru nam preetipaatradavr jothe nam badku ha ha ha.......yarooooo kaanade eror kaivada ede alva??????
ReplyDeleteu r good actor vasu....keep acting like this, try to move to movie also
ReplyDeleteu r good actor vasu....keep acting like this, try to move to movie also
ReplyDeletevasu devaki nenge sigabeku
ReplyDeletevasu devaki yavathu nenhavale
ReplyDeletetumba chennagede jogula serial.
ReplyDeletethumba chennagide jogula serial.
ReplyDeletePRITHIYA HONGANCINA KANACINALI TELADUVA HAGITHE E NIMMA SERIAL.PRITHISUVAVARIGE IDU ONDU SATYA SANGATHIYA KATHE YAGIDE.BEST WISHES OF YOURES.
ReplyDelete